ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಜನಸಾಗರ ಹರಿದು ಬಂದಿದೆ. ಮಠದ ಮೊಗಸಾಲೆಯನ್ನು (ಕಾರಿಡಾರ್) ಅದ್ಧೂರಿಯಾಗಿ ಸಿಂಗರಿಸಲಾಗಿದ್ದು, ಕಣ್ಣಿಗೆ ಹಬ್ಬ ಕೊಡುವ ದೃಶ್ಯಗಳು ಎಲ್ಲೆಲ್ಲಿಯೂ ಕಂಡುಬರುತ್ತಿವೆ. ಈ ಬಾರಿ ರಾಯರ 351ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ಮಠದ ಮೊಗಸಾಲೆಯನ್ನು ಹಲವು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಿಸಲಾಗಿದೆ. ‘ಮಧ್ವ ಮಾರ್ಗ’ ಹೆಸರಿನ ಈ ಕಾರಿಡಾರ್ನಲ್ಲಿ ತಮಿಳುನಾಡಿನ ಉಬ್ಬುಶಿಲ್ಪ ಶೈಲಿಯ ಕಲಾಕೃತಿಗಳು ಗಮನ ಸೆಳೆಯುತ್ತಿವೆ.
Aug 11, 2022 | 12:52 PM
Most Read Stories