ದಕ್ಷಿಣ ಕನ್ನಡ: ನವ ಮಂಗಳೂರು ಬಳಿಯ ಕರಾವಳಿ ಪ್ರದೇಶದಲ್ಲಿ ಮೀನುಗಾರರ ದೋಣಿಯೊಂದು ಹಡಗಿಗೆ ಡಿಕ್ಕಿಹೊಡೆದ ಪರಿಣಾಮ 12 ಮೀನುಗಾರರು ಕಾಣೆಯಾಗಿರುವ ಘಟನೆ ನಡೆದಿದೆ.
ಮೀನುಗಾರರ ದೋಣಿಯು ಕೇರಳದ ಕೋಳಿಕೋಡ್ ಜಿಲ್ಲೆಯಿಂದ ಮಂಗಳೂರಿಗೆ ಬರುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಬಂದು ನಾಪತ್ತೆಯಾದವರಿಗಾಗಿ ಶೋಧ ನಡೆಸಿದ್ದಾರೆ. ಒಟ್ಟು 14 ಮಂದಿ ಮೀನುಗಾರರು ನಾಪತ್ತೆಯಾಗಿದ್ದರು ಎನ್ನಲಾಗಿದ್ದು ಈ ಪೈಕಿ ಇಬ್ಬರು ಪತ್ತೆಯಾಗಿದ್ದು ಉಳಿದ 12 ಜನರಿಗೆ ಶೋಧ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ. ಇನ್ನು ದೋಣಿಗೆ ಡಿಕ್ಕಿಯಾದ ಹಡಗು ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ.
In a swift sea-air #SAR operation @IndiaCoastGuard deployed 03 #ICG ships & aircraft to search for 14 fishermen of IFB ‘Rabah’ approx 43 NM west #NewMangalore #today. 02 crew found, search for other crew in progress.@DefenceMinIndia @Min_FAHD @shipmin_india @SpokespersonMoD
— Indian Coast Guard (@IndiaCoastGuard) April 13, 2021
The post ಹಡಗಿಗೆ ಡಿಕ್ಕಿಯೊಡೆದ ದೋಣಿ; 12 ಮಂದಿ ಮೀನುಗಾರರು ನಾಪತ್ತೆ appeared first on News First Kannada.
Source: News First Kannada
Read More