Category: Sports

  • ಸೂರ್ಯಕುಮಾರ್​​ ಸಿಡಿಲಬ್ಬರದ ಬ್ಯಾಟಿಂಗ್​​.. ವಿಂಡೀಸ್​​ಗೆ ಟೀಂ ಇಂಡಿಯಾ 185 ರನ್​​ ಟಾರ್ಗೆಟ್​​

    ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಮೂರನೇ ಪಂದ್ಯ ನಡೆಯುತ್ತಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿರೋ ಈ ಕೊನೆಯ ಪಂದ್ಯದಲ್ಲಿ ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​​ ಮಾಡಿದ ಟೀಂ ಇಂಡಿಯಾ 5 ವಿಕೆಟ್​​ ನಷ್ಟಕ್ಕೆ 184 ರನ್​​​ ಬಾರಿಸಿದೆ. ಈ ಮೂಲಕ ವೆಸ್ಟ್​​ ಇಂಡೀಸ್​​ಗೆ 185 ರನ್​​ ಟಾರ್ಗೆಟ್​​ ನೀಡಿದೆ. ಟೀಂ ಇಂಡಿಯಾ ಪರ ಇಶಾನ್ ಕಿಶನ್ 31 ಎಸೆತಗಳಲ್ಲಿ 34 ರನ್ ಗಳಿಸಿದರು. ಸೂರ್ಯಕುಮಾರ್​ ಯಾದವ್​​​ ಕೇಔಲ 31 ಬಾಲ್​​ನಲ್ಲಿ 65 […]

  • ಸೆಲೆಕ್ಟರ್ಸ್​ ಮಾತಿಗೆ ಕಿಮ್ಮತ್ತು ನೀಡದ ಹಾರ್ದಿಕ್​​ ಪಾಂಡ್ಯ..? ಕಮ್​​ಬ್ಯಾಕ್​​ ಆಗೋದು ಡೌಟ್​​

    ಶ್ರೀಲಂಕಾ ಸರಣಿಗೆ ಟೀಮ್ ಇಂಡಿಯಾ ಘೋಷಣೆಯಾಗಿದೆ. ಮೂರು ಪಂದ್ಯಗಳ ಟಿ20 ಮತ್ತು ಎರಡು ಪಂದ್ಯಗಳ ಟೆಸ್ಟ್​​ ಸರಣಿಗೆ ಪ್ರತ್ಯೇಕವಾಗಿ 18 ಸದಸ್ಯರ ತಂಡವನ್ನ ಬಿಸಿಸಿಐ ಪ್ರಕಟಿಸಿದೆ. ಆದರೆ ಶ್ರೀಲಂಕಾ ಸರಣಿಗೆ ರಾಷ್ಟ್ರೀಯ ತಂಡಕ್ಕೆ ಮರಳುತ್ತಾರೆ ಎಂದುಕೊಂಡಿದ್ದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಗೆ ಮತ್ತೆ ನಿರಾಸೆಯಾಗಿದೆ. ತಂಡ ಪ್ರಕಟಿಸಿದ ಬಳಿಕ ಮಾತನಾಡಿದ ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಚೇತನ್​ ಶರ್ಮಾ, ಹಾರ್ದಿಕ್​ ಕಂಬ್ಯಾಕ್​ ಮಾಡೋದು ಕಷ್ಟ ಎಂಬರ್ಥದಲ್ಲಿ ಹೇಳಿದ್ದಾರೆ. ಹಾರ್ದಿಕ್​ಗೆ ರಣಜಿ ಟೂರ್ನಿ ಆಡುವಂತೆ ಸೂಚಿಸಲಾಗಿತ್ತು. ಸಂಪೂರ್ಣ ಫಿಟ್​ನೆಸ್​ […]

  • ತಂಡಕ್ಕೆ ಜಡೇಜಾ ಕಂಬ್ಯಾಕ್; 18 ಸದಸ್ಯರ ತಂಡದಲ್ಲಿ ಅಚ್ಚರಿಯ ಆಯ್ಕೆಗಳು ಯಾವುದು ಗೊತ್ತಾ..?

    ಶ್ರೀಲಂಕಾ ವಿರುದ್ಧ ಟಿ20 ಮತ್ತು ಟೆಸ್ಟ್​​ ಸರಣಿಗೆ ಟೀಮ್​​ ಪ್ರಕಟಗೊಂಡಿದೆ. ಈ ಎರಡು ಸರಣಿಗಳಿಗಾಗಿ ಪ್ರಕಟಗೊಂಡ 18 ಸದಸ್ಯರ ತಂಡದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಒಂದೆಡೆ ಹಿರಿಯ ಆಟಗಾರರನ್ನ ಡ್ರಾಪ್​ ಮಾಡಲಾಗಿದ್ರೆ, ಮತ್ತೊಂದೆಡೆ ಕೆಲ ಆಟಗಾರರು ಅಚ್ಚರಿ ಸೇರ್ಪಡೆಯಾಗಿದ್ದಾರೆ. ಇನ್ನು ಟೆಸ್ಟ್​ ತಂಡದ ನಾಯಕ ಯಾರು ಅನ್ನೋ ಮಿಲಿಯನ್​ ಡಾಲರ್​ ಪ್ರಶ್ನೆಗೂ ಬಿಸಿಸಿಐ ಉತ್ತರ ನೀಡಿದೆ. ವೆಸ್ಟ್​ ಇಂಡೀಸ್ ವಿರುದ್ಧ ಟಿ20 ಸರಣಿ ಮುಗಿದ ನಾಲ್ಕೇ ದಿನಗಳಲ್ಲಿ ಭಾರತ ತಂಡ, ಶ್ರೀಲಂಕಾ ವಿರುದ್ಧ ಸೆಣಸಾಡಲಿದೆ. ತವರಿನಲ್ಲಿ ಫೆಬ್ರವರಿ […]

  • ಕನ್ನಡಿಗರನ್ನು ಕೈಬಿಟ್ಟು ಈ ಬಾರಿಯೂ ನಿರಾಸೆ ಮೂಡಿಸಿದ RCB.. ಫ್ಯಾನ್ಸ್​ ಫುಲ್​ ಗರಂ

    ಐಪಿಎಲ್​ ಮೆಗಾ ಹರಾಜಿನಲ್ಲಿ ಆರ್​ಸಿಬಿ ಈ ಬಾರಿಯೂ ನಿರಾಸೆ ಮೂಡಿಸಿದೆ. ಕನ್ನಡದ ಸ್ಟಾರ್​ ಆಟಗಾರರನ್ನ ಖರೀದಿಸದ ಫ್ರಾಂಚೈಸಿ ಇಬ್ಬರು ಯಂಗ್​​ಸ್ಟರ್​​ಗಳನ್ನ ಮಾತ್ರ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದು ಈಗ ಅಭಿಮಾನಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಬೆಂಗಳೂರು ತಂಡದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇದ್ರೂ, ನಾವು ಆರ್​ಸಿಬಿಗೆ ಸಪೋರ್ಟ್ ಮಾಡ್ಬೇಕಾ, ಅಥವಾ ಬೇರೆ ತಂಡಕ್ಕೆ ಸಪೋರ್ಟ್ ಮಾಡ್ಬೇಕಾ ಅನ್ನೋ ಗೊಂದಲಕ್ಕೆ ಸಿಲುಕಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಯಾವ ತಂಡಕ್ಕೆ ಸಪೋರ್ಟ್​ ಮಾಡಬೇಕು ಎಂಬ ಚರ್ಚೆ ಹುಟ್ಟಿರೋದಕ್ಕೆ ಇದೇ […]

  • ‘RCB ನನ್ನ ಬದುಕನ್ನೇ ಬದಲಿಸಿದೆ’ ಎಂದ ಖ್ಯಾತ ಬೌಲರ್​​​..!

    ಇಂಡಿಯನ್​​ ಪ್ರೀಮಿಯರ್ ಲೀಗ್​​ ಸೀಸನ್​​ 2022 ಇನ್ನೇನು ಶುರುವಾಗಲಿದೆ. ಇತ್ತೀಚೆಗೆ ನಡೆದ ಐಪಿಎಲ್​​ ಮೆಗಾ ಆಕ್ಷನ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬರೋಬ್ಬರಿ 11 ಕೋಟಿ ನೀಡಿ ವೇಗಿ ಹರ್ಷಲ್​ ಪಟೇಲರನ್ನು ಖರೀದಿ ಮಾಡಿದೆ. ಈ ಬೆನ್ನಲ್ಲೇ ಮಾತಾಡಿದ ಹರ್ಷಲ್​​ ಪಟೇಲ್, ​ಕಳೆದ ಐಪಿಎಲ್​​ ವೇಳೆ ಡೆತ್​ ಓವರ್​ಗಳಲ್ಲಿ ಬೌಲಿಂಗ್ ಮಾಡಿದ್ದು, ನನ್ನ ವೃತ್ತಿ ಜೀವನವನ್ನೇ ಬದಲಿತು ಎಂದಿದ್ದಾರೆ. ನಾನು ನನ್ನ ಐಪಿಎಲ್ ಕರಿಯರ್​ನ ಆರಂಭದ 6 ವರ್ಷಗಳು ಆರ್​ಸಿಬಿಯಲ್ಲೇ ಕಳೆದಿದ್ದೆ. ಮತ್ತೆ ದೆಹಲಿ ತಂಡದ ಪರ ಆಡಿದೆ. […]

  • ಪಾಕ್​​​​​ ಕ್ರಿಕೆಟ್​​​ ಲೀಗ್​​ನಲ್ಲೂ ಕಿಂಗ್​​ ಕೊಹ್ಲಿಯದ್ದೇ ಹವಾ.. ಆಗಿದ್ದೇನು?

    ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಿಎಸ್‍ಎಲ್ ಕ್ರಿಕೆಟ್​ ಲೀಗ್‍ನಲ್ಲಿ ವಿರಾಟ್ ಕೊಹ್ಲಿ ಆಡಬೇಕೆಂದು ಪಾಕ್​ನ ಕ್ರಿಕೆಟ್ ಆಭಿಮಾನಿಗಳು ಆಗ್ರಹಿಸಿದ್ದಾರೆ. ಪಿಎಸ್‍ಎಲ್‌ನಲ್ಲಿ ವಿರಾಟ್ ಸೆಂಚುರಿಯನ್ನು ನೋಡಬೇಕು.. ಕೊಹ್ಲಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಬನ್ನಿ ಎಂಬ ಪೋಸ್ಟರ್​ಗಳನ್ನು ಹಿಡಿದ ಕ್ರಿಕೆಟ್​ ಅಭಿಮಾನಿಗಳ ಫೊಟೋಗಳು ಸೋಶಿಯಲ್​ ಮಿಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ಈ ಹಿಂದೆ ಪಾಕ್​ನ ಕ್ರಿಕೆಟ್ ಅಭಿಮಾನಿಗಳು, ನಮಗೆ ಭಾರತ ಕಾಶ್ಮೀರವನ್ನು ಕೊಡುವುದು ಬೇಡ, ವಿರಾಟ್ ಕೊಹ್ಲಿಯನ್ನು ಕೊಡಲಿ ಎಂಬ ಪೋಸ್ಟರ್​ಗಳನ್ನು ಹಿಡಿದ ಪೋಟೋಗಳು ಸಹ ಸೋಶಿಯಲ್​ ಮಿಡಿಯಾದಲ್ಲಿ ಸಾಕಷ್ಟು ವೈರಲ್​ ಆಗಿತ್ತು. […]

  • ಶ್ರೀಲಂಕಾ ವಿರುದ್ಧ ಸರಣಿ​​​.. ಟೀಂ ಇಂಡಿಯಾ ಬಲಿಷ್ಠ ತಂಡ ಪ್ರಕಟ.. ಟೆಸ್ಟ್​ಗೂ ರೋಹಿತ್​​ ಕ್ಯಾಪ್ಟನ್​​​

    ಭಾರತ-ಶ್ರೀಲಂಕಾ ಸರಣಿಗಾಗಿ ಟೀಮ್ ಇಂಡಿಯಾ ಪ್ರಕಟವಾಗಿದೆ. ಸೀಮಿತ ಓವರ್​​ಗಳ ನಾಯಕ ರೋಹಿತ್​ ಶರ್ಮಾಗೇ ಟೆಸ್ಟ್ ತಂಡದ ಜವಾಬ್ದಾರಿಯನ್ನೂ ವಹಿಸಲಾಗಿದೆ. ಆದರೆ KL ರಾಹುಲ್​ ಅಲಭ್ಯತೆಯಲ್ಲಿ ಜಸ್​ಪ್ರಿತ್​ ಬೂಮ್ರಾಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಸದ್ಯ ರಾಹುಲ್​ ಗಾಯಗೊಂಡಿದ್ದು ಲಂಕಾ ಸರಣಿಯಿಂದ ಹೊರಗುಳಿದಿದ್ದಾರೆ. ಆದ್ದರಿಂದ ಲಂಕಾ ವಿರುದ್ಧದ ಟಿ20 ಸರಣಿ ಹಾಗೂ ಟೆಸ್ಟ್ ಸರಣಿಗೆ ಬೂಮ್ರಾರನ್ನ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ ಹೊಸ ಮುಖಗಳಿಗೂ ಮಣೆ ಹಾಕಲಾಗಿದೆ. ಇನ್ನು ಸಂಜು ಸ್ಯಾಮ್ಸನ್​ ಟಿ20 ತಂಡಕ್ಕೆ ಕಂಬ್ಯಾಕ್​ ಮಾಡಿದ್ದಾರೆ. ಇನ್ನು ಗಾಯದಿಂದ […]

  • ಕಾವ್ಯಾ ಮಾರನ್​ ಏಕಪಕ್ಷೀಯ ನಿರ್ಧಾರ; SRH ತೊರೆದ ಸೈಮನ್​ ಕಾಟಿಚ್..!

    ಐಪಿಎಲ್​ ಹರಾಜು ಮುಗಿದು ವಾರವೂ ಕಳೆದಿಲ್ಲ. ಅದಾಗಲೇ ಸನ್​ರೈಸರ್ಸ್​​ ಹೈದ್ರಾಬಾದ್​​ ಫ್ರಾಂಚೈಸಿಯಲ್ಲಿ ಬಿರುಗಾಳಿ ಎದ್ದಿದೆ. ಆಕ್ಷನ್​ ಮುಗಿದ ಬೆನ್ನಲ್ಲೇ ಅಸಿಸ್ಟೆಂಟ್​​ಕೋಚ್​​ ಹುದ್ದೆಗೆ ಸೈಮನ್​ ಕಾಟಿಚ್​​​ ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಇದೀಗ ಹೊಸ ವಿವಾದವನ್ನ ಹುಟ್ಟುಹಾಕಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ ಹರಾಜು ಮುಗಿದು ವಾರ ಕಳೆದಿಲ್ಲ. ಅದಾಗಲೇ ಹೊಸ ಬೆಳವಣಿಗೆಯೊಂದು ನಡೆದಿದ್ದು, ಇದು ವಿವಾದವನ್ನ ಹುಟ್ಟು ಹಾಕಿದೆ. ಕಳೆದ ಸೀಸನ್​ ಅಂತ್ಯದ ಬಳಿಕ ಸನ್​ರೈಸರ್ಸ್​​ ಹೈದ್ರಾಬಾದ್​ ಕ್ಯಾಂಪ್​ ಸೇರಿದ್ದ ಅಸಿಸ್ಟೆಂಟ್​​ ಕೋಚ್​​ ಸೈಮನ್​​ ಕಾಟಿಚ್​​ ದಿಢೀರ್​ ರಾಜೀನಾಮೆ ನೀಡಿದ್ದಾರೆ. […]

  • ನಾನು ರೇ* ​​​ಮಾಡಿ ಜೈಲಿಗೆ ಹೋಗಿರಲಿಲ್ಲ -ಡಿ.ಕೆ.ಶಿವಕುಮಾರ್​​

    ಬೆಂಗಳೂರು: ನಾನು ರೇಪ್​​ ಮಾಡಿ ಜೈಲಿಗೆ ಹೋಗಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ನ್ಯೂಸ್​​ಫಸ್ಟ್​ ಜತೆ ಮಾತಾಡಿದ ಡಿ.ಕೆ ಶಿವಕುಮಾರ್​​​, ನಾನು ರೇಪ್​​​​ ಮಾಡಿ ಜೈಲಿಗೆ ಹೋಗಲಿಲ್ಲ. ಭ್ರಷ್ಟಚಾರ ಮಾಡಿ ಜೈಲಿಗೆ ಹೋಗಿರಲಿಲ್ಲ, ಬದಲಿಗೆ ನಮ್ಮ ಶಾಸಕರನ್ನು ರಕ್ಷಿಸಿದ್ದಕ್ಕಾಗಿ ಜೈಲಿಗೆ ಹೋಗಿದ್ದು ಎಂದಿದ್ದಾರೆ. ಬಚ್ಚಲು ಬಾಯಿ ಈಶ್ವರಪ್ಪ ಮಾತಿಗೆ ನಾನು ಏನೂ ಹೇಳೋದಿಲ್ಲ. ಬಿಜೆಪಿಯವ್ರು ಎಷ್ಟು ಮಂದಿ ಜೈಲಿಗೆ ಹೋದರು ಎಂದು ಇಡೀ ರಾಜ್ಯ ನೋಡಿದೆ. ಅವರು ವೈಯಕ್ತಿಕ ವಿಚಾರಕ್ಕೆ ಮಾತಾಡಬೇಕು. ಆಗಲೇ ಒಂದು, […]

  • ಕೊಹ್ಲಿ ಬ್ಯಾಟಿಂಗ್​​ ಬಗ್ಗೆ ಟೀಂ ಇಂಡಿಯಾ ಕ್ರಿಕೆಟರ್​​ ಹೀಗಂದ್ರು..!

    ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಫೇಲ್ಯೂರ್ ಆಗಿದ್ದ ರನ್​ ಮಷಿನ್ ಕೊಹ್ಲಿ, ಟಿ-20 ಸರಣಿಯಲ್ಲೂ ಅದೇ ಹಾದಿ ಹಿಡಿದಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 17 ರನ್​ಗಳಿಸಿದ್ದಾಗ ಬಿಗ್ ಶಾಟ್ ಬಾರಿಸಲು ಮುಂದಾಗಿ ಕೊಹ್ಲಿ ಔಟಾದ್ರು. ಕೊಹ್ಲಿಯ ಈ ಆಟದ ಬಗ್ಗೆ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್​ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಈ ಮೊದಲು ಅನಗತ್ಯ ಸಂದರ್ಭಗಳಲ್ಲಿ ಸಿಕ್ಸರ್​ ಬಾರಿಸುವ ರಿಸ್ಕ್​ ತೆಗೆದುಕೊಳ್ತಿರಲಿಲ್ಲ. ಸಿಂಗಲ್ಸ್, ಡಬಲ್ಸ್ ಫೋರ್​ಗಳ ಮೂಲಕ ರನ್​ ಕಲೆಹಾಕುತ್ತಿದ್ರು. ಆದ್ರೆ, […]

  • ಟಿ20 ಪಂದ್ಯ.. ಟಾಸ್​​ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ, ವಿಂಡೀಸ್​​ ಫಸ್ಟ್​ ಬ್ಯಾಟಿಂಗ್​​

    ವೆಸ್ಟ್​ ಇಂಡೀಸ್​​, ಟೀಂ ಇಂಡಿಯಾ ಟಿ20 ಸೀರೀಸ್​​ ಈಗಾಗಲೇ ಶುರುವಾಗಿದೆ. ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಇನ್ನು, ಟಾಸ್​ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ಬೌಲಿಂಗ್​​ ಆಯ್ದುಕೊಂಡಿದ್ದಾರೆ. ಹೀಗಾಗಿ ನಾಯಕ ಕೀರನ್ ಪೊಲಾರ್ಡ್ ನೇತೃತ್ವದ ವಿಂಡೀಸ್​ ತಂಡ ಮೊದಲು ಬ್ಯಾಟಿಂಗ್​ ಮಾಡಲಿದೆ. ಟಿ20 ಸರಣಿಯಲ್ಲಿ ಭಾರತ 1-0 ಸಾಧಿಸಿದೆ. ಈಗ ಎರಡು ತಂಡಗಳ ನಡುವೆ ಎರಡನೇ ಪಂದ್ಯ ಗೆಲ್ಲೋಕೆ ಪೈಪೋಟಿ ನಡೆಯುತ್ತಿದೆ. […]

  • ಬರೋಬ್ಬರಿ ₹15 ಕೋಟಿ ನೀಡಿ ಖರೀದಿಸಿದ ಗುಜರಾತ್​​​.. ಹಾರ್ದಿಕ್​​ ಪಾಂಡ್ಯ ಬಗ್ಗೆ ಹೇಳಿದ್ದೇನು?

    ಹಾರ್ದಿಕ್​ ಪಾಂಡ್ಯರನ್ನ ಆಲ್​ರೌಂಡರ್ ಬದಲಿಗೆ ಒಬ್ಬ ಪರಿಪೂರ್ಣ ಬ್ಯಾಟ್ಸ್​​ಮನ್ ಆಗಿ ನೋಡಲು ಗುಜರಾತ್ ಟೈಟಾನ್ಸ್ ತಂಡ ಇಷ್ಟ ಪಡುತ್ತೆ ಎಂದು ಗುಜರಾತ್​​ ಟೈಟಾನ್ಸ್​​​ ಹೆಡ್​ ಕೋಚ್ ಆಶಿಶ್ ನೆಹ್ರಾ ಹೇಳಿದ್ದಾರೆ. ಪಾಂಡ್ಯ ಬೌಲಿಂಗ್ ಮಾಡಿದ್ರೆ, ತಂಡಕ್ಕೆ ಅನುಕೂಲವಾಗಲಿದೆ. ಆದ್ರೆ, ನಿಜ ಹೇಳ್ಬಕಂದ್ರೆ, ನಾವು ಹಾರ್ದಿಕ್​ರನ್ನ ಆಲ್​ರೌಂಡರ್​ಕ್ಕಿಂತ ಹೆಚ್ಚಾಗಿ ಬ್ಯಾಟ್ಸ್​ಮನ್ ಆಗಿ ನೋಡಲು ಬಯಸುತ್ತೇವೆ, ಬ್ಯಾಟಿಂಗ್​ನಲ್ಲಿ ಹಾರ್ದಿಕ್​ ಯಾವುದೇ ಕ್ರಮಾಂಕದಲ್ಲೂ ಫಿಟ್ ಆಗ್ತಾರೆ ಎಂದು ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ. ಫಿಟ್​ನೆಸ್ ಕಾರಣದಿಂದಾಗಿ ಬೌಲಿಂಗ್​ನಿಂದ ಹಾರ್ದಿಕ್ ಪಾಂಡ್ಯ ದೂರ ಉಳಿದಿದ್ದಾರೆ. ಟಿ-20 […]

  • ರೈನಾ ಕೈಬಿಟ್ಟು, ಈ ಆಟಗಾರನನ್ನು ಖರೀದಿಸಿದ CSK.. ಚೆನ್ನೈ ಸೂಪರ್​​ ಕಿಂಗ್ಸ್​ ವಿರುದ್ಧವೇ ತಿರುಗಿಬಿದ್ದ ಫ್ಯಾನ್ಸ್​​

    PL 2022 ಮೆಗಾ ಹರಾಜಿನ ಬೆನ್ನಲ್ಲೇ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ದ ಭಾರೀ ಆಕ್ರೋಶಗಳು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಸಿಎಸ್​ಕೆ ತಂಡವು ಶ್ರೀಲಂಕಾ ಆಟಗಾರನನ್ನು ಖರೀದಿಸಿರುವುದು. ಶ್ರೀಲಂಕಾದ ಯುವ ಸ್ಪಿನ್ನರ್ ಮಹೇಶ್ ತೀಕ್ಷಣ ಅವರ ಖರೀದಿಯನ್ನು ಅನೇಕ ಸಿಎಸ್​ಕೆ ಅಭಿಮಾನಿಗಳು ವಿರೋಧಿಸಲಾರಂಭಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಈ ತಂಡದ ವಿರುದ್ಧ ಅಭಿಯಾನ ಕೂಡ ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ #Boycott_ChennaiSuperKings ಎಂದು ಹ್ಯಾಶ್​ಟ್ಯಾಗ್ ಬಳಸಿ ಟ್ವೀಟ್​ ಮಾಡಲಾಗ್ತಿದೆ. ಫೆಬ್ರವರಿ 14 […]

  • 4 ವರ್ಷದ ಹಳೇ ಸೇಡು ತೀರಿಸಿಕೊಳ್ಳಲು ಹೋಗಿ ತೀವ್ರ ಮುಜುಗರಕ್ಕೊಳಗಾದ ಆಟಗಾರ.. ಏನಾಯ್ತು?

    ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಹಳೆಯ ಸೇಡು ತೀರಿಸಿಕೊಳ್ಳಲು ಮುಂದಾದ ಆಸ್ಟ್ರೇಲಿಯಾದ ಆಲ್​ರೌಂಡರ್​ ತೀವ್ರ ಮುಜುಗರಕ್ಕೊಳಗಾಗಿದ್ದಾರೆ. 2018ರಲ್ಲಿ ಬೆನ್ ಕಟಿಂಗ್ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಅನ್ನು ಪ್ರತಿನಿಧಿಸಿದರು. ಈ ವೇಳೆ ಸೊಹೈಲ್ ತನ್ವೀರ್, ಬೆನ್‍ ಕಟಿಂಗ್ ರ ವಿಕೇಟ್ ಪಡೆದ ಮೇಲೆ , ಬೆನ್ ಕಟಿಂಗ್ ಮುಖವನ್ನ ದಿಟ್ಟಿಸಿ ನೋಡುತ್ತ ತನ್ನ ಎರಡೂ ಕೈಗಳನ್ನ ಮೇಲಕ್ಕೆತ್ತಿ ಮಧ್ಯದ ಬೆರಳನ್ನು ತೋರುತ್ತಾರೆ. ಇದನ್ನೆ ಮನಸ್ಸಿನಲ್ಲಿಟ್ಟುಕೊಂಡ ಆಟಗಾರ ಸೇಡಿಗಾಗಿ ಕಾದಿರುತ್ತಾರೆ. ಇತ್ತೀಚಿಗೆ ಆರಂಭವಾದ ಪಾಕಿಸ್ತಾನ ಪ್ರೀಮಿಯರ್​ ಲೀಗ್​ನಲ್ಲಿ […]

  • ಆರ್​​ಸಿಬಿಯ ‘ಈ’ ಪ್ಲೇಯರ್​​ಗೆ ಸಂದಾಯವಾಗಿರೋ ಪ್ರತಿ ಪೈಸೆಗೂ ಅರ್ಹ ಎಂದ ಗವಾಸ್ಕರ್

    ಕಳೆದ ಬಾರಿಯ ಆರ್​ಸಿಬಿ ಪರ ಕಣಕ್ಕಿಳಿದಿದ್ದ  ವೇಗಿ, ಹರ್ಷಲ್​ ಪಟೇಲ್ ಪರ್ಪಲ್​ ಕ್ಯಾಪ್​ ಹೋಲ್ಡರ್​ ಆಗಿದ್ದರು. ಈ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಹರ್ಷಲ್​ರನ್ನು ಆರ್​ಸಿಬಿ ರಿಟೇನ್ಡ್​​ ಮಾಡಿಕೊಂಡಿರಲಿಲ್ಲ. ಹೀಗಾಗಿ ಹರಾಜಿನಲ್ಲಿ ಸ್ಪರ್ಧಿಸಿದ್ದ ಹರ್ಷಲ್​ರನ್ನು ಕೊಳ್ಳಲು ಫ್ರಾಂಚೈಸಿಗಳು ತೀವ್ರ ಪೈಪೋಟಿಗೆ ಮುಂದಾಗಿದ್ದರು. ಕೊನೆಯಲ್ಲಿ ಈ ವೇಗಿಯನ್ನು ತಂಡಕ್ಕೆ ಕಂಬ್ಯಾಕ್​ ಮಾಡಿಕೊಳ್ಳೋದ್ರಲ್ಲಿ ಆರ್​ಸಿಬಿ ಫ್ರಾಂಚೈಸಿ ಯಶಸ್ವಿಯಾಗಿದ್ದರು. ಇನ್ನು ಹರಾಜಿನಲ್ಲಿ ಬರೋಬ್ಬರಿ 10.75 ಕೋಟಿಗೆ ಬಿಕರಿಯಾದ ಹರ್ಷಲ್​ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ, ಸುನೀಲ್​ ಗವಾಸ್ಕರ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. […]

  • ‘ನಾನ್​ ಹೇಳ್ತಿದ್ದಿನಿ ರಿವ್ಯೂ ತಗೋ’ -ವಿರಾಟ್​ ಮಾತಿಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಏನ್​ ಮಾಡಿದ್ರು..?

    ಕಟ್ಟುನಿಟ್ಟಿನ ಬೌಲಿಂಗ್​ ದಾಳಿ ಮತ್ತು ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಟೀಮ್​ ಇಂಡಿಯಾ, ಮೊದಲ ಟಿ-20 ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಜಯಭೇರಿ ಬಾರಿಸಿದೆ. 6 ವಿಕೆಟ್​ಗಳ ಗೆಲುವು ದಾಖಲಿಸಿದ ರೋಹಿತ್​​ ಪಡೆ, ಮೂರು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಸಾಧಿಸಿದೆ. ಏಕದಿನ ಸರಣಿಯಲ್ಲಿ ವೈಟ್​ವಾಶ್​ ಮುಖಭಂಗ ಅನುಭವಿಸಿದ್ದ ಪ್ರವಾಸಿ ವಿಂಡೀಸ್​ ಮೊದಲ ಟಿ-20 ಪಂದ್ಯದಲ್ಲೂ ಸೋತು ಸುಣ್ಣವಾಗಿದೆ. ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ರೋಹಿತ್​ ಶರ್ಮಾ ವಿಂಡೀಸ್​ ಅನ್ನು 158 ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯ್ತು. […]

  • ಅವಕಾಶಕ್ಕಾಗಿ ಕಾಯ್ತಿರುವ ಆಟಗಾರರಿಗೆ ಶರ್ಮಾ ಹೇಳಿದ ಕಿವಿ ಮಾತು ಏನು..?

    ಇಂಜುರಿಗೆ ತುತ್ತಾಗಿ ಟೀಮ್​ ಇಂಡಿಯಾದಿಂದ ಪ್ರಮುಖ ಆಟಗಾರರೇ ಹೊರ ಬಿದ್ದಿದ್ದಾರೆ. ಅದರ ಬೆನ್ನಲ್ಲೇ ಇವರಿಗೆಲ್ಲಾ ವಿಶ್ವಕಪ್​ ಆಡೋ ಅವಕಾಶ ಬಹುತೇಕ ಅಸಾಧ್ಯ ಎನ್ನಲಾಗ್ತಿದೆ. ಆದ್ರೆ, ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಇವರೆಲ್ಲರಿಗೂ ಎಲ್ಲಾ ಉಹಾಪೋಹಗಳನ್ನ ತಳ್ಳಿ ಹಾಕಿ ಡ್ರಾಪ್​ ಔಟ್​ ಆದ ಆಟಗಾರರಿಗೆ ಗುಡ್​ನ್ಯೂಸ್​​ ನೀಡಿದ್ದಾರೆ. ನಿನ್ನೆಯಿಂದ ಆರಂಭವಾಗಿರುವ ಇಂಡೋ-ವೆಸ್ಟ್​​ ಇಂಡೀಸ್​​ ಸೀರಿಸ್​ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದ್ರೆ, ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​​ ಮಾತ್ರ ವಿಶ್ವಕಪ್​ ಅನ್ನ ಟಾರ್ಗೆಟ್​​ ಮಾಡಿದೆ. ಅದಕ್ಕಾಗೇ ಈಗಿನಿಂದಲೇ ಗೇಮ್​ […]

  • ಟಿ20 ಮೊದಲ ಪಂದ್ಯ.. ಟೀಂ ಇಂಡಿಯಾಗೆ 158 ರನ್​​ ಟಾರ್ಗೆಟ್​ ಕೊಟ್ಟ ವಿಂಡೀಸ್​​

    ವೆಸ್ಟ್​ ಇಂಡೀಸ್​​, ಟೀಂ ಇಂಡಿಯಾ ಟಿ20 ಸೀರೀಸ್​​ ಇಂದಿನಿಂದ ಶುರುವಾಗಿದೆ. ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಇನ್ನು, ಟಾಸ್​ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ಬೌಲಿಂಗ್​​ ಆಯ್ದುಕೊಂಡಿದ್ದಾರೆ. ಹೀಗಾಗಿ ನಾಯಕ ಕೀರನ್ ಪೊಲಾರ್ಡ್ ನೇತೃತ್ವದ ವಿಂಡೀಸ್​ ತಂಡ ಮೊದಲು ಬ್ಯಾಟಿಂಗ್​ ಮಾಡಬೇಕಾಯ್ತು. ವೆಸ್ಟ್​ ಇಂಡೀಸ್​​ ಪರ ನಿಕೋಲಸ್​ ಪೂರನ್​ 61, ಕೈಲ್​ ಮೇಯರ್ಸ್​ 31, ಪೊಲಾರ್ಡ್​​ 24 ರನ್​​ ಬಾರಿಸಿದರು. ಇವರ […]

  • IPL ಅಲ್ಲ, ಟೀಂ ಇಂಡಿಯಾ ಬಗ್ಗೆ ಯೋಚನೆ ಮಾಡಿ.. ರೋಹಿತ್​​ ಹೀಗೆ ವಾರ್ನಿಂಗ್​​ ಕೊಟ್ಟಿದ್ದು ಯಾರಿಗೆ?

    ನಾಯಕ ರೋಹಿತ್ ಶರ್ಮಾ ಟೀಮ್ ಇಂಡಿಯಾ ಆಟಗಾರರಿಗೆ ಖಡಕ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ ನಮ್ಮ ಆದ್ಯತೆ ಐಪಿಎಲ್ ಅಲ್ಲ, ಬದಲಿಗೆ ಕೇವಲ ಟಿ 20 ಸರಣಿ ಮಾತ್ರ ಎಂದು ಹೇಳಿದ್ದಾರೆ. ಐಪಿಎಲ್​​​ ಹರಾಜಿನ ನಂತರ, ಟೀಮ್ ಇಂಡಿಯಾ ಸಭೆಯನ್ನು ನಡೆಸಿದೆ. ಸಭೆಯಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರಿಗೂ ಮುಂದಿನ ಎರಡು ವಾರಗಳ ಕಾಲ ಐಪಿಎಲ್​​ ಅಲ್ಲ, ದೇಶಕ್ಕಾಗಿ ಆಡುವತ್ತ ಗಮನ ಹರಿಸಿ ಎಂದು ಸೂಚಿಸಿದ್ದೇವೆ ಎಂದರು. ಪ್ರತಿಯೊಬ್ಬ ಆಟಗಾರನು ವೃತ್ತಿಪರ. ಎಲ್ಲರಿಗೂ […]

  • ವಿದೇಶಿ ಆಟಗಾರರ ಮೇಲೆ ₹237.5 ಕೋಟಿ ಡೀಲ್.. ಮೊದಲ ಸ್ಥಾನದಲ್ಲಿ ಕೆರಿಬಿಯನ್ ಕಲಿಗಳು..!

    ನಿರೀಕ್ಷಿತ ಆಟಗಾರರು ಹಣದ ಲೂಟಿ ಮಾಡಿದ್ರೆ, ಮತ್ತೊಂದೆಡೆ ಅನಿರೀಕ್ಷಿತ ಆಟಗಾರರು ದಾಖಲೆಯ ಮೊತ್ತಕ್ಕೆ ಸೇಲಾಗಿ ಅಚ್ಚರಿ ಮೂಡಿಸಿದ್ದಾರೆ. ಅದರಲ್ಲೂ ವಿದೇಶಿ ಆಟಗಾರರೇ ಕೋಟಿ ಕೋಟಿ ಕೊಳ್ಳೆ ಹೊಡೆದಿರೋದು ವಿಶೇಷ. ಹಾಗಾದ್ರೆ, ಯಾವ ದೇಶದ ಆಟಗಾರರಿಗೆ ಐಪಿಎಲ್​ನಲ್ಲಿ ಹೆಚ್ಚಿನ ಮೊತ್ತ ಸಿಕ್ಕಿದೆ ಅನ್ನೋದನ್ನ ವಿವರ ಇಲ್ಲಿದೆ. ಕ್ರಿಕೆಟ್​ ಲೋಕದಲ್ಲಿ ಎಷ್ಟೇ ಲೀಗ್​ಗಳಿದ್ದರೂ, ಇಂಡಿಯನ್​ ಪ್ರೀಮಿಯರ್ ಲೀಗ್​ಗೆ ​ಇರೋ ಕ್ರೇಜೇ ಬೇರೆ..! ಹಣ, ನೇಮ್​, ಫೇಮ್… ಹೀಗೆ ಎಲ್ಲಾ ವಿಚಾರದಲ್ಲೂ IPL​ಗೆ ಮತ್ತೊಂದು ಲೀಗ್ ಮ್ಯಾಚ್ ಆಗಲು ಸಾಧ್ಯವೇ ಇಲ್ಲ. […]

  • ಭಾರತದ ಅಳಿಯ ಆಗ್ತಿದ್ದಾರೆ RCB ಪ್ಲೇಯರ್​​ ಮ್ಯಾಕ್ಸ್​ವೆಲ್; ಹುಡುಗಿ ಯಾರು? ಎಲ್ಲಿ ಮದುವೆ?

    ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೇನ್​ ಮ್ಯಾಕ್ಸ್‌ವೆಲ್ ಮತ್ತು ಭಾರತೀಯ ಮೂಲದ ವಿನಿ ರಾಮನ್​ ಅವರ ಮದುವೆ ದಿನಾಂಕ ನಿಗದಿಯಾಗಿದೆ. ಮಾರ್ಚ್​ 27ರಂದು ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ಈ ಹಿಂದೆ 2020ರಲ್ಲಿ ಮ್ಯಾಕ್ಸ್‌ವೆಲ್​ ಮತ್ತು ವಿನಿ ರಾಮನ್​ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮ್ಯಾಕ್ಸ್​ ಮತ್ತು ತಮಿಳುನಾಡಿನ ವಿನಿ ರಾಮನ್​ ಅವರ ಮದುವೆಯ ಆಮಂತ್ರಣ ಪತ್ರಿಕೆ ಲಭ್ಯವಾಗಿದ್ದು, ಇದರಲ್ಲಿ ತಿಳಿಸಿದಂತೆ ಮೆಲ್ಬೋರ್ನ್​ನಲ್ಲಿ ಮಾ.27ರಂದು ವಿವಾಹ ಸಮಾರಂಭ ಆಯೋಜಿಸಲಾಗಿದೆ. ಭಾರತೀಯ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ. GlennMaxwell marrying Vini Raman. Going […]

  • ಐಪಿಎಲ್​ ಮೆಗಾ ಹರಾಜು ಅಂತ್ಯ: ಇವತ್ತಿನ ಟಾಪ್ ಬಿಡ್​ ಪ್ಲೇಯರ್ಸ್​​​​​ ಯಾಱರು..?

    ಬೆಂಗಳೂರು:ಮಿಲಿಯನ್ ಡಾಲರ್ ಸ್ಪೋಟ್ಸ್​​​ ಐಪಿಎಲ್ ಬಿಡ್ಡಿಂಗ್ ಹವಾ ಜೋರಾಗಿದೆ. ಫ್ರಾಂಚೈಸಿಗಳು ಆಟಗಾರರನ್ನ ಕೋಟಿ ಕೋಟಿ ಸುರಿದು ಖರೀದಿಸಿವೆ. 2ನೇ ದಿನದ ಬಿಡ್ಡಿಂಗ್​​​ನಲ್ಲಿ ಕೆಲವರು ನಿರೀಕ್ಷೆ ಮೀರಿ ಬಿಕರಿಯಾಗಿದ್ರೆ, ಮತ್ತೆ ಕೆಲವರು ಬಿಡ್ ಆಗದೇ ಹೊರಗುಳಿದಿದ್ದಾರೆ. ತೆರೆ ಕಂಡ 15ನೇ ಆವೃತ್ತಿಯ ಐಪಿಎಲ್ ಮೆಗಾ ಆಕ್ಷನ್! ಇವತ್ತು ದಾಖಲೆ ಮೊತ್ತಕ್ಕೆ ಸೇಲಾದ ಲಿವಿಂಗ್​​​ಸ್ಟೋನ್! ಐಪಿಎಲ್. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಅಭಿಮಾನಿಗಳ ಪಾಲಿನ ದೊಡ್ಡ ಹಬ್ಬ. ಆಟಗಾರರನ್ನ ಕೋಟ್ಯಾಧಿಪತಿಗಳನ್ನಾಗಿ ಮಾಡಿದ್ರೆ, ಫ್ರಾಂಚೈಸಿಗಳ ಪ್ರತಿಷ್ಠೆ. ಕಳೆದೆರಡು ವರ್ಷಗಳಿಂದ ಕೊರೊನಾದಿಂದ ಮಂಕಾಗಿದ್ದ […]

  • ₹9.25 ಕೋಟಿಯಿಂದ ₹90 ಲಕ್ಷಕ್ಕೆ ಕುಸಿದ ಕನ್ನಡಿಗ ಕೃಷ್ಣಪ್ಪ ಗೌತಮ್ ಮೌಲ್ಯ-ಕಾರಣವೇನು?

    ಕಳೆದ ಬಾರಿಯ ಐಪಿಎಲ್​​ ಹರಾಜಿನಲ್ಲಿ ದಾಖಲೆಯ 9.25 ಕೋಟಿ ರೂಪಾಯಿ ಮೊತ್ತಕ್ಕೆ ಬಿಕರಿಯಾಗಿದ್ದ ಕೃಷ್ಣಪ್ಪ ಗೌತಮ್​​ಗೆ, 2022ರ ಮೆಗಾ ಹರಾಜು ಶಾಕ್​ ನೀಡಿದ್ದು, ಒಂದು ವರ್ಷದ ಅಂತರದಲ್ಲಿ ಕನ್ನಡಿಗ ಆಟಗಾರನ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಹೌದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್​ ಹರಾಜು ಪ್ರಕ್ರಿಯೆ 2ನೇ ದಿನಕ್ಕೆ ಕಾಲಿಟ್ಟಿದೆ. ಈ ಆಲ್​​ರೌಂಡರ್​​ ಕಳೆದ ಟೂರ್ನಿಯಲ್ಲಿ 9.25 ಕೋಟಿ ರೂಪಾಯಿ ಪಡೆದುಕೊಳ್ಳುವುದರೊಂದಿಗೆ ಭಾರೀ ಮೊತ್ತ ಗಳಿಸಿದ ಆನ್​​ಕ್ಯಾಪ್ಡ್​ ಪ್ಲೇಯರ್ ಎಂಬ ಖ್ಯಾತಿಯನ್ನು ಗಳಿಸಿದ್ದರು. ಆದರೆ ಈ ಬಾರಿ […]

  • ಬರೋಬ್ಬರಿ 10.75 ಕೋಟಿಗೆ RCB ಸೇರಿದ ಶ್ರೀಲಂಕಾ ಬೌಲರ್​​.. ಖುಷೀಲಿ ಏನಂದ್ರು ಗೊತ್ತಾ?

    ಬೆಂಗಳೂರಿನಲ್ಲಿ ನಡೆದ ಮೊದಲ ದಿನದ ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಸೀಸನ್​​ 15 ಮೆಗಾ ಹರಾಜಿನಲ್ಲಿ ಶ್ರೀಲಂಕಾದ ವನಿಂದು ಹಸರಂಗ ಬರೋಬ್ಬರಿ 10.75 ಕೋಟಿಗೆ ಬಿಡ್​ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವನಿಂದು ಹಸರಂಗ ಅವರಿಗೆ ಈ ಬಾರಿ 10.75 ಕೋಟಿ ನೀಡಿ ಖರೀದಿಸಿದೆ. ಕಳೆದ ವರ್ಷ ಆರ್​ಸಿಬಿ ಪರ ವನಿಂದು ಹಸರಂಗ ಕೇವಲ 2 ಪಂದ್ಯ ಮಾತ್ರ ಆಡಿದ್ದರು. ಆಗ 1 ರನ್ ಗಳಿಸಿ 6 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯದೆ 60 […]

  • CSK ಇತಿಹಾಸಲ್ಲಿಯೇ ದಾಖಲೆ ಮೊತ್ತಕ್ಕೆ ಬಿಕರಿಯಾದ ಚಹರ್​.. ಗುರು ಧೋನಿಯನ್ನೇ ಹಿಂದಿಕ್ಕಿದ ಶಿಷ್ಯ!

    ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ಸ್ ಮನ್ ಆಗಿಯೂ ಹಾಗೂ ಉತ್ತಮ ಬ್ಯಾಟ್ಸ್​ಮನ್​ ಆಗಿಯೂ ಗಮನ ಸೆಳೆದಿರುವ ದೀಪಕ್​ ಚಹರ್,​ ಇಂದು ನಡೆದ ಮೆಗಾ ಹರಾಜಿನಲ್ಲಿ ಧಮಾಕಾ ಸೃಷ್ಟಿಸಿದ್ದಾರೆ. ಚಹರ್​ ಹರಾಜಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ಇತಿಹಾಸದಲ್ಲಿ ಅತ್ಯಧಿಕ ಮೊತ್ತಕ್ಕೆ ಬಿಕರಿಯಾದ ಆಟಗಾರ ಎನ್ನಿಸಿಕೊಂಡಿದ್ದಾರೆ. Back where he belonged – Chahar back in yellow💛💵Congratulations @ChennaiIPL @deepak_chahar9 #TATAIPLAuction @TataCompanies pic.twitter.com/FTxUrcID6H — IndianPremierLeague (@IPL) February 12, 2022 ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್​ […]

  • ಬರೋಬ್ಬರಿ ₹15 ಕೋಟಿಗೆ ಮಾರಾಟವಾದ ಇಶಾನ್​ ಕಿಶನ್​ -ಯಾವ ತಂಡಕ್ಕೆ..?

    ಸಿಲಿಕಾನ್​ ಸಿಟಿಯಲ್ಲಿ 15ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮೊದಲ ದಿನದ ಮೆಗಾ ಹರಾಜು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಆಕ್ಷನ್​ನಲ್ಲಿ ದೇಶ ವಿದೇಶಗಳ ಹಲವಾರು ಖ್ಯಾತ ಪ್ಲೇಯರ್​ಗಳು ಭಾಗವಹಿಸಿದ್ದು, ಫ್ರಾಂಚೈಸಿಗಳು ತಮ್ಮ ನೆಚ್ಚಿನ ಆಟಗಾರರನ್ನು ಖರೀದಿಸಲು ಮುಂದಾಗಿದ್ದಾರೆ. ಅಂತೆಯೇ ಯುವ ಆಟಗಾರ ಇಶಾನ್​ ಕಿಶನ್​ಗೆ ಭರ್ಜರಿ ಜಾಕ್​ಪಾಟ್​ ಹೊಡೆದಿದೆ. ಈ ಬಾರಿಯ ಆಕ್ಷನ್​ನಲ್ಲಿ ಇಶಾನ್​ ಕಿಶನ್​ ಇದುವರೆಗೆ ನಡೆದ  ಬಿಡ್​ಗಳಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರನಾಗಿದ್ದಾರೆ. ಇಶಾನ್​ರನ್ನು ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 15.25 ಕೋಟಿ […]

  • ಅಂದು ₹15 ಕೋಟಿಗೆ ಬಿಕರಿಯಾಗಿದ್ದ ಆಟಗಾರನಿಗೆ ಶಾಕ್ ಕೊಟ್ಟ ಮೆಗಾ ಆಕ್ಷನ್..!

    ಸಿಲಿಕಾನ್​ ಸಿಟಿಯಲ್ಲಿ  15ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮೊದಲ ದಿನದ ಮೆಗಾ ಹರಾಜು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಆಕ್ಷನ್​ನಲ್ಲಿ ದೇಶ ವಿದೇಶಗಳ ಹಲವಾರು ಖ್ಯಾತ ಪ್ಲೇಯರ್​ಗಳು ಭಾಗವಹಿಸಿದ್ದು, ಫ್ರಾಂಚೈಸಿಗಳು ತಮ್ಮ ನೆಚ್ಚಿನ ಆಟಗಾರರನ್ನು ಖರೀದಿಸಲು ಮುಂದಾಗಿದ್ದಾರೆ. ಅಂತೆಯೇ ಆಸ್ಟ್ರೇಲಿಯಾದ ಟೆಸ್ಟ್ ತಂಡದ ಕ್ಯಾಪ್ಟನ್​ ಹಾಗೂ ಮಾಜಿ ಕೆಕೆಆರ್​ ತಂಡದ ಆಟಗಾರನಾದ ಪ್ಯಾಟ್​ ಕಮಿನ್ಸ್​ ಅಚ್ಚರಿಯ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಹೌದು ಕಳೆದ ಋತುವಿನಲ್ಲಿ ಐಪಿಎಲ್​ನ ಅತ್ಯಂತ ದುಬಾರಿ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಪ್ಯಾಟ್​ ಕಮಿನ್ಸ್,  ಅಂದು […]

  • ಕನ್ನಡಿಗನ ಕೈಬಿಟ್ಟ ಆರ್​ಸಿಬಿ.. ದುಬಾರಿ ಮೊತ್ತಕ್ಕೆ ಪಡಿಕ್ಕಲ್​ ಯಾವ ತಂಡದ ಪಾಲಾದ್ರು..?

    ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ 15ನೇ ಆವೃತ್ತಿಯ ಐಪಿಎಲ್​ ಹರಾಜಿನಲ್ಲಿ ಕನ್ನಡಿಗ ದೇವದತ್​ ಪಡಿಕ್ಕಲ್​ ಈ ಬಾರಿ ರಾಜಸ್ಥಾನ ರಾಯಲ್ಸ್​ ಪಾಲಾಗಿದ್ದಾರೆ. ಕಳೆದ 2 ಸೀಸನ್​ಗಳಲ್ಲಿ ರಾಯಲ್​ ಚಾಲೇಂಜರ್ಸ್​ ಬೆಂಗಳೂರು ಪರ ಆಡಿದ್ದ ಪಡಿಕ್ಕಲ್​ ಅಮೋಘ ಪ್ರದರ್ಶನ ತೋರಿದ್ದರು. ಈ ಹರಾಜಿನಲ್ಲಿ 2 ಕೋಟಿ ರೂಪಾಯಿಯ ಮೂಲ ಬೆಲೆಯೊಂದಿಗೆ ಭಾಗವಹಿಸಿದ್ದ, ಯುವ ಆಟಗಾರನನ್ನು ಖರೀದಿಸಲು ಫ್ರಾಂಚೈಸಿಗಳು ಮುಗಿಬಿದ್ದಿದ್ದರು.ಅದ್ಯಾಗೂ ದೇವದತ್​ರನ್ನು  ಖರೀದಿಸಲು ಆರ್​ಸಿಬಿ ಯತ್ನಿಸಿತ್ತು. Yaar Ye CSK Lena Kisko chahti hai — Nikita Malviya […]

  • BREAKING ಐಪಿಎಲ್​ ಹರಾಜು ವೇಳೆ ಏಕಾಏಕಿ ಕುಸಿದು ಬಿದ್ದ ಆಕ್ಷನರ್​

    ಬೆಂಗಳೂರಿನಲ್ಲಿ ನಡೆಯುತ್ತಿರುವ 15ನೇ ಆವೃತ್ತಿಯ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಆಕ್ಷನ್​ ನಡೆಸುತ್ತಿದ್ದ ಆಕ್ಷನರ್​ ಏಕಾಏಕಿ ಕುಸಿದು ಬಿದ್ದಿದ್ದಾರೆ. ಆಕ್ಷನರ್​ ಹ್ಯೂಜ್​ ಎಡ್ಮಿಟ್ಸ್​​ ಬಿಡ್ ಮಾಡುತ್ತಿದ್ದಂತೆ ಏಕಾಏಕಿ ವೇದಿಕೆ ಮೇಲಿಂದ ಕುಸಿದು ಬಿದ್ದಿದ್ದಾರೆ. ಹಿನ್ನೆಲೆ ಸದ್ಯ ಹರಾಜು ಪ್ರಕ್ರಿಯೆಯನ್ನು ಕೆಲಕಾಲ ಸ್ಥಗಿತಗೊಳಿಸಲಾಗಿದೆ. ​ಹ್ಯೂಜ್​ ಎಡ್ಮಿಟ್ಸ್ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲ ಆವೃತ್ತಿಯಿಂದ ಐಪಿಎಲ್​ ಆಕ್ಷನ್​ ನಡೆಸುತ್ತಿದ್ದ ಎಡ್ಮಿಟ್ಸ್​ ಸಾಕಷ್ಟು ಜನಪ್ರಿಯ ಆಕ್ಷನರ್​ಗಳಲ್ಲಿ ಒಬ್ಬರಾಗಿದ್ದಾರೆ. News First Live Kannada

  • ಹರಾಜಿನಲ್ಲಿ ಅಯ್ಯರ್ ಭಾರೀ ದುಬಾರಿ -ಯಾವ ಆಟಗಾರರು ಎಷ್ಟು ಕೋಟಿಗೆ ಸೇಲ್..?

    ಬೆಂಗಳೂರಿನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ಭರ್ಜರಿಯಾಗಿ ನಡೆಯುತ್ತಿದ್ದು, ಶ್ರೇಯಸ್ ಅಯ್ಯರ್ ಈವರೆಗೂ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆಗಿರುವ ಆಟಗಾರ ಅನ್ನೋ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಬರೋಬ್ಬರಿ 12.25 ಕೋಟಿಗೆ ಶ್ರೇಯಸ್ ಅಯ್ಯರ್ ಸೇಲ್ ಆಗಿದ್ದಾರೆ. ಇನ್ನು ರಬಾಡ ಅವರನ್ನ ಪಂಜಾಬ್ ತಂಡ 9.25 ಕೋಟಿಗೆ ರೂಪಾಯಿಗೆ ಖರೀದಿಸಿದೆ. ಶಿಖರ್ ಧವನ್ ಕೂಡ ಪಂಜಾಬ್ ಪಾಲಾಗಿದ್ದು, 8.25 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಹಾಗೆಯೇ ಟ್ರೆಂಟ್ ಬೋಲ್ಟ್ 8 ಕೋಟಿ ರೂಪಾಯಿಗೆ ರಾಜಸ್ಥಾನದ ಪಾಲಾಗಿದ್ದಾರೆ. ಯಾರು ಯಾವ ತಂಡದ ಪಾಲಾದ್ರು..? […]

  • ಯಂಗ್​​ಸ್ಟರ್​​ಗಳ ಮೇಲೆ ಫ್ರಾಂಚೈಸಿಗಳ ಕಣ್ಣು.. ಕನ್ನಡಿಗನೇ ಹರಾಜು ಕಣದಲ್ಲಿರೋ ‘ಹಾಟ್​​ ಕೇಕ್’..!

    ಐಪಿಎಲ್​ ಆಕ್ಷನ್​ನಲ್ಲಿ ಅನುಭವಿ ಸ್ಟಾರ್​ಗಳ ಮೇಲೆ ಮಾತ್ರವಲ್ಲ. ಯಂಗ್​​ಸ್ಟರ್​​ಗಳ ಮೇಲೂ ಫ್ರಾಂಚೈಸಿಗಳ ಚಿತ್ತ ನೆಟ್ಟಿದೆ. ಅದರಲ್ಲೂ ಕಳೆದ ಕೆಲ ಸೀಸನ್​ಗಳಿಂದ ಅಬ್ಬರದ ಪ್ರದರ್ಶನದಿಂದ ಗಮನ ಸೆಳೆದಿರುವ ಈ ಐವರು ಭಾರೀ ಮೊತ್ತಕ್ಕೆ ಡೀಲ್​ ಆಗೋದ್ರಲ್ಲಿ ಅನುಮಾನವೇ ಇಲ್ಲ. ಆ ಯಂಗ್​ಸ್ಟರ್​ಗಳ ಡಿಟೇಲ್ಸ್​ ಇಲ್ಲಿದೆ.ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ​ ಹರಾಜಿಗೆ ವೇದಿಕೆ ಸಜ್ಜಾಗಿದೆ. ಕೆಲವೇ ಗಂಟೆಗಳಲ್ಲಿ ಯಾರು ಎಷ್ಟು ಮೊತ್ತಕ್ಕೆ ಸೇಲ್​ ಆಗ್ತಾರೆ ಎಂಬ ಕುತೂಹಲಕ್ಕೆ ಬ್ರೇಕ್​ ಬೀಳಲಿದೆ. ಈ ಬಾರಿಯ ಮೆಗಾ ಆಕ್ಷನ್​ನಲ್ಲಿ ಅನುಭವಿಗಳ ಜೊತೆಗೆ ಯಂಗ್​​ಸ್ಟರ್​​ಗಳ […]

  • IPL​ ಮೆಗಾ ಆಕ್ಷನ್​ಗೆ ಕೌಂಟ್​ಡೌನ್; ಫ್ರಾಂಚೈಸಿಗಳ ಕೈಯಲ್ಲಿ 590 ಆಟಗಾರರ ಭವಿಷ್ಯ

    ಐಪಿಎಲ್​ ಮೆಗಾ ಆಕ್ಷನ್​ಗೆ ಕೌಂಟ್​ಡೌನ್ ಶುರುವಾಗಿದೆ. ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ದೇಶ, ವಿದೇಶಗಳ ಒಟ್ಟು 590 ಆಟಗಾರರು ಹರಾಜಿಗೆ ಲಭ್ಯರಿದ್ದಾರೆ. ಇದರಲ್ಲಿ 370 ಭಾರತೀಯ ಕ್ರಿಕೆಟರ್ಸ್ ಹಾಗೂ 220 ವಿದೇಶಿ ಆಟಗಾರರಿದ್ದಾರೆ. ಲೀಗ್​ಗೆ ಈ ಬಾರಿ ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ ಎರಡು ತಂಡಗಳು ಸೇರಿಕೊಂಡಿದ್ದು, ಹರಾಜು ಪ್ರಕ್ರಿಯೆಯು ಹಿಂದಿಗಿಂತ ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ. ಈಗಾಗ್ಲೇ ಎಲ್ಲಾ ಫ್ರಾಂಚೈಸಿಗಳು ಕೆಲ ಆಟಗಾರರನ್ನ ರಿಟೇನ್ ಮಾಡಿಕೊಂಡಿವೆ. ಎಲ್ಲಾ […]

  • ಹರಾಜಿನಲ್ಲಿ ಈ 5 ಬೌಲರ್ಸ್​​ ಮೇಲೆ ಫ್ರಾಂಚೈಸಿಗಳ ಕಣ್ಣು.. ಯಾರಿಗೆ ಎಷ್ಟು ಕೋಟಿ?

    ಐಪಿಎಲ್​​ ಮೆಗಾ ಹರಾಜಿಗೆ ಒಂದು ದಿನವಷ್ಟೆ ಬಾಕಿ ಉಳಿದಿದೆ. ಸ್ಟಾರ್​ ಬ್ಯಾಟ್ಸ್​​ಮನ್​​ಗಳ ನಡುವೆ ಅನ್​ಕ್ಯಾಪ್ಡ್​​ ಪ್ಲೇಯರ್​​​​​​ಗಳು ಕೂಡ ಭಾರೀ ಮೊತ್ತಕ್ಕೆ ಸೇಲಾಗೋ ಸಾಧ್ಯತೆ ಇದೆ. ಅದರಲ್ಲೂ ಈ ಟಾಪ್​ – 5 ಬೌಲರ್​​ಗಳು ಈ ಬಾರಿ ಕೋಟಿ ಕೋಟಿ ದುಡ್ಡನ್ನ ತಮ್ಮ ಜೇಬಿಗಿಳಿಸಿಕೊಳ್ಳೋದು ಕನ್ಫರ್ಮ್​ ಅಂತಾನೆ ಹೇಳಲಾಗ್ತಿದೆ. IPL 15ನೇ ಆವೃತ್ತಿಯ ಮೆಗಾ ಹರಾಜಿಗೆ ಕೌಂಟ್​ಡೌನ್ ಶುರುವಾಗಿದೆ. ನಾಳೆಯಿಂದ 2 ದಿನಗಳ ಕಾಲ ಬೆಂಗಳೂರಿನಲ್ಲಿ ಬಿಡ್ಡಿಂಗ್ ನಡೆಯಲಿದ್ದು, 590 ಆಟಗಾರರು ಕಣದಲ್ಲಿದ್ದಾರೆ. ಈಗಾಗಲೇ ಎಲ್ಲಾ ತಂಡಗಳು ಘಟಾನುಘಟಿ […]

  • ಪಂಜಾಬ್ ತಂಡಕ್ಕೆ ಮತ್ತೊಂದು ಬಿಗ್​ ಶಾಕ್; ಕೊಚ್ ಹುದ್ದೆ ತೊರೆದ ಮಾಜಿ ಕ್ರಿಕೆಟಿಗ

    ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ, ವಾಸೀಂ ಜಾಫರ್, ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳನ್ನ ರಂಜಿಸುತ್ತ ಇರುತ್ತಾರೆ. ಆದರೆ ಇಂದು ಟ್ವಿಟರ್​ನಲ್ಲಿ, ಬೇರೆಯದ್ದೇ ಕಾರಣಕ್ಕೆ ಜಾಫರ್ ಸುದ್ದಿಯಲ್ಲಿದ್ದಾರೆ. ಐಪಿಎಲ್-2022 ಮೆಗಾ ಹರಾಜಿಗೆ ಕೌಂಟ್​ಡೌನ್​ ಇರುವಾಗಲೇ, ಕಿಂಗ್ಸ್​ XI ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್​​ಗೆ ರಾಜೀನಾಮೆ ನೀಡಿದ್ದಾರೆ. 2019 ರಿಂದ ಪಂಜಾಬ್ ತಂಡದಲ್ಲಿ ಗುರುತಿಸಿಕೊಂಡಿದ್ದ ಜಾಫರ್, 2021ರವರೆಗೆ ಪಂಜಾಬ್ ತಂಡದ ಬ್ಯಾಟಿಂಗ್ ಲೈನ್​​ ಆಟಗಾರರಿಗೆ ಟ್ರೈನಿಂಗ್ ನೀಡುತ್ತಿದ್ದರು. ಐಪಿಎಲ್-2022 ಮೆಗಾ ಹರಾಜಿಗೆ ಒಂದು ದಿನ ಬಾಕಿಯಿರುವಾಗ […]

  • ಕೊಹ್ಲಿ ಟೀಕಾಕಾರರ ವಿರುದ್ಧ ಗವಾಸ್ಕರ್ ಗರಂ; ಮುಟ್ಟಿ ನೋಡಿಕೊಳ್ಳುವಂಥ ಉತ್ತರ ಕೊಟ್ಟ ಲೆಜೆಂಡ್

    ವಿರಾಟ್​ ಕೊಹ್ಲಿ ಔಟ್​ ಆಫ್​ ಫಾರ್ಮ್​ನಲ್ಲಿಲ್ಲ. ಆದ್ರೆ, ಅವರಿಗೆ ಅದೃಷ್ಟ ಸಾಥ್ ನೀಡ್ತಿಲ್ಲ ಎಂದು ಲೆಜೆಂಡ್​ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ಬ್ಯಾಟ್ಸ್​​ಮನ್​ಗೂ ಲಕ್ ಅನ್ನೋದು ಬೇಕು. ​​ಬ್ಯಾಟಿಂದ ಬಾಲ್ ಎಡ್ಜ್ ಆಗಿ ಫೀಲ್ಡರ್​​ ಕ್ಯಾಚ್​ ಕೈ ಚೆಲ್ಲಬೇಕು ಇಂತ ಅದೃಷ್ಟ ಪ್ರತಿ ಬ್ಯಾಟ್ಸ್​ಮನ್​ಗೆ ಸಿಗಬೇಕು. ಅಥವಾ ಫೀಲ್ಡರ್ ಇಲ್ಲದ ಕಡೆ ಬಾಲ್​ ಬೀಳಬೇಕು. ಆದ್ರೆ, ಕಳೆದ ಹಲವು ಪಂದ್ಯಗಳಲ್ಲಿ ವಿರಾಟ್​ ಕೊಹ್ಲಿಗೆ ಇಂತಹ ಅದೃಷ್ಟ ಒದಗಿ ಬರುತ್ತಿಲ್ಲ ಎಂದಿದ್ದಾರೆ. ಆದ್ರೂ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ […]

  • ಈ ಯುವ ಆಟಗಾರನಿಂದಾಗಿ ಭುವನೇಶ್ವರ್​​​ ಪಾಲಿಗೆ ಮುಚ್ಚುತ್ತಾ ಟೀಂ​ ಇಂಡಿಯಾ ಬಾಗಿಲು.?

    ಸಾಲಿಡ್​ ಪೇಸ್​, ಸಖತ್​​ ಸ್ಪೆಲ್​.. ಕರಾರುವಕ್​ ಬೌಲಿಂಗ್​.! ಎಸೆದ ಮೊದಲ ಓವರ್​ನಿಂದ ಹಿಡಿದು ಕೊನೆಯ ಓವರ್​ವರೆಗೂ ಅದೇ ಎನರ್ಜಿ. ವೇರಿಯೇಷೇಷನ್​, ಲೈನ್​ ಆ್ಯಂಡ್​ ಲೆಂಥ್​, ಪೇಸ್​​ ಈ ಮೂರು​ ವಿಚಾರದಲ್ಲಂತೂ ರಾಜಿಯೇ ಇಲ್ಲ. ನಮ್ಮ ಕನ್ನಡಿಗ ಆಟಗಾರ ಪ್ರಸಿದ್ಧ ಕೃಷ್ಣ. ಮೊನ್ನೆ ವಿಂಡೀಸ್​ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಎಸೆದ 9 ಓವರ್​ಗಳಲ್ಲಿ ಒಂದೇ ಒಂದು ವೈಡ್​ ಅಥವಾ ನೋಬಾಲ್​ ಎಸೆಯದ ಪ್ರಸಿದ್ಧ ಕೇವಲ 12 ರನ್​ ನೀಡಿ ಬರೋಬ್ಬರಿ 4 ವಿಕೆಟ್​​ ಕಬಳಿಸಿದ್ರು. ಮಿಂಚಿನ ಪ್ರದರ್ಶನದ […]

  • ಭಾರತದ ಬೌಲರ್​ಗಳ ದಾಳಿಗೆ ವಿಂಡೀಸ್ ಉಡೀಸ್.. ಏಕದಿನ ಸರಣಿ ಕ್ಲೀನ್​ಸ್ವೀಪ್

    ವೆಸ್ಟ್​ ವಿಂಡೀಸ್ ವಿರುದ್ಧದ ಮೂರು ಏಕದಿನ ಸರಣಿಯಲ್ಲಿ ಭಾರತ, ಕ್ಲೀನ್​ಸ್ವೀಪ್ ಮಾಡಿ ಟ್ರೋಫಿಯನ್ನ ಮುಡಿಗೇರಿಸಿಕೊಂಡಿದೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಂತಿಮ ಮತ್ತು ಮೂರನೇ ಏಕದಿನ ಪಂದ್ಯದಲ್ಲೂ ಟೀಮ್​ ಇಂಡಿಯಾ 96 ರನ್​​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನ 3-0 ಅಂತರದಲ್ಲಿ ರೋಹಿತ್​ ಪಡೆ ಕ್ಲೀನ್​ ಸ್ವೀಪ್​ ಸಾಧಿಸಿದ್ದು, ಪ್ರವಾಸಿ ತಂಡ ಮುಖಭಂಗಕ್ಕೆ ಒಳಗಾಗಿದೆ. ಬ್ಯಾಟಿಂಗ್​​-ಬೌಲಿಂಗ್​ ಪ್ರಾಬಲ್ಯ ಸಾಧಿಸಿದ ಭಾರತ, ವೆಸ್ಟ್​​​​ ವಿಂಡೀಸ್​ ವಿರುದ್ಧ ಸತತ 11ನೇ ಸರಣಿಯನ್ನು ಗೆದ್ದ ದಾಖಲೆ […]

  • ಚೆನ್ನಾಗಿ ಆಡ್ತಿದ್ರೂ ತಂಡದಿಂದ ಕಿತ್ತು ಹಾಕಿದ್ರು -ಮೌನ ಮುರಿದ ರಹಾನೆ

    ಕಳೆದ ಎರಡು ವರ್ಷಗಳಿಂದ ಟೆಸ್ಟ್​ ಕ್ರಿಕೆಟ್​​ನಲ್ಲಿ ಸತತ ವೈಫಲ್ಯ ಅನುಭವಿಸಲು ಕಾರಣ ಏನೆಂಬುನ್ನು ಅಜಿಂಕ್ಯ ರಹಾನೆ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಹಾನೆ, ಟೆಸ್ಟ್​ ಕ್ರಿಕೆಟ್​ಗೆ ಮಾತ್ರ ಅವಲಂಬಿತವಾಗಿದ್ದೆ ಎಂದು ಹೇಳಿದ್ದಾರೆ. ಕೊರೊನಾ ಕಾರಣ ರಣಜಿ ಮತ್ತು ಬೇರೆ ದೇಶೀ ಟೂರ್ನಿಗಳು ಇಲ್ಲದೆ ಮೂರು ವರ್ಷಗಳಿಂದ ಒಂದೇ ಸ್ವರೂಪದಲ್ಲಿ ಕ್ರಿಕೆಟ್​ ಆಡಬೇಕಾಯಿತು. ಈ ಹಿನ್ನೆಲೆ ರನ್​​​​ ಗಳಿಸಲು ಸಾಧ್ಯವಾಗಲಿಲ್ಲ. ಇದು ನಾನೇ ಅಲ್ಲ, ಯಾವುದೇ ಆಟಗಾರ ಯಾವುದೇ ಕ್ರಿಕೆಟ್​​​ನಲ್ಲಿ ಕಣಕ್ಕಿಳಿಯದೆ ಮನೆಗೇ ಸೀಮಿತವಾದರೆ ವೈಫಲ್ಯ ಅನುಭವಿಸುವುದು ಸಾಮಾನ್ಯ. […]

  • BREAKING ಪಂತ್​-ಅಯ್ಯರ್ ಸೊಗಸಾದ ಆಟ; ವಿಂಡೀಸ್​ಗೆ ಸವಾಲಿನ ಟಾರ್ಗೆಟ್​

    ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್​ ವಿಂಡೀಸ್​ ವಿರುದ್ಧದ, ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಬ್ಯಾಟಿಂಗ್ ಮುಗಿಸಿದೆ. ಶ್ರೇಯಸ್​ ಅಯ್ಯರ್ ಹಾಗೂ ರಿಷಬ್​ ಪಂತ್​ ಭರ್ಜರಿ ಆಟದ ನೆರವಿನಿಂದ ಟೀಂ ಇಂಡಿಯಾ ವಿಂಡೀಸ್​ಗೆ  265 ರನ್​ಗಳ ಟಾರ್ಗೆಟ್​ ನೀಡಿದೆ. ಶ್ರೇಯಸ್​​ ಅಯ್ಯರ್​ 111 ಎಸೆತಗಳಲ್ಲಿ 80 ರನ್​ ಗಳಿಸಿ ಶತಕದ ಹೊಸ್ತಿಲಲ್ಲಿ ಮುಗ್ಗರಿಸಿದರು. ಇನ್ನು ಪಂತ್​ 56 ಎಸೆತಗಳಲ್ಲಿ ಆಕರ್ಷಕ ಅರ್ಧ ಶತಕ (54) ಸಿಡಿಸಿ ತಂಡಕ್ಕೆ ನೆರವಾದರು. ಇಬ್ಬರ ನಿರ್ಗಮನದ ಬಳಿಕ ತಂಡಕ್ಕೆ […]

  • ಐಪಿಎಲ್​ ಗುಂಗಲ್ಲೇ ಮೋದಿ ಸ್ಟೇಡಿಯಂಗೆ ಇಳಿದ ರೋಹಿತ್​ ಬಾಯ್ಸ್​

    ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ, ಅಹಮದಾಬಾದ್​ನ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಹುಡುಗರು ಸರಣಿ ಕ್ಲೀನ್​ ಸ್ವೀಪ್​ ಮಾಡುವ ಗುರಿ ಹೊಂದಿದ್ದಾರೆ. ಇನ್ನು ಈ ಪಂದ್ಯದ ಮೇಲೆ ಐಪಿಎಲ್​ ಹರಾಜು ಸಾಕಷ್ಟು ಪ್ರಭಾವ ಬೀರಲಿದೆ ಎನ್ನಲಾಗ್ತಿದೆ. ಹೌದು ಇನ್ನೊಂದು ದಿನ ಕಳೆದ್ರೆ ಐಪಿಎಲ್​ ಮೆಗಾ ಆಕ್ಷನ್ ನಡೆಯಲಿದೆ. ಐಪಿಎಲ್​ ಫ್ರಾಂಚೈಸಿಗಳ ಕಣ್ಣು ಎಲ್ಲಾ ಆಟಗಾರರ ಮೇಲೆ ಇರೋದ್ರಲ್ಲಿ ಅನುಮಾನವೇ ಇಲ್ಲ. […]

  • ದಾಖಲೆಯ ಮೊತ್ತಕ್ಕೆ ಬಿಕರಿಯಾಗ್ತಾರಂತೆ ಆರ್​ಸಿಬಿಯ ಮಾಜಿ ಬೌಲರ್​..!

    ಐಪಿಎಲ್​ 15ನೇ ಆವೃತ್ತಿಯ ಮೆಗಾ ಹರಾಜಿಗೆ ಇನ್ನೊಂದೇ ದಿನ ಬಾಕಿ ಇದೆ. ನಾಳೆ ಹರಾಜು ಪ್ರಕ್ರಿಯೆ ನಮ್ಮ ಸಿಲಿಕಾನ್​ ಸಿಟಿಯಲ್ಲಿ ಶುರುವಾಗಲಿದ್ದು ಯಾವ ಯಾವ ಆಟಗಾರನ ಹಣೆಬರಹ ಹೇಗಿದೆ ಎಂದು ಗೊತ್ತಾಗಲಿದೆ. ಕಳೆದ ಟೂರ್ನಿಯಲ್ಲಿ 32 ವಿಕೆಟ್​​ ಕಬಳಿಸಿ ಅತಿ ಹೆಚ್ಚು ವಿಕೆಟ್​ ಪಡೆದು ಅಗ್ರ ಬೌಲರ್​​ ಎನಿಸಿದ ವೇಗಿ ಹರ್ಷಲ್​ ಪಟೇಲ್, ಈ ಬಾರಿಯ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾಗೋ ಬೌಲರ್​ ಎಂದು ಅಂದಾಜಿಸಲಾಗುತ್ತಿದೆ.​ ಈ ಕುರಿತು ಫ್ರಾಂಚೈಸಿ ಬಳಗದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿವೆ […]

  • ಐಪಿಎಲ್​ಗೆ ಹೊಸದಾಗಿ ಸೇರ್ಪಡೆಯಾದ ಅಹಮದಾಬಾದ್​ ತಂಡದ ಹೆಸರು ಫೈನಲ್..!​

    ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಆವೃತ್ತಿಗೆ ಹೊಸದಾಗ ಸೇರ್ಪಡೆಗೊಂಡ ಅಹಮದಾಬಾದ್ ಫ್ರಾಂಚೈಸಿ, ಅಂತೂ ಇಂತೂ ತನ್ನ ತಂಡದ ಹೆಸರನ್ನು ಫೈನಲ್​ ಮಾಡಿದೆ. 15ಮೇ ಎಡಿಶನ್​ನ ಐಪಿಎಲ್​ಗೆ ಸಿದ್ಧತೆಗಳು ಭರದಿಂದ ಸಾಗಿವೆ. ನಾಡಿದ್ದು ಅಂದರೆ ಫೆಬ್ರವರಿ 12-13ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ನಡೆಯಲಿದೆ. ಇತ್ತ ಐಪಿಎಲ್​ಗೆ 10ನೇ ತಂಡವಾಗಿ ಎಂಟ್ರಿಕೊಟ್ಟ ಅಹಮದಾಬಾದ್ ಫ್ರಾಂಚೈಸಿ ಮೇಲೆ ಎಲ್ಲರ ಕಣ್ಣಿದೆ. ಒಂದೊಂದೆ ಮಾಹಿತಿಯನ್ನು ಬಿಟ್ಟು ಕೊಡುತ್ತಿರುವ ಫ್ರಾಂಚೈಸಿ ಸದ್ಯ ತನ್ನ ಟೀಂನ ಹೆಸರನ್ನು ಘೋಷಿಸಿದೆ. ‘ಗುಜರಾತ್​ ಟೈಟಾನ್ಸ್’ ಎಂದು ​ಅಹಮದಾಬಾದ್ ಫ್ರಾಂಚೈಸಿ […]

  • ಕಿಂಚಿತ್ತೂ ಕುಗ್ಗಿಲ್ಲ MSD ಬ್ರ್ಯಾಂಡ್​​ ವ್ಯಾಲ್ಯೂ.. ಒಂದೇ ವಾರದಲ್ಲೇ 3 ಒಪ್ಪಂದಕ್ಕೆ ಸಹಿ..!

    ಧೋನಿ ಕ್ರಿಕೆಟ್​​ ಬಿಟ್ರೂ, ಕ್ರಿಕೆಟ್​ ಲೋಕ ಮಾತ್ರ ಮಾಹಿಯನ್ನ ಬಿಡಲ್ಲ. ಅದರಲ್ಲೂ ಜಾಹೀರಾತು ಲೋಕಕ್ಕಂತೂ ಮಹೇಂದ್ರ ಈಗಲೂ ಅಧಿಪತಿ. ಇದಕ್ಕೆ ಕಳೆದೊಂದು ವಾರದ ಬೆಳವಣಿಗೆಗಳೇ ಸಾಕ್ಷಿಯಾಗಿವೆ. ಅಗಸ್ಟ್​​ 15 2020. ಮಿಸ್ಟರ್​ ಕೂಲ್​ ಧೋನಿ ಅಭಿಮಾನಿಗಳಿಗೆ ಶಾಕ್​ ಕೊಟ್ಟ ದಿನ. ಐಪಿಎಲ್​ನಲ್ಲಿ ಮಾಹಿ ಬ್ಯಾಟಿಂಗ್​ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾಯ್ತಿರೋವಾಗ್ಲೇ, ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಧೋನಿ ಗುಡ್​ ಬೈ ಹೇಳಿ ಬೇಸರ ತರಿಸಿದ್ರು. ಧೋನಿ ಈ ರಿಟೈರ್​ಮೆಂಟ್​ ಶಾಕ್​ ನೀಡಿ 2 ವರ್ಷಗಳೇ ಉರುಳಿವೆ. ಸದ್ಯ ಈ ಆವೃತ್ತಿಯ ಬಳಿಕ […]

  • RCB ಫ್ರಾಂಚೈಸಿಗೆ ಬೇಕಿದೆ ಬಿಗ್ ಸ್ಟಾರ್ಸ್​.. ಹೇಗಿದೆ ಹರಾಜಿನ ಲೆಕ್ಕಾಚಾರ..?

    ಈ ಬಾರಿ ಐಪಿಎಲ್ ಆಟಗಾರರ ಹರಾಜಿನಲ್ಲಿ, ಯಾರು ದಾಖಲೆ ಮೊತ್ತಕ್ಕೆ ಸೇಲ್ ಆಗ್ತಾರೆ? ಜೇಸನ್ ಹೋಲ್ಡರ್, ಶ್ರೇಯಸ್ ಅಯ್ಯರ್​, ಡೇವಿಡ್ ವಾರ್ನರ್ ಮೇಲೆ, ಯಾಕೆ ಫ್ರಾಂಚೈಸಿಗಳ ಕಣ್ಣು? ತೆರೆ ಹಿಂದೆ ಐಪಿಎಲ್ ಫ್ರಾಂಚೈಸಿಗಳ ಪ್ಲಾನ್ ಏನು? ಈ ಕುರಿತ ಇಂ ಟರೆಸ್ಟಿಂಗ್ ವಿಚಾರಗಳು ಇಲ್ಲಿವೆ. ಐಪಿಎಲ್ ಹರಾಜಿಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಒಂದೆಡೆ ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆಗೆ ಭರ್ಜರಿ ಸಿದ್ಧತೆ ನಡೆಸಿಕೊಳ್ತಿದ್ದು, ಕೆಲ ಆಟಗಾರರನ್ನ ಖರೀದಿ ಮಾಡಲೇಬೇಕು ಅಂತ ಫಿಕ್ಸ್ ಆಗಿವೆ. ಮತ್ತೊಂದೆಡೆ […]

  • ಕ್ರಿಕೆಟ್​​ ಬಿಟ್ಟು, ನಿಮ್ಮಪ್ಪನ ಆಟೋ ಓಡಿಸು ಎಂದಿದ್ದರು.. ಕಣ್ಣೀರಿಟ್ಟ RCB ಬೌಲರ್​ ಸಿರಾಜ್​​

    ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್, ತಮ್ಮ ಆರಂಭಿಕ ಐಪಿಎಲ್​ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಈ ಸಂಬಂಧ ಮಾತಾಡಿದ ಸಿರಾಜ್​​​ ಆಗ ಆಗ್ತಿದ್ದ ಟ್ರೋಲ್​ಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಐಪಿಎಲ್ 2019ಯಲ್ಲಿ ಆರ್​ಸಿಬಿ ಪರ ನನ್ನ ಫಫಾರ್ಮೆನ್ಸ್ ಅತ್ಯಂತ ಕಳಪೆಯಾಗಿತ್ತು. ಆ ವೇಳೆ ನನ್ನ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಮನಸ್ಸಿಗೆ ಬಂದಂತೆ ಕಾಮೆಂಟ್​ ಮಾಡಿದ್ರು. ಅದರಲ್ಲೂ ಕೆಲವರಂತೂ ನೀನು ಕ್ರಿಕೆಟ್​ ಆಡೋದು ಬೇಡ, ಹೋಗಿ ನಿಮ್ಮಪ್ಪನ ಆಟೋ ಓಡ್ಸು ಎಂದಿದ್ದರು ಎಂದು ಹೇಳಿದ್ದಾರೆ. ಇದರಿಂದ […]

  • ಟೀಂ ಇಂಡಿಯಾದಲ್ಲಿ ಹೊಸ ಪ್ರಯೋಗ; ಇವತ್ತಿನ ಪಂದ್ಯದಲ್ಲಿ ಯಾರಿಗೆಲ್ಲಾ ಕೊಕ್..?

    ಇಂದು ಇಂಡೋ-ವಿಂಡೀಸ್​​ 2ನೇ ಏಕದಿನ ಕದನ. ಮಧ್ಯಾಹ್ನ ಶುರುವಾಗುವ ಪಂದ್ಯಕ್ಕೆ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಟೀಮ್​ ಇಂಡಿಯಾ ಸರಣಿ ಕೈವಶ ಮಾಡಿಕೊಳ್ಳಲು ಸಜ್ಜಾಗಿದ್ರೆ, ವೆಸ್ಟ್​ ಇಂಡೀಸ್​ ಸರಣಿ ಕನಸನ್ನು ಜೀವಂತ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ತಿದೆ. 1000ನೇ ಏಕದಿನ ಪಂದ್ಯದಲ್ಲಿ ಗೆದ್ದ ಟೀಮ್​ ಇಂಡಿಯಾ, ಇಂದು ವಿಂಡೀಸ್​ ವಿರುದ್ಧ 2ನೇ ಪಂದ್ಯದ ಸವಾಲಿಗೆ ಸಜ್ಜಾಗ್ತಿದೆ. ರೋಹಿತ್​​ ಪಡೆ ಈಗಾಗಲೇ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಇಂದಿನ ಪಂದ್ಯವನ್ನೂ ಗೆದ್ದು […]

  • ಕ್ಯಾಪ್ಟನ್ ರೋಹಿತ್ ಶರ್ಮಾಗೆ ಎಷ್ಟು ಮಾರ್ಕ್ಸ್ ಕೊಟ್ರು ಗವಾಸ್ಕರ್..?

    ರೋಹಿತ್ ಶರ್ಮಾ ಟೀಮ್ ಇಂಡಿಯಾ ಫುಲ್ ಟೈಮ್ ಕ್ಯಾಪ್ಟನ್ ಆಗಿ ಆಯ್ಕೆಯಾದ ನಂತರ, ತಾವು ಎದುರಿಸಿದ ಮೊದಲ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಕ್ಯಾಪ್ಟೆನ್ಸಿಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡಿದ್ದಾರೆ. ಇನ್ನು ಪಂದ್ಯದಲ್ಲಿ ರೋಹಿತ್, ಡಿಆರ್ಎಸ್ ಬಳಸಿಕೊಂಡ ರೀತಿಗೆ ಲೆಜೆಂಡ್ ಸುನಿಲ್ ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಕನಾಗಿ ಧೋನಿ ತೆಗೆದುಕೊಳ್ಳುತ್ತಿದ್ದ ರಿವ್ಯೂ ಫೇಲ್ ಆಗಿದ್ದಕ್ಕಿಂತ ಸಕ್ಸಸ್ ಕಂಡಿದ್ದೇ ಹೆಚ್ಚು. ಹಾಗಾಗಿ ಡಿಆರ್​​ಎಸ್​​ ಫ್ಯಾನ್ಸ್ ಧೋನಿ ರಿವ್ಯೂ ಸಿಸ್ಟಮ್ ಅಂತಾ ಕರೀತಾರೆ. ಆದ್ರೆ, […]

  • ಕಿಂಗ್​​ ಕೊಹ್ಲಿ ಹೇಳಿದ್ರು, ಕ್ಯಾಪ್ಟನ್​​ ರೋಹಿತ್ ಪಾಲಿಸಿದ್ರು..! ಏನದು?!

    ವೆಸ್ಟ್ ಇಂಡೀಸ್ ಮೊದಲನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ಡೆಬ್ಯೂಟ್ ಮಾಡಿದ ಮೊದಲ ಪಂದ್ಯವನ್ನೇ ಗೆಲ್ಲಿಸಿ ಸಕ್ಸಸ್ ಆದ್ರು. ಆದರೆ, ಇಡೀ ಮ್ಯಾಚ್ ಉದ್ಧಕ್ಕೂ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ರೋಹಿತ್ಗೆ ಗೈಡ್ ಮಾಡುತ್ತಲೇ ಇದ್ದರು. ಈ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಚಹಾಲ್ ಶಮರ ಬ್ರೂಕ್ಸ್ ಅವರಿಗೆ ಚೆಂಡೆಸೆದರು. ಚೆಂಡು ಬ್ಯಾಟ್ ಬದಿಯಿಂದ ವಿಕೆಟ್ ಕೀಪರ್ ಕೈ ಸೇರಿತು. […]

  • ಯಾರೇ ಬರಲಿ, ಯಾರೇ ಹೋಗಲಿ, ಕೊಹ್ಲಿ ಮಾತ್ರ ಯಾವತ್ತಿಗೂ ಕಿಂಗ್..!

    ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಯಾವತ್ತಿದ್ರೂ ಕಿಂಗ್ ಎಂದು ಮಾಜಿ ಆಟಗಾರ ಅಜಯ್ ಜಡೇಜಾ ಶ್ಲಾಘಿಸಿದ್ದಾರೆ. ಈ ಸಂಬಂಧ ಮಾತಾಡಿದ ಅಜಯ್ ಜಡೇಜಾ, ಆಟಗಾರರು ಬರುತ್ತಾರೆ, ಹೋಗುತ್ತಾರೆ. ಆದರೆ ಕಿಂಗ್ ಕೊಹ್ಲಿ ಮಾತ್ರ ಯಾವಾಗಲೂ ನಾಯಕನಾಗಿಯೇ ಉಳಿಯುತ್ತಾನೆ ಎಂದರು. ನಾಯಕತ್ವ ತೊರೆದ ಕೂಡಲೇ ಯಾರು ಮೂಲೆಗುಂಪು ಆಗೋದಿಲ್ಲ. ಭಾರತ ತಂಡದಲ್ಲಿ ಸ್ಥಾನ ಪಡೆದ ಆರಂಭದ ದಿನಗಳಿಂದಲೂ ಕೊಹ್ಲಿ ನಾಯಕತ್ವದ ಸಾಮರ್ಥ್ಯ ನೋಡುತ್ತಿದ್ದೇವೆ ಎಂದು ಹೇಳಿದರು. ಕ್ರೀಡೆ ಎನ್ನುವುದು ಸಹಜ. ಕೊಹ್ಲಿ ನೂರಾರು ಪಂದ್ಯಗಳಲ್ಲಿ ಭಾರತವನ್ನು […]

  • ಪೊಲಾರ್ಡ್ ವಿಕೆಟ್​​ಗೆ ಕೊಹ್ಲಿ, ರೋಹಿತ್ ಸೆಲೆಬ್ರೇಷನ್; ವಿಡಿಯೋ ವೈರಲ್.. ಏನಂದ್ರು ಫ್ಯಾನ್ಸ್​?

    ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಒನ್ ಡೇ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಮೊದಲ ಪಂದ್ಯ ಹೇಗೆ ನಿಭಾಯಿಸಲಿದ್ದಾರೋ ಎಂಬ ಚಿಂತೆಯಿತ್ತು. ಆದರೆ, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹಾಯದಿಂದ ಚೆನ್ನಾಗಿಯೇ ತಂಡವನ್ನು ಮುನ್ನಡೆಸಿದ್ರು. ಈಗಾಗಲೇ ರೋಹಿತ್ ಅವರಿಗೆ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಗೈಡ್ ಮಾಡಿದ್ದು ನೋಡಿ ಫ್ಯಾನ್ಸ್ ಭಾರೀ ಚರ್ಚೆ ನಡೆಸುತ್ತಿದ್ದಾರೆ. ಈ ನಡುವೆ ಮ್ಯಾಚ್ ಆಡುವಾಗ ವೆಸ್ಟ್ ಇಂಡೀಸ್ ಕ್ಯಾಪ್ಟನ್ ಪೊಲಾರ್ಡ್ ವಿಕೆಟ್ ಬಿದ್ದಾಗ […]