
ಚಿಕ್ಕ ವಯಸ್ಸಲ್ಲೆ RSS ಪ್ರಚಾರಕನಾಗಿ ಸಮಾಜಮುಖಿಯಾದ ನರೇಂದ್ರ ಮೋದಿ, ಮುಂದೆ ದೇಶ ಸೇವೆಯಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ!
PM Narendra Modi: ಗುಜರಾತಿನಲ್ಲಿ ಪಕ್ಷವನ್ನು ಸ್ಥಾಪಿಸಿದ ವಸಂತ ಗಜೇಂದ್ರ ಗಡ್ಕರ್ ಮತ್ತು ನಾಥಲಾಲ್ ಜಘ್ದಾ ಎಂಬಿಬ್ಬರು ಜನಸಂಘದ ನಾಯಕರ ಆಶ್ರಯದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕತ್ವ ಲಕ್ಷಣಗಳನ್ನು ಮೈಗೂಡಿಸಿಕೊಂಡರು. 1987ರ ವೇಳೆಗೆ ಜನಸಂಘ/ ಆರ್ ಎಸ್ ಎಸ್ ಮೋದಿಯನ್ನು ಬಿಜೆಪಿ ಮೂಲಕ ಸಕ್ರಿಯ ರಾಜಕಾರಣಕ್ಕೆ ಎಳೆತಂದಿತು.
ಮಹಾದೇವನ ಕ್ಷೇತ್ರವಾದ ವಾರಾಣಾಸಿಯ (Varanasi) ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನರೇಂದ್ರ ದಾಮೋದರದಾಸ್ ಮೋದಿ ಪ್ರಧಾನ ಮಂತ್ರಿಯಾಗಿ ಭಾರತ ದೇಶವನ್ನೂ ಯಶಸ್ವಿಯಾಗಿ ಪ್ರತಿನಿಧಿಸುತ್ತಿದ್ದಾರೆ. ಮೋದಿ, ಭಾರತೀಯ ಜನತಾ ಪಕ್ಷದ ಅತ್ಯಂತ ಸಕ್ರಿಯ ಸದಸ್ಯರೂ ಹೌದು. ವಾರಾಣಅಸಿ-ಪ್ರಧಾನಿ-ಬಿಜೆಪಿ ಈ ಪದಪುಂಜಗಳಿಂದ ನರೇಂದ್ರ ಮೋದಿ (Prime Minister Narendra Modi) ಅವರ ರಾಜಕೀಯ ಕಥನ ಆರಂಭಿಸಬೇಕಾದರೆ ಅವರ ಮೂಲವನ್ನು ಆಮೂಲಾಗ್ರವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಾಗುತ್ತದೆ. ಗುಜರಾತಿನ ಮುಖ್ಯಮಂತ್ರಿಯಾಗಿ 4 ಬಾರಿ ಆ ರಾಜ್ಯವನ್ನು ಮುನ್ನಡೆಸಿದ್ದ ಮೋದಿ, ಆಡಳಿತಾರೂಢ ಬಿಜೆಪಿ ಪಕ್ಷದ ಮಾಸ್ಟರ್ ಸ್ಟ್ರಾಟೆಜಿಸ್ಟ್ ಎಂದೇ ಹೇಳಬಹುದು (8 Years Of Modi Government).
ಅಮ್ಮ ಹೀರಾಬೆನ್ ಮೋದಿ ಅವರ ಊರಾದ ಗುಜರಾತಿನ ಮೆಹಸಾಣಾ ಜಿಲ್ಲೆಯ ವಾಡನಗರದಲ್ಲಿ (ಸೆಪ್ಟೆಂಬರ್ 17, 1950) ಜನಿಸಿದ ಮೋದಿ ಎಳೆಯ ಮಗುವಾಗಿದ್ದ ಕಾಲದಿಂದಲೂ ಜೀವನದುದ್ದಕ್ಕೂ ಕಷ್ಟಗಳನ್ನು ದಾಟಿ ಬಂದವರೇ. ಅಮ್ಮನ ಊರಲ್ಲಿಯೇ ಶಾಲಾ ವಿದ್ಯಾಭ್ಯಾಸ ಮಾಡಿದ ಮೋದಿ ಸಾಮಾನ್ಯ ಬುದ್ಧಿಮತ್ತೆಯ ವಿದ್ಯಾರ್ಥಿಯಾಗಿದ್ದ ಆದರೆ ಚತುರ ಚರ್ಚಾಪಟು ಆಗಿದ್ದ. ಶಾಲಾ ವಿದ್ಯಾಭ್ಯಾಸ ದಾಟುತ್ತಿದ್ದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh -RSS pracharak) ಪ್ರಚಾರಕ್ ಆಗಿ ಸಮಾಜಮುಖಿಯಾದರು.
ತುಂಬು ಹದಿಹರೆಯದಲ್ಲಿ ಮನೆ ಬಿಟ್ಟು, ದೇಶ ಸುತ್ತ ತೊಡಗಿದ ಮೋದಿ 90ರ ದಶಕದಲ್ಲಿ ದೆಹಲಿ ಪ್ರವೇಶಿಸಿ, ಬಿಜೆಪಿ ಅಧಿಕೃತ ವಕ್ತಾರರಾದರು. ನರೇಂದ್ರ ಮೋದಿ ಅವರಲ್ಲಿರುವ ಅಗಾಧ ಎದೆ ಛಾತಿ, ಅದಮ್ಯ ಉತ್ಸಾಹ ಅವರನ್ನು ರಾಜಕೀಯ ಪಡಸಾಲೆಯಲ್ಲಿ ಮುನ್ನುಗ್ಗುವಂತೆ ಮಾಡಿತು. ಈ ಮಧ್ಯೆ ಅವರು ಆರ್ ಎಸ್ ಎಸ್ ಪ್ರಚಾರಕರಾಗಿ ಸಂಕಷ್ಟಕ್ಕೆ ಸಿಲುಕಿದ ಜನರ ಕೈಹಿಡಿದರು. ಮುಂದೆ ಆರ್ ಎಸ್ ಎಸ್ ಪ್ರಧಾನ ಕಚೇರಿ ನಾಗಪುರ ತಲುಪಿದರು. ಅಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚುಕ್ಕಾಣಿ ಹಿಡಿಯುವಂತೆ ಮೋದಿಗೆ ಸೂಚಿಸಲಾಯಿತು. ಅದೇ ಕಾಲದಲ್ಲಿ ದೇಶದಲ್ಲಿ ಧುತ್ತನೆ ಎದುರಾಗಿದ್ದು ತುರ್ತು ಪರಿಸ್ಥಿತಿ.