ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳುವುದಾಗಿ ವಿರಾಟ್ ಕೊಹ್ಲಿ ಈಗಾಗಲೇ ಘೋಷಿಸಿದ್ದಾರೆ. ಹಾಗಾಗಿ ಈಗ ವಿರಾಟ್ ಬಳಿಕ ಆರ್ಸಿಬಿ ಮುಂದಿನ ನಾಯಕ ಯಾರು? ಎಂಬ ಚರ್ಚೆ ಜೋರಾಗಿದೆ. ನಾಯಕತ್ವ ರೇಸ್ನಲ್ಲಿ ಹಲವು ಆಟಗಾರರ ಹೆಸರು ಕೇಳಿ ಬರುತ್ತಿದೆ.
ಇನ್ನು, ಆರ್ಸಿಬಿ ಮುಂದಿನ ನಾಯಕ ಸ್ಥಾನಕ್ಕೆ ಪ್ರಮುಖವಾಗಿ ತಂಡದ ಅನುಭವಿ ಆಟಗಾರ ಮಿಸ್ಟರ್ 360 ಬ್ಯಾಟ್ಸ್ಮ್ಯಾನ್ ಖ್ಯಾತಿಯ ಎಬಿಡಿ ವಿಲಿಯರ್ಸ್ ಹೆಸರು ಕೇಳಿ ಬರುತ್ತಿದೆ. ಇವರೊಂದಿಗೆ ಯಜುವೇಂದ್ರ ಚಹಲ್, ಗ್ಲೇನ್ ಮ್ಯಾಕ್ಸ್ವೆಲ್ ಹೆಸರು ಕೂಡ ಚಾಲ್ತಿಯಲ್ಲಿದೆ. ಕನ್ನಡಿ ಕೆ.ಎಲ್ ರಾಹುಲ್ ಹೆಸರು ಕೂಡ ರೇಸ್ನಲ್ಲಿದೆ.
ಈಗ ತಂಡದ ಯುವ ಆಟಗಾರ ಕನ್ನಡಿಗ ದೇವದತ್ ಪಡಿಕ್ಕಲ್ಗೆ ನಾಯಕತ್ವ ಪಟ್ಟ ಕಟ್ಟಲು ಆರ್ಸಿಬಿ ತಂಡ ಚಿಂತಿಸಿದೆ ಎನ್ನಲಾಗುತ್ತಿದೆ. ಆರ್ಸಿಬಿಯ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಸಣ್ಣ ವಯಸ್ಸು, ಯುವ ಆಟಗಾರರ. ಹಾಗಾಗಿ ಆರ್ಸಿಬಿಯ ಭವಿಷ್ಯದ ಬಗ್ಗೆ ಗಮನಿಸಿದರೆ ಪಡಿಕ್ಕಲ್ ಉತ್ತಮ ಆಯ್ಕೆ ಎಂಬುದು ಆರ್ಸಿಬಿ ಪ್ರಾಂಚೈಸಿ ಆಲೋಚನೆಯಂತೆ.