ಸ್ಪೌಡಿ
ನಾಲ್ಕು ವರ್ಷದ ಬಳಿಕ ಸ್ವೀಡನ್ನ ಗ್ರೀನ್ಟೆಕ್ ಸ್ಟಾರ್ಟ್ ಅಪ್ ಸ್ಪೌಡಿ ಭಾರತ- ಸ್ವೀಡನ್ ಇನ್ನೋವೇಷನ್ ಅಸೆಲೆರೇಟರ್ ಪ್ರೋಗ್ರಾಂ ಆಯ್ದುಕೊಂಡಿದೆ. ಅದರಂತೆ ಶೂನ್ಯ ಎಮಿಷನ್ ಕೃಷಿ ಪರಿಹಾರ ಕಾರ್ಯ ಆಗಿದೆ. ಇದರಿಂದ ರೈತರಿಗೆ ಅನುಕೂಲ ಆಗಲಿರುವ ಬಗ್ಗೆ ಬ್ಯುಸಿನೆಸ್ ಸ್ವೀಡನ್ ಹೇಳಿದೆ. ಬ್ಯುಸಿನೆಸ್ ಸ್ವೀಡನ್ನ (ಭಾರತ) ಪವನ್ ತಹ್ಲಾನಿ, ಸ್ಪೌಡಿಯ ಹೊಸತನವನ್ನು ಭಾರತಕ್ಕೆ ತರುವಲ್ಲಿ ಹೆಚ್ಚು ಆಸಕ್ತಿ ವಹಿಸಿರುವ ಬಗ್ಗೆ ಹೇಳಿದ್ದಾರೆ. ಸ್ಪೌಡಿಯ ಸೋಲಾರ್ ಪವರ್ನ ಮೊಬೈಲ್ ಇರಿಗೇಷನ್ ವ್ಯವಸ್ಥೆಯ ಬಗ್ಗೆ ಕೇಳಿದಾಗ ಅದು ಭಾರತದ ಸಣ್ಣ ರೈತರಿಗೆ ಸರಿಹೊಂದುವಂತಿದೆ ಎಂದು ತಿಳಿಸಿದ್ದಾರೆ.
ಸ್ಪೌಡಿಯ ಸೌರ ಶಕ್ತಿಯ ಮುಖ್ಯಾಂಶಗಳು ಹೀಗಿದೆ:
- ಭಾರತದ ವಾತಾವರಣದಲ್ಲಿ ಇದು ಪರೀಕ್ಷೆಗೆ ಒಳಪಟ್ಟಿದೆ
- ಇದರಲ್ಲಿ ಡೀಸೆಲ್ ಬಳಕೆ ಇರುವುದಿಲ್ಲ. ಸೂರ್ಯ ಹಾಗೂ ಸೌರಶಕ್ತಿಯ ಮೇಲೆ ಮಾತ್ರ ಇದು ಅವಲಂಬಿತವಾಗಿದೆ
- ಸಿಒ2 ಹೊರಸೂಸುವಿಕೆ ಕೂಡ ಇಲ್ಲಿ ಇರುವುದಿಲ್ಲ. ಡೀಸೆಲ್ ಪಂಪ್ಗೆ ಹೋಲಿಸಿದರೆ ಇಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ಇರುವುದಿಲ್ಲ
- ಕೃಷಿಗೆ ನೀರಿನ ಬಳಕೆ ಸಮರ್ಪಕವಾಗಿ ಇರಲಿದೆ
- ರೈತರು ಹೆಚ್ಚು ಪರಿಣಾಮಕಾರಿಯಾಗಿ ಕೃಷಿ ಮಾಡುವಂತೆ ಮತ್ತು ಉತ್ತಮ ಬೆಳೆ ಪಡೆಯುವಲ್ಲಿ, ಹೆಚ್ಚು ಲಾಭಗಳಿಸಲು ಸಹಾಯ ಮಾಡಲಿದೆ
- ವಾತಾವರಣಕ್ಕೆ ಉತ್ತಮವಾಗಿದೆ
- ಮೇಕ್ ಇನ್ ಇಂಡಿಯಾ ಧ್ಯೇಯದೊಂದಿಗೆ ಇರಲಿದೆ. ಸ್ಪೌಡಿ ಬೆಂಗಳೂರಿನಲ್ಲಿ ಈ ಸಂಬಂಧ ವೆಂಚರ್ ಒಂದನ್ನು ಆರಂಭಿಸಿದೆ
- ಭಾರತದಲ್ಲಿ ಸರಿಸುಮಾರು 125 ಮಿಲಿಯನ್ ಸಣ್ಱ ಪ್ರಮಾಣದಲ್ಲಿ ಕೃಷಿ ಮಾಡುವ ರೈತರಿದ್ದಾರೆ. ಅಂಥವರಲ್ಲಿ ಸುಮಾರು ಒಂದು ಎಕರೆಯಷ್ಟು ಅಥವಾ ಅದಕ್ಕಿಂತ ಕಡಿಮೆ ಭೂಮಿ ಇರುತ್ತದೆ. ಇಂಥಾ ಕಡೆ ವಿದ್ಯುತ್ ಶಕ್ತಿ ವ್ಯತ್ಯಯ, ಡೀಸೆಲ್ ಬೆಲೆಯಲ್ಲಿ ಏರಿಕೆ, ನೀರು ಪೋಲು ಮುಂತಾದ ಕಾರಣಗಳು ತೊಡಕಾಗಿವೆ. ಅಲ್ಲದೆ ಕಾರ್ಬನ್ ಹೊರಸೂಸುವಿಕೆ, ಅದರ ಪರಿಣಾಮಗಳು ಆರೋಗ್ಯ, ಜೀವನದ ಮೇಲೆ ಕೂಡ ಪರಿಣಾಮ ಬೀರುತ್ತದೆ.
ಸಣ್ಣ ಪ್ರಮಾಣದ ಕೃಷಿಯಲ್ಲಿ ತೊಡಗಿಸಿಕೊಳ್ಳುವ ರೈತರಿಗೆ ಸ್ವಚ್ಛ ಮತ್ತು ಸುಸ್ಥಿರ ಕೃಷಿ ಪರಿಹಾರ ನೀಡುವ ಹಾಗೂ ಆ ಮೂಲಕ ಉತ್ತಮ ಫಸಲು ಪಡೆಯುವ ಉದ್ದೇಶವನ್ನು ಸ್ಪೌಡಿ ಹೊಂದಿದೆ. ಭಾರತದ ಸಣ್ಣ ರೈತರು ಎದುರಿಸುತ್ತಿರುವ ಸಮಸ್ಯೆಗೆ ಈ ಸ್ಪೌಡಿ ಕೃಷಿ ವ್ಯವಸ್ಥೆ ಸಹಕಾರಿ ಆಗಲಿದೆ. ಹವಾಮಾನ ಗುಣಮಟ್ಟ, ಸ್ವಚ್ಛ ವಾತಾವರಣ ಮತ್ತು ಉತ್ತಮ ಜೀವನವನ್ನು ನೀಡಲು ಇದು ಸಹಾಯ ಮಾಡಲಿದೆ.
ಇದನ್ನೂ ಓದಿ: ಕೃಷಿ ಕಾನೂನು ಹಿಂತೆಗೆದುಕೊಳ್ಳುವ ಮಸೂದೆಗಳನ್ನು ಕೇಂದ್ರ ಬುಧವಾರ ಅನುಮೋದಿಸುವ ಸಾಧ್ಯತೆ: ವರದಿ
ಇದನ್ನೂ ಓದಿ: ಕೃಷಿ ಕಾಯ್ದೆ ವಿರುದ್ಧ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ತೆಲಂಗಾಣ ಸರ್ಕಾರದಿಂದ 3 ಲಕ್ಷ ಪರಿಹಾರ