ಸಾಂಕೇತಿಕ ಚಿತ್ರ
ಬೆಂಗಳೂರು: ನಗರದಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣ ನಡೆದಿದೆ. ಬೆಂಗಳೂರಿನ ನಾಗವಾರ ರಸ್ತೆಯ ಬಳಿ ಶ್ರೀಧರ್ ಎಂಬವರ ಹತ್ಯೆಯಾಗಿದೆ. ಬಾಣಸವಾಡಿಯ ರಾಮಸ್ವಾಮಿಪಾಳ್ಯ ನಿವಾಸಿ ಶ್ರೀಧರ್ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಮುಕ್ತ ಸಂಘಟನೆ ಉಪಾಧ್ಯಕ್ಷ ಆಗಿದ್ದರು. ನಾಗವಾರ ಬಳಿ ಬಂದಿದ್ದ ವೇಳೆ ಗ್ಯಾಂಗ್ ಒಂದು ದಾಳಿ ಮಾಡಿದೆ. ರಿಂಗ್ ರೋಡ್ನ ಸರ್ವಿಸ್ ರಸ್ತೆಯಲ್ಲಿ ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಾರು ಬಿಟ್ಟು ಸರ್ವಿಸ್ ರಸ್ತೆಯಲ್ಲಿ ಓಡುವಾಗ ಶ್ರೀಧರ್ ಹತ್ಯೆಯಾಗಿದೆ. ಆರೋಪಿಗಳಿಗೆ ಹೆಣ್ಣೂರು ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Crime News: ಕೋರ್ಟ್ನಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಕೊಲೆ ಆರೋಪಿ!
ಇದನ್ನೂ ಓದಿ: Nisha Dahiya Murder: ಸೋನಿಪತ್ನಲ್ಲಿ ಕುಸ್ತಿಪಟು ನಿಶಾ ದಹಿಯಾ ಕೊಲೆ ಪ್ರಕರಣ; ಕೋಚ್ ಪವನ್ ಸೇರಿ ಆರೋಪಿಗಳ ಬಂಧನ