ಉಡುಪಿ: ಭಾರೀ ವಿವಾದ ಸೃಷ್ಟಿಸಿರುವ ಸಮವಸ್ತ್ರ ಸಂಘರ್ಷದಿಂದ ನಮ್ಮನ್ನು ಮುಕ್ತಿಗೊಳಿಸಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯೂಸ್ಫಸ್ಟ್ನ ಜೊತೆ ಮಾತನಾಡಿದ ವಿದ್ಯಾರ್ಥಿನಿಯರು, ನಾವು ಈ ಮೊದಲು ಕಾಲೇಜ್ಗೆ ಹಿಜಾಬ್ ಧರಿಸಿಯೇ ಬರುತ್ತಿದ್ದೆವು. ಆಗಿಲ್ಲದ ಸಮಸ್ಯೆ ಇದೀಗ ದಿಢೀರ್ನೆ ಏಕೆ ಬಂತು? ಈ ಸಂಘರ್ಷದಿಂದ ನಾವು ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ. ಸದ್ಯದಲ್ಲೇ ಪರೀಕ್ಷೆಯಿದೆ. ಇದರ ಮೇಲೆ ನಮಗೆ ಫೋಕಸ್ ಮಾಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.