
Image Credit source: Opindia.com
ನೂಪುರ್ ಶರ್ಮಾಗೆ ಗಡಿಯಾಚೆಗಿನ ಉಗ್ರ ಸಂಘಟನೆಗಳಿಂದ ಪ್ರಾಣ ಬೆದರಿಕೆಗಳೂ ಬರಲಾರಂಭಿಸಿವೆ. ನೂಪುರ್ ಶರ್ಮಾಳ ಶಿರಚ್ಛೇದ ಮಾಡಿದವರಿಗೆ 5 ಮಿಲಿಯನ್ ಬಹುಮಾನ ನೀಡಲಾಗುವುದು ಎಂದು ಪಾಕಿಸ್ತಾನದ ಲಬ್ಬೈಕಿಯನ್ಸ್ ಟಿವಿ ಟ್ವೀಟ್ ಮಾಡಿದೆ.
ನವದೆಹಲಿ: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ (Mohammed Zubair) ಅವರು ನೂಪುರ್ ಶರ್ಮಾ ಮೇಲೆ ಇಸ್ಲಾಮಿಸ್ಟ್ಗಳನ್ನು ಛೂ ಬಿಟ್ಟಾಗಿನಿಂದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ (Nupur Sharma) ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಕೊಲೆ ಬೆದರಿಕೆಗಳು ಬರುತ್ತಿವೆ. ಇದೀಗ ನೂಪುರ್ ಶರ್ಮಾಗೆ ಗಡಿಯಾಚೆಗಿನ ಉಗ್ರ ಸಂಘಟನೆಗಳಿಂದ ಪ್ರಾಣ ಬೆದರಿಕೆಗಳೂ ಬರಲಾರಂಭಿಸಿವೆ. ನೂಪುರ್ ಶರ್ಮಾಳ ಶಿರಚ್ಛೇದ ಮಾಡಿದವರಿಗೆ 5 ಮಿಲಿಯನ್ (50 ಲಕ್ಷ) ಬಹುಮಾನ ನೀಡಲಾಗುವುದು ಎಂದು ಲಬ್ಬೈಕಿಯನ್ಸ್ ಟಿವಿ ಟ್ವೀಟ್ ಮಾಡಿದೆ. ಈ ಟ್ವಿಟ್ಟರ್ ಹ್ಯಾಂಡಲ್ ಅನ್ನು ಇಸ್ಲಾಮಿಕ್ ಉಗ್ರಗಾಮಿ ಪಕ್ಷವಾದ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (TLP) ಬೆಂಬಲಿಗರು ನಡೆಸುತ್ತಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ ನೀಡಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ವಿರುದ್ಧ ಮುಂಬೈನಲ್ಲಿ ಕೇಸ್ ದಾಖಲಾಗಿದೆ. ಭಾರತೀಯ ಸುನ್ನಿ ಮುಸ್ಲಿಮರಿಗಾಗಿ ಇರುವ ರಾಜಾ ಅಕಾಡೆಮಿ ನೂಪುರ್ ಶರ್ಮಾ ವಿರುದ್ಧ ದೂರು ನೀಡಿತ್ತು. ಆಲ್ಟ್ ನ್ಯೂಸ್ನ ಮಾಲೀಕರು ತನ್ನ ವಿರುದ್ಧದ ಟ್ರೋಲ್ಗಳನ್ನು ಉತ್ತೇಜಿಸಲು ಎಡಿಟ್ ಮಾಡಲಾಗಿರುವ ವಿಡಿಯೋ ಪ್ರಕಟಿಸಿದ್ದರು. ನಮಗೆ ಹಾಗೂ ತಮ್ಮ ಕುಟುಂಬದ ಸದಸ್ಯರಿಗೆ ಏನಾದರೂ ಆದರೆ ಅದಕ್ಕೆ ಆಲ್ಟ್ ನ್ಯೂಸ್ ಮಾಲಿಕರೇ ಜವಾಬ್ದಾರಿ ಎಂದು ನೂಪುರ್ ಶರ್ಮಾ ದೂರಿದ್ದರು.