SBI ATM Theft: ಮಾಗಡಿ ರಸ್ತೆಯಲ್ಲಿ ಭಾರತೀಯ ಸ್ಟೇಟ್​ ಬ್ಯಾಂಕ್ ಎಟಿಎಂ ಮಷೀನ್ ಸಮೇತ ಕದ್ದೊಯ್ದ ಕಳ್ಳರು! | State Bank Of India ATM machine stolen in Magadi Road at Chikkagollarahatti Bangalore North


SBI ATM Theft: ಮಾಗಡಿ ರಸ್ತೆಯಲ್ಲಿ ಭಾರತೀಯ ಸ್ಟೇಟ್​ ಬ್ಯಾಂಕ್ ಎಟಿಎಂ ಮಷೀನ್ ಸಮೇತ ಕದ್ದೊಯ್ದ ಕಳ್ಳರು!

ಮಾಗಡಿ ರಸ್ತೆಯಲ್ಲಿ ಭಾರತೀಯ ಸ್ಟೇಟ್​ ಬ್ಯಾಂಕ್ ಎಟಿಎಂ ಮಷೀನ್ ಸಮೇತ ಕದ್ದೊಯ್ದ ಕಳ್ಳರು!

ನೆಲಮಂಗಲ: ಭಾರತದ ಅಗ್ರ ಸರ್ಕಾರಿ ಬ್ಯಾಂಕ್​ ಎನಿಸಿರುವ ಭಾರತೀಯ ಸ್ಟೇಟ್​ ಬ್ಯಾಂಕ್​ನ ಎಟಿಎಂ ಮಷೀನ್ ಅನ್ನೇ (State Bank Of India ATM) ಹಣದ ಸಮೇತ ಕಳ್ಳರು ಕದ್ದೊಯ್ದಿದ್ದಾರೆ (ATM Theft). ಬೆಂಗಳೂರು ಉತ್ತರ ತಾಲೂಕಿನ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ಘಟನೆ ನಡೆದಿದೆ. ಕೃತ್ಯದ ಸುಳಿವು ಸಿಗಬಾರದೆಂದು ಸಿಸಿಟಿವಿ ಡಿವಿಆರ್ ಅನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಆದರೆ 2 ಕಿ.ಮೀ. ದೂರದಲ್ಲಿ ಸ್ಮಶಾನದ ಬಳಿ ಖಾಲಿ ಎಟಿಎಂ ಮಷೀನ್ ಪತ್ತೆಯಾಗಿದೆ. ಕಳ್ಳರು ಅಲ್ಲಿ ಗ್ಯಾಸ್ ಕಟರ್ ಬಳಸಿ ಎಟಿಎಂ ತೆರೆದು ಹಣ ದೋಚಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ನಿರ್ದಿಷ್ಟವಾಗಿ ಎಷ್ಟು ಮೊತ್ತದ ಹಣದ ಕಳುವಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Magadi Road at Chikkagollarahatti Bangalore North).

ಊಬರ್ ಕ್ಯಾಬ್ ಬುಕ್ ಮಾಡಿ ಚಾಲಕನಿಗೆ ಮಾರಕಾಸ್ತ್ರ ತೋರಿಸಿ ದರೋಡೆ; ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಬೆಂಗಳೂರು: ಊಬರ್ ಕ್ಯಾಬ್ ಬುಕ್ ಮಾಡಿ ಚಾಲಕನಿಗೆ ಮಾರಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಫ್ರೆಂಟ್ ಆಗಿ ದರೋಡೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕೊನೆಗೂ ಸಂಪಿಗೇಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೃತಿಕ್ ಗೌಡ(20), ನಿತಿನ್ ಗೌಡ(21), ಸುಮಂತ್(20), ದರ್ಶನ್(20) ಬಂಧಿತ ಆರೋಪಿಗಳು. ಬಂಧಿತರ ಬಳಿಯಿದ್ದ 5 ಲಕ್ಷ ರೂಪಾಯಿ ಮೌಲ್ಯದ ಕಾರು, ಒಂದು ಬೈಕ್, ಮೊಬೈಲ್, 18 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಕಾರುಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು ಕಳವು
ಇನ್ನು ಮತ್ತೊಂದು ಕಡೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರುಗಳನ್ನೇ ಟಾರ್ಗೆಟ್ ಮಾಡಿ 10 ಕಾರುಗಳ ಗಾಜು ಒಡೆದು ಖದೀಮರು ಕಳ್ಳತನ ಮಾಡಿದ್ದಾರೆ. ಬಾಗಲಗುಂಟೆ, ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾರುಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು ಕಳವಾಗಿದೆ. ಸಂಗೀತ್ ಕುಮಾರ್, ಅನಂತಸ್ವಾಮಿ, ಮಂಜುನಾಥ ನಾಯ್ಕ, ಸಚಿನ್, ದಿನೇಶ್, ಭೈರೇಗೌಡ, ತಿಲಕ್ ರಾಜ್, ಬಸವರಾಜು, ಹರ್ಷ, ಅರುಣ್‌ ಎಂಬುವರಿಗೆ ಸೇರಿದ ಕಾರುಗಳಲ್ಲಿ ಕಳ್ಳತನ ಮಾಡಲಾಗಿದೆ. ಕಳ್ಳರ ಗ್ಯಾಂಗ್ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತು ದೋಚಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7 ಕಾರುಗಳು, ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ 3 ಕಾರಿನ ಗಾಜು ಒಡೆದು ಕೃತ್ಯ ಎಸಗಲಾಗಿದೆ.

ಇದೂ ಓದಿ:
ಪ್ರಚಲಿತ ಯುಗಧರ್ಮಕ್ಕೆ ಹೆಚ್ಚು ಸಮಂಜಸ – ಪ್ರಾಣಿ ಪಶು ಪಕ್ಷಿಗಳಲ್ಲಿ ಇರುವ ಬುದ್ಧಿ ಮನುಷ್ಯರಲ್ಲಿ ಏಕೆ ಇಲ್ಲ!?

ಇದೂ ಓದಿ:
ಶಿವಮೊಗ್ಗ ಹರ್ಷ ಕೊಲೆಗೆ ಪ್ರತೀಕಾರವಾಗಿ ಕೊಲೆಗೆ ಸಂಚು; ಮತ್ತೊಂದು ಕೋಮುಗಲಭೆ ಸೃಷ್ಟಿಗೆ ಹೊಂಚು

TV9 Kannada


Leave a Reply

Your email address will not be published. Required fields are marked *