Category: Sports

  • ‘ಇನ್ನೂ 10 ವರ್ಷಗಳ ಕಾಲ ಕೊಹ್ಲಿಯನ್ನ ಯಾರೂ ಟಚ್​ ಮಾಡೋಕಾಗಲ್ಲ’

    ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನ ಇನ್ನು ಹತ್ತು ವರ್ಷಗಳ ಕಾಲ ಯಾರು ಟಚ್ ಮಾಡೋಕೆ ಆಗಲ್ಲ ಮಾಜಿ ಕ್ರಿಕೆಟಿಗ ಅನ್ಷುಮನ್ ಗಾಯಕ್ವಾಡ್ ಅಭಿಪ್ರಾಯಟ್ಟಿದ್ದಾರೆ. ವಿರಾಟ್​ ಕೊಹ್ಲಿ ಫಿಟ್​ನೆಸ್​ ನೋಡಿದ್ರೆ ಅವರು ಇನ್ನೂ ಒಂದು ದಶಕ ಕ್ರಿಕೆಟ್​ ಆಡೋ ಸಾಧ್ಯತೆ ಇದೆ. ಅಲ್ಲದೇ ಸಚಿನ್ ತೆಂಡುಲ್ಕರ್​ರ 200 ಟೆಸ್ಟ್ ಪಂದ್ಯಗಳ ದಾಖಲೆಯನ್ನ ಕೊಹ್ಲಿ ಮುರಿದರೂ ಅಚ್ಚರಿ ಇಲ್ಲ ಎಂದಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಆಡುವ ಮೂಲಕ ವಿರಾಟ್ ಕೊಹ್ಲಿ, ಭಾರತದ ಪರ ಟೆಸ್ಟ್ […]

  • ‘ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡೋ ಮಿಷನ್ ಇಲ್ಲಿದೆ’- ‘ಗೆಟ್​ ರೆಡಿ’ ಅಂದಿದ್ಯಾಕೆ ರಶ್ಮಿಕಾ..?

    ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿ. ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಮೂವಿ ಪುಷ್ಪಾ ಸಕ್ಸಸ್ ಬಳಿಕವಂತೂ ರಶ್ಮಿಕಾ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಇನ್ನೊಂದೆಡೆ ದುಲ್ಕರ್ ಸಲ್ಮಾನ್ ಅಭಿನಯದ ಮಲಯಾಳಂ ಸಿನಿಮಾ ಮತ್ತು ಬಾಲಿವುಡ್ ಸೇರಿದಂತೆ ತಮಿಳಿನಲ್ಲೂ ಬ್ಯುಸಿಯಾಗಿದ್ದಾರೆ ರಶ್ಮಿಕಾ. ಈಗ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಮಿಷನ್ ಮಜ್ನು ಎಂಬ ಸಿನಿಮಾದಲ್ಲೂ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇನ್ನೇನು, ರಶ್ಮಿಕಾ ಹಿಂದಿ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರೋ ರಶ್ಮಿಕಾ, […]

  • ರೋಹಿತ್​​​ ನಾಯಕತ್ವಕ್ಕೆ ಸುನಿಲ್​​ ಗವಾಸ್ಕರ್​​ ಕೊಟ್ಟ ಮಾರ್ಕ್ಸ್​ ಎಷ್ಟು ಗೊತ್ತಾ..?

    ಬ್ಯಾಟಿಂಗ್ ಲೆಜೆಂಡ್​​ ಸುನಿಲ್ ಗವಾಸ್ಕರ್ ಅವರು​ ರೋಹಿತ್ ಶರ್ಮಾರ ಟೆಸ್ಟ್​ ನಾಯಕತ್ವದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ಪಂದ್ಯದಲ್ಲೇ ರೋಹಿತ್​​ ತನ್ನ ಚಾಣಾಕ್ಷತನ ತೋರಿದ್ದಾರೆ ಎಂದು ಹೇಳಿದ್ದಾರೆ. ರೋಹಿತ್ ನಾಯಕನಾಗಿ ಅದ್ಭುತ ಪದಾರ್ಪಣೆ ಮಾಡಿದ್ದಾರೆ. ಒಬ್ಬ ಕ್ಯಾಪ್ಟನ್​​ 3 ದಿನಗಳ ಒಳಗೆ ಟೆಸ್ಟ್​ ಜಯಿಸಿದ್ರೆ, ಅದು ಆತನ ಶ್ರೇಷ್ಠತೆ ತೋರುತ್ತದೆ. ಅತಿ ಮುಖ್ಯವಾಗಿ ಭಾರತದ ಫೀಲ್ಡಿಂಗ್, ಬೌಲಿಂಗ್ ಬದಲಾವಣೆ ಅತ್ಯಾಕರ್ಷಕವಾಗಿತ್ತು ಎಂದರು. ಫೀಲ್ಡರ್​ ಎಲ್ಲಿ ನಿಲ್ಲುತ್ತಿದ್ದರೋ ಅಲ್ಲಿಗೆ ಕ್ಯಾಚ್‌ಗಳು​ ಹೋಗುತ್ತಿದ್ದವು. ಫೀಲ್ಡರ್​ಗಳು ಹೆಚ್ಚೇನೂ ಓಡುವ ಅಗತ್ಯವಿರಲಿಲ್ಲ. ಇದು ಕ್ಷೇತ್ರರಕ್ಷಣೆಯ […]

  • ನ್ಯೂಜಿಲೆಂಡ್​​​​ ಟೀಮ್​​ನಿಂದ IPL ಫ್ರಾಂಚೈಸಿಗಳಿಗೆ ಗುಡ್​​ನ್ಯೂಸ್​​.. ಏನದು?

    ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಟೂರ್ನಿ ಮಾರ್ಚ್ 26ನೇ ತಾರೀಕಿನಿಂದ ಆರಂಭವಾಗುತ್ತಿದೆ. ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ಕ್ರಿಕೆಟಿಗರು ಭಾಗವಹಿಸುತ್ತಾರಾ ಅಥವಾ ಇಲ್ಲವಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಐಪಿಎಲ್ ಟೂರ್ನಿ ಆರಂಭವಾಗುವ ಸಮಯದಲ್ಲಿ ನ್ಯೂಜಿಲೆಂಡ್ ಮತ್ತು ನೆದರ್‌ಲ್ಯಾಂಡ್ಸ್ ತಂಡಗಳ ನಡುವೆ 1 ಟಿ20 ಪಂದ್ಯ ಮತ್ತು 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಹೀಗಾಗಿ ನ್ಯೂಜಿಲೆಂಡ್ ಆಟಗಾರರ ಲಭ್ಯತೆ ಬಗ್ಗೆ ಅನುಮಾನ ಮೂಡಿತ್ತು. ಈ ಕುರಿತು ಮಾತನಾಡಿರುವ ನ್ಯೂಜಿಲೆಂಡ್ ಕೋಚ್ ಗ್ಯಾರಿ, ನ್ಯೂಜಿಲೆಂಡ್​ನ ಪ್ರಮುಖ ಆಟಗಾರರು ಐಪಿಎಲ್​ಗೆ […]

  • ದ್ರಾವಿಡ್​​ ಮೇಲೆ ಕೆಂಡಕಾರಿದ್ದ ವೃದ್ಧಿಮಾನ್ ಸಾಹ ವಿರುದ್ಧ ಕೇಳಿ ಬಂತು ಗಂಭೀರ ಆರೋಪ..!

    ಟೀಂ ಇಂಡಿಯಾ ಆಟಗಾರ ವೃದ್ಧಿಮಾನ್ ಸಾಹ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ವಾಟ್ಸಪ್​ ಸಂದೇಶಗಳ ಸ್ಕ್ರೀನ್‌ಶಾಟ್ಸ್​ ತಿರುಚಿ ಹಾಕಿದ್ದಾರೆ, ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಪತ್ರಕರ್ತ ಬೋರಿಯಾ ಮಜುಂದಾರ್ ಆರೋಪಿಸಿದ್ದಾರೆ. ಜತೆಗೆ ಸಾಹ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಪತ್ರಕರ್ತ ಬೋರಿಯಾ ಮಜುಂದಾರ್, ಕಥೆಗೆ ಯಾವಾಗಲೂ ಎರಡು ಆಯಾಮಗಳು ಇರುತ್ತವೆ. ಸಾಹ ನನ್ನ ವಾಟ್ಸಪ್​​ ಚಾಟ್​​ಗಳ ಸ್ಕ್ರೀನ್​ಶಾಟ್​​​ ತಿರುಚಿದ್ದಾರೆ. ಹೀಗಾಗಿ ಬಿಸಿಸಿಐ ಈ ಕುರಿತು […]

  • IPL ಆರಂಭಕ್ಕೂ ಮುನ್ನವೇ ಫ್ರಾಂಚೈಸಿಗಳಿಗೆ ಶಾಕ್​​ ಕೊಟ್ಟ ಬಿಸಿಸಿಐ..!

    ಇಂಡಿಯನ್​​ ಪ್ರೀಮಿಯರ್​ ಲೀಗ್​​ 2022 ಟೂರ್ನಿ ಕಪ್​​ ಗೆಲ್ಲೋಕೆ ಎಲ್ಲಾ ಫ್ರಾಂಚೈಸಿಗಳು ತಯಾರಿ ನಡೆಸಿಕೊಂಡಿವೆ. ಈ ನಡುವೆ ಐಪಿಎಲ್ ಪ್ರಾರಂಭಕ್ಕೂ ಮುನ್ನ ಅಭ್ಯಾಸ ಶಿಬಿರಗಳನ್ನು ಆಯೋಜಿಸಿರುವ ಫ್ರಾಂಚೈಸಿಗಳಿಗೆ ಬಿಸಿಸಿಐ ಅನಿರೀಕ್ಷಿತ ಶಾಕ್ ನೀಡಿದೆ. ಪ್ರಸ್ತುತ ಭಾರತೀಯ ಟೆಸ್ಟ್ ತಂಡದ ಸದಸ್ಯರನ್ನು ಹೊರತುಪಡಿಸಿ BCCIನ ಎಲ್ಲಾ ಗುತ್ತಿಗೆ ಮತ್ತು ಗುತ್ತಿಗೆ ರಹಿತ ರಾಷ್ಟ್ರೀಯ ಮಟ್ಟದ ಆಟಗಾರರು ಮಾರ್ಚ್ 6ರೊಳಗೆ, ರಣಜಿ ಆಟಗಾರರು ಮಾರ್ಚ್ 4ರೊಳಗೆ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ 10 ದಿನಗಳ ಫಿಟ್ನೆಸ್ ಶಿಬಿರಕ್ಕೆ ಹಾಜರಾಗುವಂತೆ ಸೂಚಿಸಿದೆ. […]

  • ಬರೋಬ್ಬರಿ 178 ರನ್​​ ಸಿಡಿಸಿದ ಪಡಿಕ್ಕಲ್.. ಪುದುಚೇರಿ ವಿರುದ್ಧ ಕರ್ನಾಟಕಕ್ಕೆ ಜಯ.. ಫೈನಲ್​​ಗೆ ಪ್ರವೇಶ

    ಪುದುಚೇರಿ ವಿರುದ್ಧ ಅಮೋಘ ಪ್ರದರ್ಶನ ತೋರಿದ ಕರ್ನಾಟಕ ತಂಡ ಇನ್ನಿಂಗ್ಸ್​ ಹಾಗೂ 20 ರನ್​ಗಳ ಜಯ ಸಾಧಿಸಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ ದೇವದತ್​ ಪಡಿಕ್ಕಲ್ 3ನೇ ವಿಕೆಟಿಗೆ ಬೃಹತ್​ ಮೊತ್ತ ಪೇರಿಸಿದ್ರು. ಮೊದಲ ದಿನದ ಅಂತ್ಯಕ್ಕೆ ಬರೋಬ್ಬರಿ 277 ಎಸೆತಗಳನ್ನ ಎದುರಿಸಿದ ಪಡಿಕ್ಕಲ್​ 161 ರನ್‌ ಗಳಿಸಿದ್ರು. ಎರಡನೇ ದಿನಕ್ಕೆ ಪಡಿಕ್ಕಲ್​​ 178, ನಾಯಕ ಮನೀಶ್ ಪಾಂಡೆ 107 ರನ್​​ಗಳ ನೆರವಿನಿಂದ 453 ರನ್​ಗಳಿಸಿ ಡಿಕ್ಲೇರ್ ಘೋಷಿಸಿತ್ತು. News First Live Kannada

  • ಬರೋಬ್ಬರಿ 20 ಬೌಂಡರಿ.. ಬ್ಯಾಕ್​​ ಟು ಬ್ಯಾಕ್ ಫೋರ್​​​.. ಯಶ್ ಧುಲ್​ 200 ರನ್​ ಬಾರಿಸಿದ್ದು ಹೀಗೆ..!

    ಯಶ್​​ ಧುಲ್​​ ಭಾರತ ಅಂಡರ್-19 ಕ್ರಿಕೆಟ್‌ ತಂಡದ ನಾಯಕ. ಇತ್ತೀಚೆಗೆ ತಮ್ಮ ನಾಯಕತ್ವದಲ್ಲಿ ಭಾರತವನ್ನು ಅಂಡರ್-19 ಕ್ರಿಕೆಟ್‌ನ ವಿಶ್ವ ಚಾಂಪಿಯನ್ ಆಗಿ ಮಾಡಿದವರು. 19 ವರ್ಷದ ಭಾರತೀಯ ಬ್ಯಾಟ್ಸ್‌ಮನ್ ಈಗ ತನ್ನ ಮೂರನೇ ರಣಜಿ ಟ್ರೋಫಿ ಪಂದ್ಯದಲ್ಲಿ ಡಬಲ್​ ಸೆಂಚೂರಿ ಬಾರಿಸಿದ್ದಾರೆ. ಈ ಮೂಲಕ ತನ್ನ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಛತ್ತೀಸ್‌ಗಢ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಪರ ಯಶ್​​ ಧುಲ್ ಕೇವಲ 261 ಎಸೆತಗಳಲ್ಲಿ 26 ಬೌಂಡರಿಗಳ ನೆರವಿನಿಂದ ಅಜೇಯ 200 ರನ್ ಗಳಿಸಿದರು. ಡೆಲ್ಲಿ ಪರ […]

  • ಬರೋಬ್ಬರಿ 175 ರನ್​​ ಬಾರಿಸಿದ್ದ ಜಡೇಜಾ.. ರೋಹಿತ್​​ ಡಿಕ್ಲೇರ್​​​ ಘೋಷಿಸಿದ್ದ ಬಗ್ಗೆ ಹೇಳಿದ್ದೇನು?

    ಶ್ರೀಲಂಕಾ ವಿರುದ್ದದ ಪಂದ್ಯದ ಮೊದಲ ಪಂದ್ಯದಲ್ಲಿ ಸ್ಟಾರ್​​ ಆಲ್​​​ರೌಂಡರ್​​ ರವೀಂದ್ರ ಜಡೇಜಾ ಅಜೇಯ 175 ರನ್ ಬಾರಿಸಿ ಅಬ್ಬರಿಸಿದರು. ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಾ 170 ರನ್​​​ ಬಾರಿಸಿದ್ದೇ ತಡ ಇನ್ನೇನು ಡಬಲ್​ ಸೆಂಚೂರಿ ಪಕ್ಕಾ ಆಗಿತ್ತು. ಆದರೆ, ರವೀಂದ್ರ ಜಡೇಜಾ 175 ರನ್ ಗಳಿಸಿದ್ದಾಗ ನಾಯಕ ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಿದರು. ಇದು ಜಡೇಜಾ ಫ್ಯಾನ್ಸ್​ ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ಈ ಬಗ್ಗೆ ಮಾತಾಡಿದ ರವೀಂದ್ರ ಜಡೇಜಾ ಡಿಕ್ಲೇರ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದು ನಾನೇ ಎಂದಿದ್ದಾರೆ. […]

  • #WorldCup ಕನ್ನಡತಿ ರಾಜೇಶ್ವರಿ ಮಾರಕ ದಾಳಿಗೆ ಪಾಕ್ ಉಡೀಸ್.. ಹೇಗಿತ್ತು ವನಿತೆಯರ ಶುಭಾರಂಭ..?

    ಐಸಿಸಿ ಮಹಿಳಾ ಏಕದಿನ ವಿಶ್ವಕಪ್​​​ನಲ್ಲಿ ಟೀಮ್​ ಇಂಡಿಯಾ ಶುಭಾರಂಭ ಮಾಡಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 107 ರನ್​​ಗಳಿಂದ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್​​​ ಮತ್ತು ಬೌಲಿಂಗ್​​​​ನಲ್ಲಿ ಆಲ್​ರೌಂಡ್​ ಪ್ರದರ್ಶನ ನೀಡಿದ ಭಾರತದ ವನಿತೆಯರು ಎದುರಾಳಿ ತಂಡವನ್ನ 137 ರನ್​​​​ಗಳಿಗೆ ಆಲ್​​ಔಟ್​ ಮಾಡಿದೆ. ಎಚ್ಚರಿಕೆಯ ಆಟವಾಡಿದ ಸ್ಮೃತಿಬ್ಯಾಟಿಂಗ್​ ಮತ್ತು ಬೌಲಿಂಗ್​​​ನಲ್ಲಿ ಬೊಂಬಾಟ್​ ಆಟವಾಡಿದ ದೀಪ್ತಿ ಶರ್ಮಾ, ಸ್ನೇಹ್​ ರಾಣಾ ತಂಡಕ್ಕೆ ಗೆಲುವಿನ ಕೊಡುಗೆ ನೀಡಿದ್ರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಭಾರತ ಸವಾಲಿನ […]

  • ODI ವಿಶ್ವಕಪ್: ಪೂಜಾ, ಸ್ಮೃತಿ, ರಾಣಾ ಆಕರ್ಷಕ ಅರ್ಧಶತಕ; ಪಾಕ್​ಗೆ ಬಿಗ್ ಟಾರ್ಗೆಟ್​

    ಮಹಿಳೆಯರ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್ ಕ್ರಿಕೆಟ್​ ಟೂರ್ನಿಯಲ್ಲಿ ಭಾರತ ಇಂದು ಪಾಕಿಸ್ತಾನಕ್ಕೆ 245 ರನ್​ಗಳ ಬಿಗ್​ ಟಾರ್ಗೆಟ್ ನೀಡಿದೆ.  ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡ ಭಾರತ 244 ರನ್​ಗಳನ್ನ ಕಲೆ ಹಾಕಿ ಬ್ಯಾಟಿಂಗ್ ಮುಗಿಸಿತು. ಮೌಂಟ್ ಮೌಂಗನುಯಿ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಟಾಸ್​​​​ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಇದರಂತೆ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಆರಂಭಿಕ ಅಘಾತ ಅನುಭವಿಸಿತು. ಈ ವೇಳೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ದೀಪ್ತಿ ಶರ್ಮಾ […]

  • ಅಜೇಯ 175 ರನ್ ಸಿಡಿಸಿದ ಜಡೇಜಾ.. ಯಾವೆಲ್ಲಾ ದಾಖಲೆಗಳು ಉಡೀಸ್ ಆದ್ವು ಗೊತ್ತಾ..?

    ಬೃಹತ್​ ಮೊತ್ತ ಪೇರಿಸಿದ ಟೀಮ್ ಇಂಡಿಯಾ ಸುಸ್ಥಿತಿಯಲ್ಲಿದೆ. ಅಲ್ಲದೆ ಮೊದಲ ಟೆಸ್ಟ್​ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಇದಕ್ಕೆಲ್ಲಾ ಕಾರಣ ರಾಕ್​ಸ್ಟಾರ್​ ಜಡ್ಡುರ ಕ್ರಿಕೆಟ್ ಕರಿಯರ್​​ನ ಜೀವನದ ಶ್ರೇಷ್ಠ ಆಟ. ಹಾಗಾದ್ರೆ, ಜಡೇಜಾ ಆರ್ಭಟ ಹೇಗಿತ್ತು. ಯಾವೆಲ್ಲಾ ದಾಖಲೆಗಳೂ ಉಡೀಸ್ ಆದವು ಅನ್ನೋ ಮಾಹಿತಿ ಈ ಸ್ಟೋರಿಯಲ್ಲಿದೆ. ಮೊಹಾಲಿ ಟೆಸ್ಟ್​ನ ಮೊದಲ ದಿನ ಪಂತ್​ ಪರಾಕ್ರಮ ಮೆರೆದ್ರೆ, 2ನೇ ದಿನ ನಡೆದಿದ್ದು ಸೌರಾಷ್ಟ್ರ ಬ್ಯಾಟ್ಸ್​​ಮನ್​​ನ ಅಬ್ಬರದಾಟ. ಹೌದು.. ಮೊದಲ ದಿನ 45 ರನ್​ಗಳಿಸಿ 2ನೇ ದಿನದಾಟಕ್ಕೆ ಕ್ರೀಸ್​ […]

  • ಶೇನ್ ವಾರ್ನ್ ಸಾವಿನ ಬಗ್ಗೆ ಥಾಯ್ ಪೊಲೀಸರು ನೀಡಿದ ಮಾಹಿತಿ ಏನು..?

    ಸಾವಿಗೂ ಮುಂಚೆ ಶೇನ್‌ ವಾರ್ನ್‌ಗೆ ಎದೆನೋವು ಕಾಣಿಸಿಕೊಂಡಿತ್ತು. ಅವರಿಗೆ ಅಸ್ತಮಾ ಹಾಗೂ ಹೃದಯದ ಸಮಸ್ಯೆಗಳು ಇದ್ದವು ಎಂದು ಥಾಯ್‌ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರಿಗೆ ಎದೆನೋವು ಕಾಣಿಸಿಕೊಂಡ ಕೂಡಲೇ ವೈದ್ಯರಿಗೆ ತೋರಿಸುವ ಪ್ರಯತ್ನ ನಡೆಯಿತು. ತಪಾಸಣೆ ನಡೆಸಿದ ವೈದ್ಯರು ಅವರು ನಿಧನರಾಗಿದ್ದಾರೆ ಅಂತಾ ಮಾಹಿತಿ ನೀಡಿದರು ಅಂತಾ ಪೊಲೀಸರು ತಿಳಿಸಿದ್ದಾರೆ.  ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗಜ ಶೇನ್ ವಾರ್ನ್ ಥಾಯ್ ಹಾಲಿಡೇ ಐಲ್ಯಾಂಡ್ ಬಂಗಲೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರು ಹಾಗೂ […]

  • ‘ಕೊಹ್ಲಿ ದಾರಿಯಲ್ಲೇ ಮುನ್ನಡೆಯುತ್ತೇನೆ’ ಎಂದ ಕ್ಯಾಪ್ಟನ್​​ ರೋಹಿತ್​ ಶರ್ಮಾ.. ಹಿಂಗ್ಯಾಕಂದ್ರು..?

    ಟೆಸ್ಟ್​ ತಂಡದ ನೂತನ ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ. ಈ ಸಂಬಂಧ ಮಾತಾಡಿದ ರೋಹಿತ್​​​ ಶರ್ಮಾ, ಟೆಸ್ಟ್​ ಕ್ರಿಕೆಟ್​​ನಲ್ಲಿ ಟೀಮ್​ ಇಂಡಿಯಾ ಉತ್ತಮ ಸ್ಥಾನದಲ್ಲಿದೆ. ಇದರ ಸಂಪೂರ್ಣ ಕ್ರೆಡಿಟ್​​ ವಿರಾಟ್​​ ಕೊಹ್ಲಿಗೆ ಸಲ್ಲಬೇಕು ಎಂದರು. ಟೆಸ್ಟ್​​​ನಲ್ಲಿ ಭಾರತ ಅತ್ಯದ್ಭುತ ಯಶಸ್ವಿಯಾಗಿದ್ದು, ಅವರ ನಾಯಕತ್ವದಲ್ಲೇ. ಇದರಿಂದ ಟೀಮ್​ ಇಂಡಿಯಾವನ್ನ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದರು. ಈಗ ವಿರಾಟ್​ ಕೊಹ್ಲಿ ತೊರೆದ ಸ್ಥಾನವನ್ನ ನಾನು ಅಲಂಕರಿಸಿದ್ದೇನೆ. ಕೊಹ್ಲಿ ದಾರಿಯಲ್ಲೇ ಮುನ್ನಡೆಯುತ್ತೇನೆ ಎಂದು ಹೇಳಿದರು. ಭಾರತ ತಂಡವನ್ನ […]

  • ಮೋಹಾಲಿ ಟೆಸ್ಟ್​​; ಕಪ್ಪು ಪಟ್ಟಿ ಧರಿಸಿ ಫೀಲ್ಡ್​​​ಗಿಳಿದ ಟೀಂ ಇಂಡಿಯಾ, ಲಂಕಾ ಆಟಗಾರರು-ಕಾರಣವೇನು..?

    ಟೀಂ ಇಂಡಿಯಾ, ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಎರಡನೇ ದಿನದಾಟ ಆರಂಭವಾಗಿದ್ದು, ಟೀಂ ಇಂಡಿಯಾ ಆಟಗಾರರು ಬ್ಯಾಟಿಂಗ್​ ಮಾಡ್ತಿದ್ದಾರೆ. 2ನೇ ದಿನದಾಟ ಆರಂಭಕ್ಕೂ ಮುನ್ನ ಶುಕ್ರವಾರ ನಿಧನರಾದ ಆಸ್ಟ್ರೇಲಿಯಾ ಮಾಜಿ ಆಟಗಾರ ಶೇನ್​ ವಾರ್ನ್ ಹಾಗೂ ರಾಡ್ನಿ ಮಾರ್ಷ್ ​ ನಿಧನಕ್ಕೆ ಇತ್ತಂಡಗಳು ಸಂತಾಪ ಸೂಚಿಸಿ ಒಂದು ನಿಮಿಷ ಮೌನಾಚರಣೆಯನ್ನು ಮಾಡಿದ್ದರು. ಆ ಬಳಿಕ ಆರಂಭವಾದ ಪಂದ್ಯದಲ್ಲಿ ಬ್ಲ್ಯಾಕ್​ ಪಟ್ಟಿ ಧರಿಸಿ ಕಣಕ್ಕೆ ಇಳಿಯುವ ಮೂಲಕ ಆಟಗಾರರು ವಾರ್ನ್​​ ನಿಧನಕ್ಕೆ ಸಂತಾಪ ಸೂಚಿಸಿದ್ದರು. A […]

  • ‘ವಿಲ್ ಮಿಸ್ ಯು ವಾರ್ನಿ’ -ಸ್ನೇಹಿತನ ಕಳೆದುಕೊಂಡು ಭಾವುಕರಾದ ಕ್ರಿಕೆಟ್ ದೇವರು

    ವಿಶ್ವದ ಶ್ರೇಷ್ಠ ಲೆಗ್‌ ಸ್ಪಿನ್ನರ್‌ ಎಂದೇ ಖ್ಯಾತರಾದ ಆಸ್ಟ್ರೇಲಿಯಾದ ಶೇನ್‌ ವಾರ್ನ್ ನಿಧನರಾಗಿದ್ದಾರೆ. ಶೇನ್ ವಾರ್ನ್ ನಿಧನಕ್ಕೆ ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಭಾರತೀಯರಿಗೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ. ನಿಮ್ಮ ಸಾವು ತುಂಬಾ ದುಃಖ ತಂದಿದೆ. ವಿಲ್ ಮಿಸ್ ಯು ವಾರ್ನಿ ಎಂದು ಬರೆದುಕೊಂಡು ಟ್ವೀಟ್​​ ಮಾಡಿದ್ದಾರೆ. Shocked, stunned & miserable… Will miss […]

  • ಸಾಯೋ ಮುನ್ನ RIP ಎಂದು ಟ್ವೀಟ್​​ ಮಾಡಿದ್ದ ಶೇನ್​​ ವಾರ್ನ್​​​.. ತಾವೇ ಇಹಲೋಕ ತ್ಯಜಿಸಿದ್ರು

    ಆಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಇನ್ನಿಲ್ಲ. 52 ವರ್ಷ ಶೇನ್​​ ವಾರ್ನ್​​ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಾರ್ನ್ ಥಾಯ್ಲೆಂಡ್‌ನ ತಮ್ಮ ವಿಲ್ಲಾದಲ್ಲಿ ಇದ್ದರು. ಶನಿವಾರ ಬೆಳಿಗ್ಗೆ ತಮ್ಮ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಸಾರ್ವಕಾಲಿಕ ಶ್ರೇಷ್ಠ ಲೆಗ್‌ ಸ್ಪಿನ್ನರ್‌ ಆಗಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್‌ ವಾರ್ನ್​​ ಸಾಯೋ ಮುನ್ನ ಇಂದು ಬೆಳಗ್ಗೆ ಆಸೀಸ್ ದಿಗ್ಗಜ ಕ್ರಿಕೆಟಿಗ ರೋಡ್ ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿದ್ದರು. […]

  • ಆಸ್ಟ್ರೇಲಿಯಾದಿಂದ IPL​ವರೆಗೂ.. ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಿದ್ದ ಶೇನ್​​ ವಾರ್ನ್​ ಯಾರು?

    ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಶೇನ್ ವಾರ್ನ್ (52) ಇನ್ನಿಲ್ಲ. ಶೇನ್​ ವಾರ್ನ್​ ಅವರು ತಮ್ಮ ವಿಲ್ಲಾದಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿದ್ದರು. ಕೂಡಲೇ ಅವರಿಗೆ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರೂ ಫಲಿಸದೇ ಈಗ ಇಹಲೋಕ ತ್ಯಜಿಸಿದ್ದಾರೆ. ಶೇನ್​ ವಾರ್ನ್​​ ಯಾರು..? ಶೇನ್ ವಾರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ ಗೂಗ್ಲಿ ಬೌಲರ್​​. ವಿಶ್ವ ಕ್ರಿಕೆಟ್ ಕಂಡ ಗೂಗ್ಲಿ ಬೌಲರ್​ಗಳ ಪೈಕಿ ಒಬ್ಬರು. ಇವರು ಟೆಸ್ಟ್ ಕ್ರಿಕೆಟ್​​ನಲ್ಲಿ ಅತೀಹೆಚ್ಚು ವಿಕೆಟ್ ಪಡೆದು ದಾಖಲೆ ಮಾಡಿದ್ದಾರೆ. […]

  • 100ನೇ ಟೆಸ್ಟ್ ಆಡ್ತಿರುವ ವಿರಾಟ್ ಕೊಹ್ಲಿಗೆ BCCIನಿಂದ ‘ಸ್ಪೆಷಲ್ ಗಿಫ್ಟ್’.. ಬಾಲ್ಯದ ಕೋಚ್ ನೆನೆದ ಕಿಂಗ್

    ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಆಡುವ ಮೂಲಕ ವಿಶೇಷ ಸಾಧನೆ ಮಾಡುತ್ತಿರುವ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಮುಖ್ಯ ಕೋಚ್​ ದ್ರಾವಿಡ್​, ಬಿಸಿಸಿಐ ವತಿಯಿಂದ ಸನ್ಮಾನ ಮಾಡಿದರು. ನೂರನೇ ಪಂದ್ಯಗಳನ್ನ ಆಡುತ್ತಿರುವ ಕೊಹ್ಲಿಗೆ ಸನ್ಮಾನದ ಜೊತೆ ವಿಶೇಷ ಸ್ಮರಣಿಕೆಯ ಕ್ಯಾಪ್​ ಕೂಡ ನೀಡಲಾಯಿತು. ವಿರಾಟ್‌ಗೆ ವಿಶೇಷ ಕ್ಷಣವನ್ನು ನೀಡುವ ಮೊದಲು ತಂಡದ ಕೋಚ್ ರಾಹುಲ್ ದ್ರಾವಿಡ್, ಕಿಂಗ್ ಕೊಹ್ಲಿಯ ವಿಶೇಷ ಸಾಧನೆಯನ್ನ ಕೊಂಡಾಡಿದರು. ಈ ಅದ್ಭುತ ಸಾಧನೆಯನ್ನು […]

  • IND Vs SL 1ST TEST :ಮೊದಲ ಸೆಷನ್​ನಲ್ಲಿ ಸಮಬಲದ ಹೋರಾಟ

    ಮೊಹಾಲಿಯಲ್ಲಿ ನಡೀತಿರುವ ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್​ನ ಮೊದಲ ಸೆಷನ್ ಅಂತ್ಯಕ್ಕೆ ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 109 ಗಳಿಸಿದೆ. ಈ ಮೊದಲು​​ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ತಮ್ಮ ನಿರ್ಧಾರ ಸರಿ ಎಂಬಂತೆ ಬ್ಯಾಟ್ ಬೀಸಿ ಲಂಕಾ ಬೌಲರ್​​ಗಳನ್ನ ಬೆಂಡೆತ್ತಿದರು. ಏಕದಿನ ಶೈಲಿಯಂತೆ ಬ್ಯಾಟ್ ಬೀಸಿದ ರೋಹಿತ್ ಶರ್ಮಾ-ಮಯಾಂಕ್ ಜೋಡಿ 9.5 ಓವರ್​ಗಳಲ್ಲಿ 52 ರನ್ ಸಿಡಿಸುವುದರೊಂದಿಗೆ ಉತ್ತಮ ಅಡಿಪಾಯ ಹಾಕಿದರು. ಆದ್ರೆ, ಈ ವೇಳೆ 28 ಎಸೆತಗಳಲ್ಲಿ 29 ರನ್ […]

  • IPL 2022: ಶಿಖರ್​ ಧವನ್​​ ಬಗ್ಗೆ ಪಂಜಾಬ್ ಹೊಸ​​ ಕ್ಯಾಪ್ಟನ್​​​ ಮಯಾಂಕ್​​​ ಹೇಳಿದ್ದೇನು..?

    ಶಿಖರ್​ ಧವನ್​ ಜೊತೆ ಇನ್ನಿಂಗ್ಸ್​ ಆರಂಭಿಸಲು ಉತ್ಸುಕನಾಗಿದ್ದೇನೆ ಎಂದು ಪಂಜಾಬ್​ ಕಿಂಗ್ಸ್​ನ ನೂತನ ಕ್ಯಾಪ್ಟನ್​ ಮಯಾಂಕ್​ ಅಗರ್​ವಾಲ್​ ಹೇಳಿದ್ದಾರೆ. ಹೊಸ ಜವಾಬ್ದಾರಿ ಸಿಕ್ಕ ಬಳಿಕ ಮೊದಲ ಬಾರಿ ಮಾತನಾಡಿರುವ ಮಯಾಂಕ್​, ಐಪಿಎಲ್​ನಲ್ಲಿ ಶಿಖರ್​ ಧವನ್ ಜತೆ ಇನ್ನಿಂಗ್ಸ್​ ಆರಂಭಿಸೋದು ನನಗೆ ಸಿಕ್ಕಿರೋ ಅದ್ಭುತ ಅವಕಾಶ ಎಂದರು. ನಾನು ಧವನ್​​ ಅವರ ಜೊತೆ ಆಡಲು ಉತ್ಸುಕನಾಗಿದ್ದೇನೆ. ಅದರ ಜೊತೆಗೆ ಯುವ ಆಲ್​ರೌಂಡರ್​ ರಾಜ್​ ಬಾವ ಸೇರಿದಂತೆ ಹಲವು ಆಟಗಾರರ ಜೊತೆ ಆಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕಳೆದ ಕೆಲ […]

  • ಐ ಮಿಸ್​​ ಯೂ ಗರ್ಲ್ಸ್​.. ಡೇವಿಡ್​​ ವಾರ್ನರ್​ ಎಮೋಷನಲ್​​ ಪೋಸ್ಟ್​

    ಆಸ್ಟ್ರೇಲಿಯಾ ಕ್ರಿಕೆಟ್​ ತಂಡ ಸದ್ಯ ಪಾಕಿಸ್ತಾನ ಪ್ರವಾಸದಲ್ಲಿದೆ. ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಏಕೈಕ ಟಿ-20 ಪಂದ್ಯ ಆಡಲಿದೆ. ಆದ್ರೆ, ಪಾಕಿಸ್ತಾನಕ್ಕೆ ಹಾರುವ ಮುನ್ನ ಆಸಿಸ್​ ಸ್ಟಾರ್ ಪ್ಲೇಯರ್ ಡೇವಿಡ್ ವಾರ್ನರ್, ತಮ್ಮ ಪತ್ನಿ ಹಾಗೂ ಮಕ್ಕಳ ಕುರಿತಾಗಿ ಇನ್​ಸ್ಟಾಗ್ರಾಮ್​ನಲ್ಲಿ ಎಮೋಷನಲ್​  ಪೋಸ್ಟ್ ಶೇರ್ ಮಾಡಿದ್ದಾರೆ. ಯಾವಾಗ್ಲೂ ನನ್ನ ಹುಡುಗಿಯರಿಗೆ ಗುಡ್​ ಬೈ ಹೇಳುವುದು ಕಷ್ಟ, ಕಳೆದ ಕೆಲ ತಿಂಗಳಲ್ಲಿ ನಾವೆಲ್ಲಾ ಒಟ್ಟಾಗಿ ಮಸ್ತ್​ ಮಜಾ […]

  • ನನಗೆ ಸಚಿನ್​​​ ಈ ವಿಚಾರದಲ್ಲಿ ಇಷ್ಟ ಆಗೋಲ್ಲ ಎಂದ ಗಂಗೂಲಿ.. ಅಂಥದ್ದೇನು?

    ಸಚಿನ್ ತೆಂಡುಲ್ಕರ್ ಅವ್ರ ಹವ್ಯಾಸವೊಂದು ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್​ ಗಂಗೂಲಿ ಅವರ ಭಯಕ್ಕೆ ಕಾರಣವಾಗಿತ್ತಂತೆ. ಸಂದರ್ಶನವೊಂದರಲ್ಲಿ ಗಂಗೂಲಿ ಈ ವಿಚಾರವನ್ನ ರಿವೀಲ್ ಮಾಡಿದ್ದಾರೆ. ಇಂಗ್ಲೆಂಡ್​ನಲ್ಲಿ ನಡೆದ ಸರಣಿ ವೇಳೆ, ನಾನು ಸಚಿನ್ ಒಂದೇ ರೂಮ್​ನಲ್ಲಿ ತಂಗಿದ್ದೆವು. ಒಂದು ದಿನ ನನ್ನ ಪಕ್ಕದಲ್ಲಿ ಸಚಿನ್ ಮಲಗಿದ್ರು. ಆದ್ರೆ, ರಾತ್ರಿ ಹೊತ್ತು ಎದ್ದು ನೋಡಿದಾಗ ಕಾಣಲಿಲ್ಲ. ರೂಮ್​ನಲ್ಲಿ ನಡೆದಾಡುವುದನ್ನ ನೋಡಿ, ಬಾತ್​ರೂಮ್​ಗೆ ಹೋಗ್ತಿರಬಹುದು ಅನ್ಕೊಂಡು ನನ್ನ ಪಾಡಿಗೆ ನಾನು ಮಲಗಿದ್ದೆ ಎಂದರು. ಮಾರನೇ ದಿನವೂ ಸಚಿನ್​ ಮಧ್ಯರಾತ್ರಿ […]

  • ಅಲ್ಲಿಲ್ಲಿ ನೋಡ್ಬೇಡಿ.. ಇಲ್ನೋಡಿ ಇವಱರು ಅಂಥಾ ಥಟ್ಟಂತ ಹೇಳ್ಬಿಡಿ..!

    ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇದರ ಸಿದ್ಧತೆಯ ಭಾಗವಾಗಿ ಐಪಿಎಲ್​ ಮೆಗಾ ಹರಾಜು ಕೂಡ ಮುಗಿದಿದೆ. ಇನ್ನು ಸ್ಟಾರ್​ ಸ್ಫೋರ್ಟ್ಸ್ ಮೊನ್ನೆ​​ 5 ಸೆಕೆಂಡ್​ನ ಐಪಿಎಲ್​ ಪ್ರೋಮೋ ಬಿಟ್ಟು ಐಪಿಎಲ್​​ ಜ್ವರವನ್ನು ಹೆಚ್ಚಿಗೆ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಇನ್ನೊಂದು ಶಾರ್ಟ್​ಪ್ರೋಮೋ ರಿಲೀಸ್​ ಮಾಡಿದ್ದು ಇದನ್ನ ಕಂಡವರು ಜಸ್ಟ್​ ವಾವ್​ ಅಂತಿದ್ದಾರೆ.. ಹೌದು ಈ ಪ್ರೋಮೋದಲ್ಲಿ ನಟಿಸಿದವರು ಬೇರೆ ಯಾರೂ ಅಲ್ಲ. ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್​ ಧೋನಿ. ಡ್ರೈವರ್​ ಪಾತ್ರದಲ್ಲಿ […]

  • ವಿಶೇಷ ದಾಖಲೆ ಬರೆದ ಶ್ರೇಯಸ್​ ಅಯ್ಯರ್.. ಹ್ಯಾಟ್ರಿಕ್ ಬ್ಯಾಕ್​​ ಟು ಬ್ಯಾಕ್​​​​​ ಅರ್ಧಶತಕ

    ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಶ್ರೇಯಸ್ಯ್ ಅಯ್ಯರ್, ಅದ್ಭುತ ಬ್ಯಾಟಿಂಗ್​ ಮೂಲಕ ಮಿಂಚಿದ್ರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಯ್ಯರ್, ಮೂರು ಪಂದ್ಯಗಳಲ್ಲೂ ಅಬ್ಬರದ ಅರ್ಧಶತಕ ಸಿಡಿಸಿದ್ರು. ಈ ಮೂಲಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಮೊದಲ ಪಂದ್ಯದಲ್ಲಿ 57, ಎರಡನೇ ಪಂದ್ಯದಲ್ಲಿ 74, ಇನ್ನು ಮೂರನೇ ಮ್ಯಾಚ್​​ನಲ್ಲಿ 73 ರನ್ ಬಾರಿಸಿದ್ರು. ವಿಶೇಷ ಅಂದ್ರೆ, ಎಲ್ಲಾ ಪಂದ್ಯಗಳಲ್ಲೂ ಔಟಾಗದೇ ಅಜೇಯರಾಗುಳಿದು ತಂಡಕ್ಕೆ ಗೆಲುವು ತಂದುಕೊಟ್ರು. ಸರಣಿಯಲ್ಲಿ ಬ್ಯಾಕ್​ ಟು ಬ್ಯಾಕ್ ಅರ್ಧಶತಕಗಳನ್ನ ಸಿಡಿಸುವ ಮೂಲಕ ಅಯ್ಯರ್, […]

  • ಶ್ರೇಯಸ್​ ಅಯ್ಯರ್​​​ ಸಿಡಿಲಬ್ಬರದ ಅರ್ಧಶತಕ.. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು

    ಇಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮೂರನೇ ಪಂದ್ಯ ನಡೆಯುತ್ತಿದೆ. ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​​ ಮಾಡಿದ ಶ್ರೀಲಂಕಾ ಟೀಂ ಇಂಡಿಯಾ ಸಾಧರಣ ಮೊತ್ತ ಟಾರ್ಗೆಟ್​​ ನೀಡಿತ್ತು. ಶ್ರೀಲಂಕಾ ನೀಡಿದ 146 ರನ್​ ಟಾರ್ಗೆಟ್​ ಬೆನ್ನತ್ತಿದ ಟೀಂ ಇಂಡಿಯಾ 148 ರನ್​​ ಗಳಿಸಿ ಭರ್ಜರಿ ಜಯ ಸಾಧಿಸಿದೆ.   The post ಶ್ರೇಯಸ್​ ಅಯ್ಯರ್​​​ ಸಿಡಿಲಬ್ಬರದ ಅರ್ಧಶತಕ.. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು appeared first on […]

  • ಟಿ20 ಮೂರನೇ ಪಂದ್ಯ.. ಟಾಸ್​​ ಗೆದ್ದು ಬ್ಯಾಟಿಂಗ್​​ ಆಯ್ದುಕೊಂಡ ಶ್ರೀಲಂಕಾ.. ಇಂಡಿಯಾ ಬೌಲಿಂಗ್​​

    ಇಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮೂರನೇ ಪಂದ್ಯ ನಡೆಯುತ್ತಿದೆ. ಟಾಸ್​​ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ರೋಹಿತ್​ ಪಡೆ ಬೌಲಿಂಗ್​​ ಮಾಡಬೇಕಿದೆ. ಶನಿವಾರ ಟಿ20 ಎರಡನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 184 ರನ್‌ಗಳಿಸಿತ್ತು. ಈ ರನ್ ಬೆನ್ನಟ್ಟಿದ ಟೀಂ ಇಂಡಿಯಾ ಶ್ರೇಯಸ್​ ಅಯ್ಯರ್​ ನೆರವಿನೊಂದಿಗೆ ಕೇವಲ 17.1 […]

  • MS ಧೋನಿ ನನ್ನ ಬೆಸ್ಟ್​ ಬ್ಯಾಟಿಂಗ್​​​​ ಪಾರ್ಟ್​​ನರ್​​​​​​.. ಹೀಗೆಂದ ಖ್ಯಾತ ಕ್ರಿಕೆಟರ್​​ ಯಾರು?

    ಇಂಡಿಯನ್​​ ಪ್ರೀಮಿಯರ್​​ ಲೀಗ್​​​ ಸೀಸನ್​​ 15 ಮೆಗಾ ಆಕ್ಷನ್​​ಗೂ ಮೊದಲೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಕ್ಯಾಪ್ಟನ್​​​ ಎಂ.ಎಸ್​​ ಧೋನಿ ಜತೆಗೆ ಸ್ಟಾರ್​​ ಆಲ್​ರೌಂಡರ್​​​ ರವೀಂದ್ರಾ ಜಡೇಜಾರನ್ನು ರೀಟೈನ್​​ ಮಾಡಿಕೊಂಡಿದೆ. ಸುಮಾರು ಬರೋಬ್ಬರಿ 10 ವರ್ಷಗಳಿಂದ ಚೆನ್ನೈ ತಂಡದ ಪರ ಆಡುತ್ತಿರೋ ಜಡೇಜಾ, ಎಂ.ಎಸ್​​ ಧೋನಿಗೆ ಸ್ಪೆಷಲ್​​ ಥ್ಯಾಂಕ್ಸ್​​ ಹೇಳಿದ್ದಾರೆ. ತನ್ನ ಫ್ರಾಂಚೈಸಿಯ ಅಧಿಕೃತ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ರವೀಂದ್ರ ಜಡೇಜಾ, ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್​​ ಮಹೇಂದ್ರ […]

  • ಸೂರ್ಯ-ಚಹರ್​ ಬೆನ್ನಲ್ಲೇ ಲಂಕಾ ಟೂರ್ನಿಯಿಂದ ಋತುರಾಜ್ ಔಟ್​​.. ಕನ್ನಡಿಗನಿಗೆ ಖುಲಾಯಿಸ್ತು ಅದೃಷ್ಟ

    ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಯ ಎರಡನೇ ಪಂದ್ಯ ಇಂದು ನಡೆಯಲಿದೆ. ಈ ನಡುವೆ ಟೂರ್ನಿ ಆರಂಭಕ್ಕೂ ಮುನ್ನ ಗಾಯದ ಕಾರಣದಿಂದ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್​ ಹಾಗೂ ಬೌಲರ್ ದೀಪಕ್​​ ಚಹರ್ ಟೂರ್ನಿಯಿಂದ ಹೊರಬಿದ್ದಿದ್ದರು. ಈ ನಡುವೆ ಎರಡನೇ ಪಂದ್ಯಕ್ಕೂ ಮುನ್ನ ಯುವ ಆಟಗಾರ ಋತುರಾಜ್​ ಗಾಯಕ್ವಾಡ್​​ ಅವರು ಕೂಡ ಗಾಯದ ಸಮಯದಿಂದ ಹೊರಬಿದ್ದಿದ್ದಾರೆ. ಈ ಕುರಿತು ಬಿಸಿಸಿಐ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಟಿ-20 ಸರಣಿಯಿಂದ ಋತುರಾಜ್​​ ಗಾಯಕ್ವಾಡ್​ ಹೊರಬಿದ್ದಿದ್ದಾರೆ. ಅವರ ಸ್ಥಾನದಲ್ಲಿ ಮಯಾಂಕ್​ […]

  • ಟೀಂ ಇಂಡಿಯಾ ವಿರುದ್ಧ ಟೆಸ್ಟ್​ ಸರಣಿಗೆ ಶ್ರೀಲಂಕಾದ ಬಲಿಷ್ಠ ತಂಡ ಪ್ರಕಟ.. ಯಾಱರಿಗೆ ಚಾನ್ಸ್​?

    ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಶುರುವಾಗಿದೆ. ಈಗಾಗಲೇ ಮೊದಲ ಪಂದ್ಯ ಮುಗಿದಿದ್ದು, ಇಂದು 2ನೇ ಮತ್ತು ನಾಳೆ ಕೊನೆ ಪಂದ್ಯ ನಡೆಯಲಿದೆ. ಹೀಗಿರುವಾಗಲೇ ಭಾರತದ ವಿರುದ್ಧದ ಟೆಸ್ಟ್​ ಸರಣಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಲಿಷ್ಠ ತಂಡ ಪ್ರಕಟಿಸಿದೆ. ಮಾರ್ಚ್​​ 5ನೇ ತಾರೀಕಿನಿಂದ ಮೊಹಾಲಿಯಲ್ಲಿ ಮೊದಲ ಟೆಸ್ಟ್​​​ ನಡೆಯಲಿದೆ. ಎರಡನೇ ಪಂದ್ಯ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯವೂ ಮಾರ್ಚ್ 12ರಿಂದ ಆರಂಭವಾಗಲಿದ್ದು, ಟೀಂ ಇಂಡಿಯಾ ಗೆಲುವಿನ ನಾಗಲೋಟ ಮುಂದುವರಿಸಲು ಪ್ಲಾನ್​​ ಮಾಡಿಕೊಂಡಿದೆ. ಟೆಸ್ಟ್ ಸರಣಿಯಲ್ಲಿ […]

  • ಮತ್ತೆ ಸಖತ್​​ ಆಗಿ ಕಮ್​​ಬ್ಯಾಕ್​​ ಮಾಡಿದ ಈ ಆಟಗಾರ ಬಗ್ಗೆ ಗವಾಸ್ಕರ್​​ ಹೇಳಿದ್ದೇನು..?

    ವೆಸ್ಟ್​ ಇಂಡೀಸ್​​ ವಿರುದ್ಧ ಸರಣಿ ವೈಟ್​​ ವಾಶ್​​ ಬೆನ್ನಲ್ಲೀಗ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಟಿ20 ಸೀರೀಸ್​​ ಆಡುತ್ತಿದೆ. ಕಳೆದ ಎರಡು ವರ್ಷಗಳಿಂದ ಕಳಪೆ ಪ್ರದರ್ಶನ ನೀಡುತ್ತಿದ್ದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಈಗ ಮತ್ತೆ ಫಾರ್ಮ್​​ಗೆ ಮರಳಿದ್ದು, ಟೀಂ ಇಂಡಿಯಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟರ್​​​ ಸುನೀಲ್​​​​ ಗವಾಸ್ಕರ್​​​​​ ಪ್ರಶಂಸೆ ಮಾತುಗಳನ್ನಾಡಿದ್ದಾರೆ. ಈ ಸಂಬಂಧ ಮಾತಾಡಿದ ಸುನೀಲ್​​ ಗವಾಸ್ಕರ್​​, ಭುವನೇಶ್ವರ್ ಕುಮಾರ್ ಮತ್ತೆ ಕಮ್​​ಬ್ಯಾಕ್​​ ಮಾಡಿದ್ದಾರೆ. ಈ ಹಿಂದೆ ಸೌತ್​​ ಆಫ್ರಿಕಾ […]

  • ಹೆಚ್ಚು ವರ್ಕೌಟ್​​ ಮಾಡಬೇಕು.. ಭಾರತ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್​​ ಹೀಗಂದಿದ್ಯಾಕೆ..?

    ವಿಶ್ವಕಪ್ ನಂತರ ನಾನು ನಿವೃತ್ತಿಯಾದಾಗ ತಂಡ ಯುವ ಪ್ರತಿಭೆಗಳಿಂದ ಮತ್ತಷ್ಟು ಬಲಿಷ್ಠವಾಗಿಲಿದೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್​ ಹೇಳಿದ್ದಾರೆ. ಇತ್ತೀಚಿನ ಕೆಲ ವರ್ಷಗಳಲ್ಲಿ ತಂಡದ ಪ್ರದರ್ಶನ ಸಾಕಷ್ಟು ಸುಧಾರಿಸಿದೆ. ವಿಶ್ವಕಪ್​ಗೂ ಮುನ್ನ ಈ ರೀತಿಯ ಬೆಳವಣಿಗೆ ತಂಡಕ್ಕೆ ಸಹಕಾರಿಯಾಗಲಿದೆ ಎಂದರು. ಯಾವುದೇ ದೊಡ್ಡ ಟೂರ್ನಿಗೂ ಮುನ್ನ ಒಂದಷ್ಟು ತಯಾರಿ ಅಗತ್ಯ, ಆದ್ರೆ, ಕೊರೊನಾ ಕಾರಣದಿಂದಾಗಿ ಭಾರತದಲ್ಲಿ ನಾವು ಯಾವುದೇ ಟ್ರೇನಿಂಗ್ ಕ್ಯಾಂಪ್​ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯ ಸೋಲಿಗೆ […]

  • ಗುರು-ಶಿಷ್ಯರ ಮ್ಯಾಜಿಕ್​​ಗಾಗಿ ಕಾಯ್ತಿದ್ದಾರೆ ಫ್ಯಾನ್ಸ್.. ದ್ರಾವಿಡ್​-ಶರ್ಮಾ ಮುಂದಿದೆ ಬಿಗ್ ಚಾಲೆಂಜ್..!

    ಭಾರತೀಯ ಕ್ರಿಕೆಟ್​ನಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದ ಶಕೆ ಆರಂಭವಾಗಿದೆ. ರೋಹಿತ್​ ಕ್ಯಾಪ್ಟೆನ್ಸಿಯಲ್ಲಿ ಏಕದಿನ ಹಾಗೂ ಟಿ-20 ಸರಣಿಯಲ್ಲಿ ಕೆರಿಬಿಯನ್ ಪಡೆಗೆ ವೈಟ್​ ವಾಶ್ ಮಾಡಿದ ಟೀಮ್​ ಇಂಡಿಯಾ, ಐಸಿಸಿ ಟಿ-20 ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಆದ್ರೆ, ಇಷ್ಟಕ್ಕೆ ಈ ಗುರು- ಶಿಷ್ಯರ ಟಾಸ್ಕ್ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಇವ್ರಿಬ್ಬರಿಗೆ ಭಾರಿ ಸವಾಲುಗಳನ್ನ ಎದುರಿಸಬೇಕಿದೆ. ವಿಶ್ವಕಪ್ ಬರ ನೀಗಿಸಬೇಕಿದೆ ರೋಹಿತ್​-ರಾಹುಲ್..! ಈ ವರ್ಷ ಟೀಮ್ ಇಂಡಿಯಾ ಸಾಲು ಸಾಲು ಸರಣಿಗಳನ್ನ ಆಡಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಟಿ-20 […]

  • ಪಂಜಾಬ್ ತಂಡದ ‘ಕಿಂಗ್’​ ಆಗಲ್ವಾ ಧವನ್..? ಕುಂಬ್ಳೆ ಕಣ್ಣು ಯಾರ ಮೇಲಿದೆ ಗೊತ್ತಾ..?

    ಐಪಿಎಲ್​ ಹರಾಜು ಮುಗಿದ ಬೆನ್ನಲ್ಲೇ ಪಂಜಾಬ್​ ಕಿಂಗ್ಸ್​ ತಂಡದ ನಾಯಕತ್ವದ ಗೊಂದಲ ಬಗೆ ಹರಿತು ಎಂಬ ಮಾತುಗಳು ಕೇಳಿ ಬಂದಿದ್ವು. ಆದ್ರೆ, ಮುಂದಿನ ಕ್ಯಾಪ್ಟನ್​ ವಿಚಾರದಲ್ಲಿ ಪಂಜಾಬ್​ ಪಡೆ ಇನ್ನೂ ಸ್ಪಷ್ಟತೆಗೆ ಬಂದಿಲ್ಲ. ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು ಮುಗಿದು ವಾರವೇ ಉರುಳಿದೆ. ಹರಾಜಿನ ಬಳಿಕ ತಂಡದ ಬಲ ಹಾಗೂ ದೌರ್ಭಲ್ಯಗಳ ಮೇಲೆ ಫ್ರಾಂಚೈಸಿಗಳು ವರ್ಕೌಟ್​ ಮಾಡೋಕೆ ಆರಂಭಿಸಿವೆ. ತಂಡದಲ್ಲಿನ ಗೊಂದಲಗಳನ್ನ ಬಗೆಹರಿಸಿಕೊಂಡು ಐಪಿಎಲ್​ 15 ಸೀಸನ್​ಗೆ ಸಿದ್ಧತೆ ಈಗಾಗಲೇ ಗ್ರೌಂಡ್​​​ ಲೆವೆಲ್​ನಲ್ಲಿ ಆರಂಭವಾಗಿವೆ. ಆದ್ರೆ, […]

  • ದೀಪಕ್​ ಚಹರ್​​ಗೆ ಕಾಡಿದ ಬ್ಯಾಡ್​ ಲಕ್​; IPL​ ಟೂರ್ನಿಯಿಂದ ₹14 ಕೋಟಿ ವೀರ ಔಟ್​..?

    ಅದೃಷ್ಟದ ಜೊತೆಗೆ ದುರಾದೃಷ್ಟವು ಇರುತ್ತೆ ಅನ್ನೋ ಮಾತಿದೆ. ಅದು ಸದ್ಯ ದೀಪಕ್​ ಚಹರ್​​ಗೆ ಸರಿಯಾಗಿ ಹೋಲಿಕೆಯಾಗ್ತಿದೆ. ಹರಾಜಿನಲ್ಲಿ ಬರೋಬ್ಬರಿ 14 ಕೋಟಿಯನ್ನ ಚಹರ್​ ಬಾಚಿಕೊಂಡ್ರು ನಿಜ. ಆದ್ರೆ, ಈಗಿನ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆ. ಐಪಿಎಲ್​ ಮೆಗಾ ಹರಾಜು ಕೆಲ ಆಟಗಾರರ ಅದೃಷ್ಟವನ್ನೇ ಬದಲಾಯಿಸಿದೆ. ಕೆಲ ಯುವ ಆಟಗಾರರಂತೂ ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಸೇಲಾಗಿದ್ದಾರೆ. ಅದ್ರಲ್ಲೂ ಇಂಡಿಯನ್ ಸ್ಟಾರ್ ವೇಗಿ ದೀಪಕ್ ಚಹರ್ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ದಾಖಲೆಯ ಮೊತ್ತಕ್ಕೆ ಸಿಎಸ್​ಕೆ ಫ್ರಾಂಚೈಸಿ […]

  • ಕನ್ನಡಿಗನಿಗೆ ಸಿಗುತ್ತಾ ಪಂಜಾಬ್​​ ಕಿಂಗ್ಸ್​ ತಂಡದ ಕ್ಯಾಪ್ಟನ್​​ ಪಟ್ಟ..?

    ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಸೀಸನ್​​ 15 ಮೆಗಾ ಆಕ್ಷನ್​​ ಇತ್ತೀಚೆಗೆ ಮುಗಿದಿದೆ. ಈ ಬಾರಿ ಐಪಿಎಲ್​-15ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕರಾಗಿ, ಮಯಾಂಕ್ ಅಗರ್​ವಾಲ್​ ನೇಮಕವಾಗೋ ಸಾಧ್ಯತೆ ಇದೆ. ಈ ಕುರಿತು ಸದ್ಯದಲ್ಲೇ ಪಂಜಾಬ್​ ಟೀಮ್ ಮ್ಯಾನೇಜ್​ಮೆಂಟ್​ ಅಧಿಕೃತವಾಗಿ ಪ್ರಕಟಿಸಲಿದೆ ಎನ್ನಲಾಗ್ತಿದೆ. ಇತ್ತೀಚೆಗೆ ಶಿಖರ್ ಧವನ್ ಪಂಜಾಬ್ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾಗ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ, ಈಗ ಮಯಾಂಕ್​ಗೆ ತಂಡದ ಸಾರಥ್ಯ ನೀಡಲು ಫ್ರಾಂಚೈಸಿ ನಿರ್ಧರಿಸಿದೆಯಂತೆ. ಕಳೆದ ಆವೃತ್ತಿಯಲ್ಲಿ ರಾಹುಲ್ ಅನುಪಸ್ಥಿತಿಯಲ್ಲಿ ಮಯಾಂಕ್​ […]

  • ಕನ್ನಡಿಗನಿಗೆ ಸಿಗುತ್ತಾ ಪಂಜಾಬ್​​ ಕಿಂಗ್ಸ್​ ತಂಡದ ಕ್ಯಾಪ್ಟನ್​​ ಪಟ್ಟ..?

    ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಸೀಸನ್​​ 15 ಮೆಗಾ ಆಕ್ಷನ್​​ ಇತ್ತೀಚೆಗೆ ಮುಗಿದಿದೆ. ಈ ಬಾರಿ ಐಪಿಎಲ್​-15ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕರಾಗಿ, ಮಯಾಂಕ್ ಅಗರ್​ವಾಲ್​ ನೇಮಕವಾಗೋ ಸಾಧ್ಯತೆ ಇದೆ. ಈ ಕುರಿತು ಸದ್ಯದಲ್ಲೇ ಪಂಜಾಬ್​ ಟೀಮ್ ಮ್ಯಾನೇಜ್​ಮೆಂಟ್​ ಅಧಿಕೃತವಾಗಿ ಪ್ರಕಟಿಸಲಿದೆ ಎನ್ನಲಾಗ್ತಿದೆ. ಇತ್ತೀಚೆಗೆ ಶಿಖರ್ ಧವನ್ ಪಂಜಾಬ್ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾಗ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ, ಈಗ ಮಯಾಂಕ್​ಗೆ ತಂಡದ ಸಾರಥ್ಯ ನೀಡಲು ಫ್ರಾಂಚೈಸಿ ನಿರ್ಧರಿಸಿದೆಯಂತೆ. ಕಳೆದ ಆವೃತ್ತಿಯಲ್ಲಿ ರಾಹುಲ್ ಅನುಪಸ್ಥಿತಿಯಲ್ಲಿ ಮಯಾಂಕ್​ […]

  • ಸಂಜು ಸ್ಯಾಮ್ಸನ್​​​ ಹಾಡಿಹೊಗಳಿದ​​ ಕ್ಯಾಪ್ಟನ್ ರೋಹಿತ್ ಶರ್ಮಾ..!

    ಲಂಕಾ T20 ಸರಣಿಗೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ ಸಂಜು ಸ್ಯಾಮ್ಸನ್ ಅವರನ್ನು ಹೊಗಳಿದ್ದಾರೆ. ಸಂಜು ಅವರನ್ನು ಅಪ್ರತಿಮ ಪ್ರತಿಭೆ ಎಂದಿರುವ ಟೀಮ್​ ಇಂಡಿಯಾ ಕ್ಯಾಪ್ಟನ್​, ಸಾಟಿಯಿಲ್ಲದ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ಸನ್ ಅವರಂತಹ ಬ್ಯಾಟ್ಸ್‌ಮನ್ ವಿಧ್ವಂಸಕರಾಗಬಹುದು ಎಂದು ನಾಯಕ ರೋಹಿತ್ ಹೇಳಿದ್ದಾರೆ. ರೋಹಿತ್ ನಿನ್ನೆ ಆಡಿದ ಮಾತುಗಳನ್ನ ಗಮನಿಸಿದ್ರೆ, ಇಂದು ಲಂಕಾ ವಿರುದ್ಧ ಸಂಜು ಸ್ಯಾಮ್ಸನ್ ಆಡುವ ಇಲೆವೆನ್​ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದರು. […]

  • ಜಡೇಜಾ ಮುಂದಿದೆ ಬಿಗ್​ ಚಾಲೇಂಜ್.. ಜಡ್ಡುಗೆ ಠಕ್ಕರ್​ ನೀಡೋಕೆ ರೇಸ್​ನಲ್ಲಿರೋರು ಇವ್ರೆ..!

    ಇಂಜುರಿಯಿಂದಾಗಿ 2 ತಿಂಗಳು ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಆಲ್​ರೌಂಡರ್ ಜಡೇಜಾ, ತಂಡಕ್ಕೆ ವಾಪಸ್ಸಾಗಿದ್ದು, ಮತ್ತೆ ಮೈದಾನಕ್ಕಿಳಿದು ಅಬ್ಬರಿಸಲು ಸಜ್ಜಾಗಿದ್ದಾರೆ. ಆದ್ರೆ, ಜಡೇಜಾಗೆ ಕೆಲ ಸವಾಲುಗಳು ಎದುರಾಗಿವೆ. ಈ ಸವಾಲುಗಳನ್ನ ಜಡೇಜಾ ಯಾವ ರೀತಿ ಫೇಸ್​ ಮಾಡಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ. ಇಂಜುರಿಯಿಂದ 2 ತಿಂಗಳು ಭಾರತ ತಂಡಕ್ಕೆ ದೂರವಾಗಿದ್ದ ಆಲ್​ರೌಂಡರ್ ರವೀಂದ್ರ ಜಡೇಜಾ, ಇದೀಗ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಕಿವೀಸ್​​​ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಜುರಿಗೊಳಗಾಗಿದ್ದ ಜಡ್ಡು ಫಿಟ್​ ಆಗಿದ್ದು, ಇಂದು ಶ್ರೀಲಂಕಾ ವಿರುದ್ಧ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. […]

  • ‘ಕೊಹ್ಲಿ ಸೂಪರ್​ಹ್ಯೂಮನ್​, ಧೋನಿ ಐಸ್​​​​​​​​..’ -ಹೀಗ್ಯಾಕಂದ್ರು ಶೇನ್​ ವ್ಯಾಟ್ಸನ್..?

    ಆಸ್ಟ್ರೇಲಿಯಾ ಕ್ರಿಕೆಟಿಗ ಶೇನ್​ ವ್ಯಾಟ್ಸನ್​ ಅವರು ವಿರಾಟ್​ ಕೊಹ್ಲಿ ಮತ್ತು MS ಧೋನಿ ನಡುವಿನ ನಾಯಕತ್ವದ ಶೈಲಿಯನ್ನು ಹೋಲಿಕೆ ಹೇಳಿದ್ದಾರೆ. ಶೇನ್​​ವ್ಯಾಟ್ಸನ್​​ ಅವರು , IPLನಲ್ಲಿ ಕೊಹ್ಲಿ ನಾಯಕತ್ವದಲ್ಲಿ RCB ಮತ್ತು ಧೋನಿ ನಾಯಕತ್ವದಲ್ಲಿ CSK ತಂಡದಲ್ಲಿ ಆಡಿದ್ದಾರೆ. ಹಾಗಾಗಿ ಇಬ್ಬರ ನಾಯಕತ್ವ ಹೇಗೆಂದು ತಿಳಿದಿರುವ ಈ ಆಲ್​ರೌಂಡರ್​​​, ಇಬ್ಬರ ನಾಯಕತ್ವದ ಶೈಲಿಯನ್ನ ಹೋಲಿಕೆ ಮಾಡಿದ್ದಾರೆ. ಇಬ್ಬರ ನಾಯಕತ್ವ ಕೂಡ ಒಂದೇ ಆಗಿದ್ದು, ಮೈದಾನದಲ್ಲಿ ಒತ್ತಡಕ್ಕೆ ಸಿಲುಕಿದ ಆಟಗಾರರಿಗೆ ವಿಶ್ವಾಸ ತುಂಬುವ ಗುಣ ಅದ್ಭುತವಾಗಿದೆ ಎಂದು ಹೇಳಿದ್ದಾರೆ. […]

  • ಕ್ಯಾಚ್​ ಬಿಟ್ಟ ಪ್ಲೇಯರ್​ಗೆ ಕಪಾಳಮೋಕ್ಷ ಮಾಡಿದ ಪಾಕ್ ಬೌಲರ್ -‘ಥೂ’ ಎಂದ ನೆಟಿಜೆನ್ಸ್​

    ಪಾಕಿಸ್ತಾನ ಪ್ರೀಮಿಯರ್​ ಲೀಗ್​ ಒಂದಿಲ್ಲೊಂದು ವಿಚಾರವಾಗಿ ಸುದ್ದಿ ಮಾಡುತ್ತಲೇ ಇದೆ. ಮೊನ್ನೆ ಬೆನ್​ ಕಟಿಂಗ್ ಹಾಗೂ ಬೌಲರ್​ ನಡುವೆ ನಡೆದ ವಾಕ್ಸಮರ ಭಾರೀ ಸದ್ದು ಮಾಡಿತ್ತು. ಅದರ ಬೆನ್ನಲ್ಲೆ ಇನ್ನೊಂದು ಕರಾಳ ಘಟನೆ ಈ ಲೀಗ್​ನಲ್ಲಿ ನಡೆದಿದೆ. ಸಹ ಆಟಗಾರ ಕ್ಯಾಚ್​ ಬಿಟ್ಟನೆಂದು ಬೌಲರ್ ಆತನಿಗೆ ಕಪಾಳಮೋಕ್ಷ ಮಾಡಿ ಆಕ್ರೋಶ ಹೊರಹಾಕಿದ್ದಾನೆ. ಪೇಶಾವರ್ ಝಲ್ಮಿ ಹಾಗೂ ಲಾಹೋರ್ ಖಲಂದರ್ಸ್ ನಡುವೆ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಲಾಹೋರ್ ಖಲಂದರ್ಸ್ ತಂಡದ ಬೌಲರ್ ಹ್ಯಾರಿಸ್ ರೌಫ್ ಓವರ್​ನಲ್ಲಿ […]

  • ಲಂಕಾ ವಿರುದ್ಧದ ಸರಣಿಗೆ ಇಶಾನ್ ಕಿಶನ್​ ಆಯ್ಕೆಯ ಹಿಂದಿದೆ ಒಂದು ದೊಡ್ಡ ಶಕ್ತಿ..!

    ವಿಂಡೀಸ್​​​ ಸರಣಿಯಲ್ಲಿ ನಿರೀಕ್ಷೆ ಹುಟ್ಟು ಹಾಕಿ ಹುಸಿಗೊಳಿಸಿದ ಇಶಾನ್​ ಕಿಶನ್​ರನ್ನ ಲಂಕಾ ಸರಣಿಗೂ ಆಯ್ಕೆ ಮಾಡಿದ್ದಕ್ಕೆ ಇದೀಗ ಆಕ್ರೋಶ ವ್ಯಕ್ತವಾಗಿದೆ. ದೇಶಿ ಕ್ರಿಕೆಟ್​​ನಲ್ಲಿ ರನ್ ​​ಹೊಳೆ ಹರಿಸಿದ್ದ ಋತುರಾಜ್​ ಇದ್ದರೂ ಇಶಾನ್​ಗೆ ಪ್ರಾಮುಖ್ಯತೆ ನೀಡಿದ್ದು ಕ್ರಿಕೆಟ್​​ ತಜ್ಞರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಿದ್ರೂ, ಮ್ಯಾನೇಜ್​ಮೆಂಟ್​​ ಬೆಂಬಲಕ್ಕೆ ನಿಂತಿದೆ. ವೆಸ್ಟ್​ ಇಂಡೀಸ್​​ ಸರಣಿ ಮುಗಿದ ಬೆನ್ನಲ್ಲೇ ಟೀಮ್​ ಇಂಡಿಯಾ, ಶ್ರೀಲಂಕಾ ಎದುರಿನ ಚುಟುಕು ಕದನಕ್ಕೆ ಸಜ್ಜಾಗ್ತಿದೆ. ಸಿಂಹಳೀಯರ ವಿರುದ್ಧ ಘರ್ಜಿಸಿ, ಮತ್ತೊಂದು ಸರಣಿಗೆ ಗೆಲುವಿಗೆ ಮುತ್ತಿಕ್ಕಲು ಭಾರೀ ಸಿದ್ಧತೆ ನಡೆಸಿದೆ. […]

  • ಲಂಕಾ ವಿರುದ್ಧ ಟಿ-20 ಸರಣಿ; ನಿಮ್ಮ ಪ್ರಕಾರ ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಹೇಗಿರಬೇಕು..?

    ಶ್ರೀಲಂಕಾ ವಿರುದ್ಧ ಟಿ20 ಸರಣಿ ಹತ್ತಿರವಾದಂತೆ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​​ ಗೊಂದಲಕ್ಕೆ ಸಿಲುಕಿದೆ. ಪ್ರಮುಖವಾಗಿ ನಾಲ್ಕು ಪ್ರಶ್ನೆಗಳು ತಂಡವನ್ನ ಕಾಡ್ತಿದ್ದು, ಅವುಗಳಿಗೆ ಉತ್ತರದ ಹುಡುಕಾಟ ಜೋರಾಗಿ ನಡೆದಿದೆ. ಇಂಡೋ-ಶ್ರೀಲಂಕಾ ಟಿ20 ಸರಣಿ ಆರಂಭಕ್ಕೆ ಒಂದೇ ಒಂದು ದಿನ ಬಾಕಿ. ಮೊದಲ ಟಿ20 ಕದನಕ್ಕೆ ಲಖನೌ ಸಜ್ಜಾಗಿದ್ದು, ಟೀಮ್​ ಇಂಡಿಯಾ ಭರ್ಜರಿ ಸಮರಾಭ್ಯಾಸವನ್ನೂ ಆರಂಭಿಸಿದೆ. ಇದರ ಜೊತೆಗೆ ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಕಗ್ಗಂಟು ಮತ್ತೆ ಸೃಷ್ಠಿಯಾಗಿದೆ. ಇರೋ 18 ಆಟಗಾರರಲ್ಲಿ ಆಡೋ 11 ಜನ ಯಾರು ಅನ್ನೋದು ತಲೆನೋವು […]

  • ಕೊಹ್ಲಿಗೆ ಭಾವನಾತ್ಮಕ ಪತ್ರ ಬರೆದ ಯುವರಾಜ್​​ ಸಿಂಗ್​​​.. ಯಾಕೆ?

    ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್​ ಸಿಂಗ್, ಭಾವನಾತ್ಮಕ ಪತ್ರದ ಮೂಲಕ ವಿರಾಟ್​ ಕೊಹ್ಲಿಯನ್ನ ಹಾಡಿ ಹೊಗಳಿದ್ದಾರೆ. ವಿರಾಟ್​ಗೆ ಸುದೀರ್ಘ ಪತ್ರ ಬರೆದಿರುವ ಯುವಿ, ಅದನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಎಮೋಷನಲ್​ ಲೆಟರ್​ನಲ್ಲಿ ವಿರಾಟ್​ ಕೊಹ್ಲಿ ಒಬ್ಬ ಕ್ರಿಕೆಟರ್ ಆಗಿ ಮತ್ತು ವ್ಯಕ್ತಿಯಾಗಿ ಬೆಳೆದ ಪರಿಯನ್ನ ಯುವಿ ಕೊಂಡಾಡಿದ್ದಾರೆ. ಅಲ್ಲದೇ ಆಟದ ಮೇಲೆ ವಿರಾಟ್​ಗಿರುವ ಬದ್ಧತೆ, ಅವರಲ್ಲಿ ಶಿಸ್ತನ್ನ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ಫುಲ್​ಟೈಮ್ ಕ್ಯಾಪ್ಟನ್ ಆಯ್ಕೆಯಾದ ಬೆನ್ನಲ್ಲೇ […]

  • ಯಶ್​​ ಧುಲ್​ ಮಾತ್ರವಲ್ಲ, ರಣಜಿಯಲ್ಲಿ ಭಾರೀ ಇಂಪ್ರೆಸ್​ ಮಾಡಿದೆ ​FIVE ಬೆಸ್ಟ್​ ಇನ್ನಿಂಗ್ಸ್..!

    ದೇಶೀಯ ಕ್ರಿಕೆಟ್​ನ ರಾಜ ಎಂದೇ ಕರೆಯಲಾಗುವ ರಣಜಿ ಟ್ರೋಫಿ ಸದ್ದು ಜೋರಾಗಿದೆ. ಸದ್ಯ ಮೊದಲ ಸುತ್ತಿನ ಎಲೈಟ್​ ಪಂದ್ಯಗಳು ಮುಕ್ತಾಯಗೊಂಡಿವೆ. ಆದ್ರೆ ಕೆಲವರ ಇನ್ನಿಂಗ್ಸ್​ಗಳು ಗಮನ ಸೆಳೆದಿದೆ.​ ಯಶ್​​ಧುಲ್​​ ಬ್ಯಾಕ್​​ ಟು ಬ್ಯಾಕ್​ ಸೆಂಚುರಿ ಸಿಡಿಸಿದ್ದರ ಹೊರತಾಗಿಯೂ FIVE ಬೆಸ್ಟ್​ ಇನ್ನಿಂಗ್ಸ್​​, ಇಂಪ್ರೆಸ್ಸಿವ್​​​ ಆಗಿವೆ. ರಣಜಿ ಟ್ರೋಫಿಯಲ್ಲಿ ಯುವಕರ ಅಬ್ಬರ ಜೋರಾಗಿದ್ದು, ಆಟಗಾರರ ನಡುವೆ ಬಿಗ್​ ಕಾಂಪಿಟೇಷನ್​ ಏರ್ಪಟ್ಟಿದೆ. ಯಂಗ್​​​​ ಕ್ರಿಕೆಟರ್ಸ್​​​​​​​, ಸೀನಿಯರ್​​ಗಳನ್ನೇ ನಿಬ್ಬೆರಗಾಗಿಸುವ ಪರ್ಫಾಮೆನ್ಸ್​ ನೀಡಿದ್ದು, ದಿಗ್ಗಜರ ದಾಖಲೆಗಳನ್ನೇ ಪುಡಿಗಟ್ಟಿದ್ದಾರೆ. ಅದರಲ್ಲೂ ಅಂಡರ್​​-19 ಕ್ಯಾಪ್ಟನ್​​​ ಯಶ್​ಧುಲ್ […]

  • ಪಾಂಡ್ಯರ ನಿದ್ರೆಗೆಡಿಸಿದ ಅಯ್ಯರ್​; ಹಾರ್ದಿಕ್​​ಗೆ ಉಳಿದಿರುವ ಕೊನೆಯ ಆಯ್ಕೆ ಏನು ಗೊತ್ತಾ..?

    ಭಾರತ ತಂಡದಲ್ಲಿ ಅವಕಾಶ ಪಡೆಯುವುದು ಅಷ್ಟು ಸುಲಭವಲ್ಲ. ಚಾನ್ಸ್ ಸಿಕ್ಕ ಮೇಲೆ, ಮಿಂಚದಿದ್ರೆ ತಂಡದಲ್ಲಿ ಜಾಗವಿಲ್ಲ. ಆದ್ರೆ ಕೆಲ ಆಟಗಾರರು ಸಿಕ್ಕ ಅವಕಾಶಗಳಲ್ಲಿ ಭರ್ಜರಿಯಾಗಿ ಶೈನ್ ಆಗ್ತಾ ಸೀನಿಯರ್ ಆಟಗಾರರಿಗೆ ವಿಲನ್ ಆಗಿ ಕಾಡ್ತಿದ್ದಾರೆ ವೆಂಕಟೇಶ್ ಅಯ್ಯರ್. ಐಪಿಎಲ್​ನಲ್ಲಿ ಅಬ್ಬರಿಸದಿದ್ದರೇ, ಪಾಂಡ್ಯ ಸ್ಥಾನಕ್ಕೆ ಕುತ್ತು ಇಂಜುರಿಯಿಂದ ಹಾರ್ದಿಕ್, ಕೆಲ ಸರಣಿಗಳಲ್ಲಿ ಬೌಲಿಂಗ್ ಮಾಡಿರಲಿಲ್ಲ. ಬ್ಯಾಟ್ಸ್​​ಮನ್ ಆಗಿ ಮಾತ್ರ ತಂಡಕ್ಕೆ ತಮ್ಮ ಕೊಡುಗೆ ನೀಡಿದರಷ್ಟೆ. ಇದರಿಂದ ತಂಡಕ್ಕೆ ಫರ್​ಫೆಕ್ಟ್​ ಆಲ್​ರೌಂಡರ್ ಕೊರತೆ ಕಾಡಿತು. ಆದ್ರೆ ವಿಂಡೀಸ್​ ಟಿ20 ಸರಣಿಯಲ್ಲಿ […]

  • ವೃದ್ಧಿಮಾನ್​​​ ಸಾಹಗೆ ಬೆದರಿಕೆ.. ತನಿಖೆಗೆ ಮುಂದಾದ BCCI ಮುಂದಿನ ನಡೆಯೇನು..?

    ಟೀಮ್ ಇಂಡಿಯಾ ಟೆಸ್ಟ್ ಆಟಗಾರ ವೃದ್ಧಿಮಾನ್ ಸಾಹಗೆ ಪತ್ರಕರ್ತರೊಬ್ಬರು ಕಳಿಸಿರೋ ಬೆದರಿಕೆ ಸಂದೇಶದ ಕುರಿತು ತನಿಖೆ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಈ ವಿಚಾರವನ್ನ ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರೋ ಬಿಸಿಸಿಐ, ಸಾಹಗೆ ಬೆದರಿಕೆ ಮೆಸೇಜ್ ಮಾಡಿರೋ ಆ ಪತ್ರಕರ್ತ ಯಾರು..? ಅನ್ನೋದರ ಕುರಿತು ತನಿಖೆ ನಡೆಸಲು ಚಿಂತಿಸುತ್ತಿದೆ. ಒಂದು ವೇಳೆ ಸಾಹಗೆ ಪತ್ರಕರ್ತನಿಂದ ಬೆದರಿಕೆ ಸಂದೇಶ ಬಂದಿರೋದು ನಿಜವೇ ಆಗಿದ್ದರೆ, ಆ ಪತ್ರಕರ್ತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಸಿಸಿಐ ಮುಂದಾಗಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಗೆ ತಮ್ಮನ್ನು […]

  • ಸಾಹ ಮಾತಿನಿಂದ ನನಗೇನು ನೋವಾಗಿಲ್ಲ.. ಕೋಚ್​ ದ್ರಾವಿಡ್​​​ ಹೀಗಂದಿದ್ಯಾಕೆ..?

    ಟೀಮ್ ಇಂಡಿಯಾ ಟೆಸ್ಟ್ ಆಟಗಾರ ವೃದ್ಧಿಮಾನ್ ಸಾಹ, ತಮ್ಮ ವಿರುದ್ಧ ನೀಡಿರುವ ಹೇಳಿಕೆಯಿಂದ ನನಗೆ ನೋವಾಗಿಲ್ಲ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್​ ಹೇಳಿದ್ದಾರೆ. ಅಲ್ಲದೇ, ನಾನು ಸಾಹಗೆ ನಿವೃತ್ತಿ ತೆಗೆದುಕೊಳ್ಳುವಂತೆ ಸೂಚಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಟೀಮ್ ಮ್ಯಾನೇಜ್​ಮೆಂಟ್​ ಭವಿಷ್ಯದ ದೃಷ್ಟಿಯಿಂದ ಯಂಗ್ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ಬೆಳೆಸಲು ನೋಡುತ್ತಿದ್ದು, ಇದರಿಂದ ಇನ್ಮುಂದೆ ನಿಮಗೆ ತಂಡದಲ್ಲಿ ಸ್ಥಾನ ಸಿಗೋದು ಅನುಮಾನ ಎಂದು ಸಾಹಗೆ ಹೇಳಿದ್ದಾಗಿ ದ್ರಾವಿಡ್​ ಸ್ಪಷ್ಟನೆ ನೀಡಿದ್ದಾರೆ. ‘ಸಾಹ ಮಾತಿನಿಂದ ನನಗೆ ಹರ್ಟ್ […]

  • ಟೀಂ ಇಂಡಿಯಾದ ಭವಿಷ್ಯದ ಭರವಸೆ ಯಶ್​ಧುಲ್​ -ಕೊಹ್ಲಿ ಸ್ಥಾನ ತುಂಬೋ ಆಟಗಾರ ಅಂತಿದ್ದಾರೆ ಮಾಜಿ ಕ್ರಿಕೆಟರ್ಸ್​

    ಟೀಮ್​ ಇಂಡಿಯಾದ ರನ್​ ಮಷೀನ್​ ವಿರಾಟ್​​ ಕೊಹ್ಲಿಯ ಬ್ಯಾಟ್​​​ ಸದ್ಯ ರನ್​ ಬರ ಎದುರಿಸ್ತಿದೆ. ನಾಯಕತ್ವದಿಂದ ವಿರಾಟ್​ ಕೊಹ್ಲಿ ಕೆಳಗಿಳಿದ ಬೆನ್ನಲ್ಲೇ ಕೊಹ್ಲಿ ERA ಮುಗೀತು ಎಂಬ ಮಾತುಗಳು ಕೇಳಿ ಬರ್ತಿವೆ. ಆದ್ರೆ ವಾಸ್ತವವಾಗಿ ಈ ಮಾತುಗಳೆಲ್ಲಾ ನಿಜ ಆಗಲ್ಲ ಅನ್ನೋದು ಎಲ್ಲರಿಗೂ ತಿಳಿದಿರೋ ಅಂಶವೇ..! ಹಾಗಿದ್ರೂ ಕಾಲ ಕಳೆದಂತೆ ಹಳೆ ನೀರು ಹರಿದು ಹೊಸ ನೀರು ಬರೋದು ಸಹಜ ನಿಯಮವಾಗಿದೆ. ಭವಿಷ್ಯದಲ್ಲಿ ಕೊಹ್ಲಿ ಸ್ಥಾನವನ್ನ ತುಂಬೋ ಆಟಗಾರ ತಂಡಕ್ಕೆ ಬೇಕೇಬೇಕು. ಅದಕ್ಕೆ ಸೂಕ್ತ ಈ ಆಟಗಾರ. […]

  • ಟಿ20 ಸರಣಿ​​ ವೈಟ್​​ವಾಶ್​​.. ವಿಂಡೀಸ್​​ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ

    ಅಂತಿಮ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ 17 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು ರೋಹಿತ್​ ಪಡೆ ವೈಟ್​ವಾಶ್​ ಮಾಡಿದೆ. ಭಾರತ ಮೊದಲ ಪಂದ್ಯದಲ್ಲಿ 6 ವಿಕೆಟ್​, 2ನೇ ಟಿ20ಯಲ್ಲಿ 8 ರನ್​ಗಳಿಂದ ರೋಚಕ ಗೆದ್ದಿತ್ತು. ಅವಕಾಶ ಕೈ ಚೆಲ್ಲಿದ ಋತುರಾಜ್​, ಭರವಸೆ ಇನ್ನಿಂಗ್ಸ್​ ಕಟ್ಟದ ಶ್ರೇಯಸ್​​​​..! ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯ್ತು. ಸರಣಿಯಲ್ಲಿ ಚೊಚ್ಚಲ ಅವಕಾಶ ಪಡೆದ ಋತುರಾಜ್​ ಗಾಯಕ್ವಾಡ್​​ ಬೌಂಡರಿ […]