RCBಗೆ ನೂತನ ಕೋಚ್ ನೇಮಕ; ‘ಈ ಸಲ ಕಪ್ ನಮ್ದೆ’ ಅಂದ್ರು ಸಂಜಯ್ ಬಂಗಾರ್


IPLನಲ್ಲಿ ಟ್ರೋಫಿ ಗೆಲ್ಲುವ ಕನಸಿನಲ್ಲಿರುವ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು, ನೂತನ ಹೆಡ್​​ಕೋಚ್ ಹೆಸರನ್ನ ಘೋಷಿಸಿದೆ. ಸಂಜಯ್​ ಬಂಗಾರ್ ಅವರನ್ನು​​ ಈ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದೆ.

ಮುಂದಿನ 2 ವರ್ಷಗಳವರೆಗೆ ಸಂಜಯ್ ಬಂಗಾರ್ ಅವರನ್ನ ನೇಮಕ ಮಾಡಿಕೊಳ್ಳಲಾಗಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸೈಮನ್ ಕ್ಯಾಟಿಚ್ ಅವರ ಸ್ಥಾನಕ್ಕೆ ಸಂಜಯ್ ಬಂಗಾರ್​​ರನ್ನ ನೇಮಕ ಮಾಡಿಕೊಳ್ಳಲಾಗಿದೆ.

ಈಗಾಗಲೇ ನಮ್ಮ ಕೆಲಸ ಆರಂಭವಾಗಿದೆ. ಹರಾಜು ಪ್ರಕ್ರಿಯೆಯತ್ತ ಗಮನ ಹರಿಸುತ್ತಿದ್ದೇವೆ. ನಾವು ಬಲಿಷ್ಠ ತಂಡವನ್ನ ನಿರ್ಮಿಸಲು ಬದ್ಧರಾಗಿದ್ದೇವೆ. ಐಪಿಎಲ್​ ಟ್ರೋಫಿ ಗೆಲ್ಲುವ ಬಹುಕಾಲದ ಕನಸು ನನಸು ಮಾಡುತ್ತೇವೆ. RCB ಅಭಿಮಾನಿಗಳಿಗೆ ಕಪ್ ಗೆಲ್ಲುವ ಭರವಸೆ ನೀಡಲು ಬಯಸುತ್ತೇನೆ.
ಸಂಜಯ್ ಬಂಗಾರ್, ಆರ್​ಸಿಬಿ ಮುಖ್ಯಕೋಚ್

ರವಿಶಾಸ್ತ್ರಿ ಅವರೊಂದಿಗೆ ಟೀಂ ಇಂಡಿಯಾ ಕೋಚ್​ ಆಗಿ ಕೆಲಸ ಮಾಡಿದ್ದ ಸಂಜಯ್ ಬಂಗಾರ್​, 2021ರ ಐಪಿಎಲ್​ ಸಮಯದಲ್ಲಿ ಆರ್​ಸಿಬಿ ತಂಡದ ಬ್ಯಾಟಿಂಗ್ ವಿಭಾಗದ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಮೈಕ್ ಹೆಸ್ಸನ್ ನಿರ್ದೇಶಕರಾಗಿ ಮುಂದುವರಿಯುವುದು ಪಕ್ಕಾ ಆಗಿದೆ. ಈಗಾಗಲೇ ಕ್ಯಾಪ್ಟನ್ಸಿ ಜವಾಬ್ದಾರಿಯನ್ನ ಕಿಂಗ್ ಕೊಹ್ಲಿ ತೊರೆದಿದ್ದಾರೆ. ನೂತನ ನಾಯಕನ ಆಯ್ಕೆಗಾಗಿ ಆರ್​ಸಿಬಿ ಹರಾಜು ಪ್ರಕ್ರಿಯೆ ಮೇಲೆ ಕಣ್ಣಿಟ್ಟಿದೆ.

News First Live Kannada


Leave a Reply

Your email address will not be published. Required fields are marked *