-
‘ಮುಗಿಲ್ಪೇಟೆ’ ರಿಲೀಸ್ಗೂ ಮೊದಲು ಮಗ ಮನೋರಂಜನ್ಗೆ ಒಂದು ಸೂಚನೆ ನೀಡಿದ ರವಿಚಂದ್ರನ್ | Ravichandran Talks With His Son Manuranjan video goes viral
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ‘ಮುಗಿಲ್ಪೇಟೆ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಕಯಾದು ಲೋಹರ್ ಚಿತ್ರದ ನಾಯಕಿ. ‘ಮುಗಿಲ್ಪೇಟ್’ ಸಿನಿಮಾ ನ.19ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲು ಮನೋರಂಜನ್ಗೆ ಚಾಮುಂಡಿ ತಾಯಿಯ ದರ್ಶನ ಮಾಡಿ ಬರುವಂತೆ ರವಿಚಂದ್ರನ್ ಹೇಳಿದ್ದಾರೆ. ಮನು ಅವರಿಗೆ ನಾಯಕಿಯಾಗಿ ಕಯಾದು ಲೋಹರ್ ನಟಿಸಿದ್ದಾರೆ. ರಿಷಿ, ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು ಮೊದಲಾದ ಕಲಾವಿದರು ‘ಮುಗಿಲ್ ಪೇಟೆ’ಯಲ್ಲಿ ಅಭಿನಯಿಸಿದ್ದಾರೆ. ರವಿವರ್ಮ (ಗಂಗು) ಅವರ ಛಾಯಾಗ್ರಹಣ, ಅರ್ಜುನ್ […]
-
ಪುನೀತ್ ಸಮಾಧಿ ಬಳಿ ಬಂದು ಹಾಡು ಹೇಳಿದ ಮಕ್ಕಳು; ಪುಟ್ಟ ಹೃದಯಗಳಿಗೆ ಅಪ್ಪು ಎಂದರೆ ಪಂಚಪ್ರಾಣ | Children visit Puneeth Rajkumar samadhi and remember Appu by singing his songs
ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದವರು ಪುನೀತ್ ರಾಜ್ಕುಮಾರ್. ಹೃದಯಾಘಾತದಿಂದ ಸಡನ್ ಆಗಿ ಅವರು ಇಹಲೋಕ ತ್ಯಜಿಸಿದ ಬಳಿಕ ಅಪಾರ ಸಂಖ್ಯೆಯ ಅಭಿಮಾನಿ ಬಳಗಕ್ಕೆ ತೀವ್ರ ನೋವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚಿಕ್ಕ ಮಕ್ಕಳು ಸಂಕಟಪಡುತ್ತಿದ್ದಾರೆ. ಪುನೀತ್ ಅವರ ಸಿನಿಮಾಗಳನ್ನು ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಡುತ್ತಿದ್ದರು. ಮಕ್ಕಳು ಕೂಡ ಅಪ್ಪು ಅಭಿನಯವನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಆದರೆ ಈಗ ಪುನೀತ್ ಇಲ್ಲ ಎಂಬ ಕಹಿ ಸತ್ಯದಿಂದ ಪುಟಾಣಿಗಳಿಗೆ ನೋವಾಗಿದೆ. ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುನೀತ್ ರಾಜ್ಕುಮಾರ್ ಸಮಾಧಿಗೆ ಪ್ರತಿ ದಿನ ಭಾರಿ ಸಂಖ್ಯೆಯ […]
-
ಹೆಂಡತಿಯನ್ನು ಕರೆಯುವ ಹಸುವಿನಂತೆ ಕಂಡ: ವಿಚ್ಛೇದನ ಕೊಟ್ಟ ಹೈಕೋರ್ಟ್ | Delhi High Court dissolves marriage says husband viewed his wife only as a cash cow
ದೆಹಲಿ ಹೈಕೋರ್ಟ್ ದೆಹಲಿ: ಹೆಂಡತಿಯ ಮನವಿಯನ್ನು ಪುರಸ್ಕರಿಸದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ದೆಹಲಿ ಹೈಕೋರ್ಟ್ ಹಿಂದೂ ವಿವಾಹ ಕಾಯ್ದೆಯಡಿ ಮದುವೆಯನ್ನು ಅನೂರ್ಜಿತಗೊಳಿಸಿ, ದಂಪತಿಗೆ ವಿಚ್ಛೇದನ ನೀಡಿದೆ. ದೆಹಲಿ ಪೊಲೀಸ್ ಇಲಾಖೆಯಲ್ಲಿ ಹೆಂಡತಿಗೆ ಇರುವ ಕೆಲಸವಷ್ಟನ್ನೇ ಗಮನಿಸುತ್ತಿರುವ ಗಂಡ, ಆಕೆಯನ್ನು ಹಾಲು ಕರೆಯುವ ಹಸುವಿನಂತೆ ಮಾಡಿಕೊಂಡಿದ್ದಾನೆ ಎಂದು ನ್ಯಾಯಾಲಯ ಹೇಳಿತು ಎಂದು ಪಿಟಿಐ ಸುದ್ದಿಸಂಸ್ಥೆ ತಿಳಿಸಿದೆ. ಗಂಡನು ಹೆಂಡತಿಯೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧ ಇರಿಸಿಕೊಂಡಿಲ್ಲ. ಇದು ಆಕೆಗೆ ಅದೆಷ್ಟು ಆಘಾತ, ದುಃಖ ತಂದೊಡ್ಡಿರಬಹುದು ಎಂದು ನ್ಯಾಯಮೂರ್ತಿ ವಿಪಿನ್ […]
-
ಉತ್ತರ ಕನ್ನಡದ ಕೆಲ ಗ್ರಾಮಗಳಲ್ಲಿ ಇಂದು ದೀಪಾವಳಿ; ಈ ಹೆಚ್ಚು ಪಾಡ್ಯದ ಹಿನ್ನೆಲೆ ಗೊತ್ತಾ?..ಇಲ್ಲಿ ಗೋವುಗಳೇ ಮುಖ್ಯ | Deepavali gopooja Special celebration In Uttara kannada
ಗೋವುಗಳು ನಾಡಿನಲ್ಲಿ ದೀಪಾವಳಿ (Deeapavali 2021) ಹಬ್ಬದ ಸಂಭ್ರಮ ಮುಗಿದಿದೆ..ಆದರೆ ಉತ್ತರ ಕನ್ನಡದಲ್ಲಿ ಕೆಲವು ಹಳ್ಳಿಗಳಲ್ಲಿ ಇಂದು ದೀಪಾವಳಿ ಹಬ್ಬ..! ಯಾವುದೇ ಧರ್ಮದ, ಯಾವುದೇ ಹಬ್ಬವಿರಲಿ ಸಾಮಾನ್ಯವಾಗಿ ಆಯಾ ಧರ್ಮದ ಜನ ಒಂದೇ ದಿನ ಹಬ್ಬವನ್ನಾಚರಿಸುತ್ತಾರೆ. ಅಂತೆಯೇ ದೀಪಾವಳಿಯನ್ನೂ ಕೂಡ ಇಡೀ ನಾಡು ಪ್ರತಿವರ್ಷ ಸಾಮಾನ್ಯವಾಗಿ ಮೂರು ದಿನ ಆಚರಣೆ ಮಾಡುತ್ತದೆ. ಅಂತೆಯೇ ಈ ಬಾರಿಯೂ ನವೆಂಬರ್ 4ರಿಂದ ನವೆಂಬರ್ 6ರವರೆಗೂ ಈ ಹಬ್ಬ ಇತ್ತು. ದೇಶದ ವಿವಿಧ ಭಾಗಗಳಲ್ಲಿ ಆಚರಣೆ ವಿಭಿನ್ನ ಆಗಿರುವುದರಿಂದ ಅವರವರ ಸಂಪ್ರದಾಯಕ್ಕೆ […]
-
ವೈದ್ಯಕೀಯ ಪರೀಕ್ಷೆಯಲ್ಲಿ ಹ್ಯಾಕರ್ ಶ್ರೀಕಿ, ವಿಷ್ಣು ಭಟ್ ಮಾದಕ ವಸ್ತು ಸೇವಿಸಿರುವುದು ದೃಢ | Hacker Shriki Vishnu Bhat consumed Drugs Bengaluru Police Crime News
ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬೆಂಗಳೂರು: ಇಲ್ಲಿನ ಹೋಟೆಲ್ ಒಂದರಲ್ಲಿ ವಿಷ್ಣು ಭಟ್ ಹಾಗೂ ಡ್ರಗ್ ಮತ್ತು ಬಿಟ್ಕಾಯಿನ್ ಪ್ರಕರಣದ ಆರೋಪಿಯಾಗಿದ್ದ ಶ್ರೀಕೃಷ್ಣ ಎಂಬಾತನ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರೂ ಮಾದಕ ವಸ್ತು ಸೇವಿಸಿರುವುದು ದೃಢವಾಗಿದೆ. ಮಾದಕ ವಸ್ತು ಸೇವನೆ ದೃಢ ಹಿನ್ನೆಲೆಯಲ್ಲಿ ವಿಷ್ಣು ಭಟ್ ಮನೆ ಪರಿಶೀಲನೆ ನಡೆಸಲಾಗಿದೆ. ಇಂದಿರಾನಗರದ ವಿಷ್ಣು ಭಟ್ ಮನೆಯಲ್ಲಿ ಪೊಲೀಸರ ಶೋಧಕಾರ್ಯ ನಡೆದಿದೆ. ಭೀಮಾ ಜ್ಯುವೆಲರ್ಸ್ ಮಾಲೀಕನ ಪುತ್ರನಾಗಿರುವ ವಿಷ್ಣು ಭಟ್ ಮನೆಯಲ್ಲಿ ಪರಿಶೀಲನೆ ಮಾಡಲಾಗಿದೆ. ಈ […]
-
Video: ಪ್ರಧಾನಿಯಾದ ನಂತರ ರಾಹುಲ್ ಗಾಂಧಿ ಮಾಡುವ ಮೊದಲ ಕೆಲಸವೇನು? ಅವರ ಮಾತಲ್ಲೇ ಕೇಳಿ | What will Rahul Gandhi do if he becomes prime minister here is a video about this
ತಮಿಳುನಾಡಿನಿಂದ ಬಂದಿದ್ದವರಿಗೆ ರಾಹು್ಲ ಗಾಂಧಿ ತಮ್ಮ ನಿವಾಸದಲ್ಲಿ ದೀಪಾವಳಿ ಔತಣ ನೀಡಿದರು ದೆಹಲಿ: ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಶಾಲೆಯೊಂದರ ಮಕ್ಕಳಿಗಾಗಿ ದೀಪಾವಳಿ ಪ್ರಯುಕ್ತ ಔತಣಕೂಟ ಆಯೋಜಿಸಿದ್ದರು. ತಮಿಳುನಾಡಿನಲ್ಲಿ ಪ್ರಚಾರ ನಡೆಸುವಾಗ ಭೇಟಿ ನೀಡಿದ್ದ ಮುಲಗುಮೂಡು ಗ್ರಾಮದ ಸೇಂಟ್ ಜೋಸೆಫ್ ಪ್ರೌಢಶಾಲೆಗೆ ಮತ್ತೊಮ್ಮೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಶಲ ವಿಚಾರಿಸಿದ್ದರು. ವಿದ್ಯಾರ್ಥಿಗಳ ಗುಂಪಿನೊಂದಿಗೆ ನಡೆಸಿದ ಸಂವಾದದ ಮಾಹಿತಿಯನ್ನು ಟ್ವೀಟ್ ಮಾಡಿರುವ ರಾಹುಲ್, ‘ಈ ವರ್ಷದ ನನ್ನ ದೀಪಾವಳಿ ವಿಶೇಷವಾಗಿತ್ತು. ಸಾಂಸ್ಕೃತಿಕ […]
-
ತ.ನಾಡಿನಲ್ಲಿ ಕುಂಭದ್ರೋಣ ಮಳೆ.. ಸಿಎಂ ಸ್ಟಾಲಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ
ಚೆನ್ನೈ: ತಮಿಳುನಾಡಿನಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹದ ಭೀತಿ ಸೃಷ್ಟಿಯಾಗಿದೆ. ಸದ್ಯದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಜೊತೆ ಮಾತನಾಡಿದ್ದು, ಕೇಂದ್ರದಿಂದ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ 4 ಎನ್ಡಿಆರ್ಎಫ್ ತಂಡಗಳನ್ನು 4 ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ಇನ್ನೂ ಎಲ್ಲರೂ ಸುರಕ್ಷಿತವಾಗಿರಲು ಪ್ರಾರ್ಥನೆ ಮಾಡುವುದಾಗಿ ಹೇಳಿದ್ದಾರೆ. Spoke to Tamil Nadu CM, Thiru @mkstalin and discussed the situation in the wake of heavy rainfall in parts of […]
-
ಭಾರತದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ಸರ್ಕಾರದ ಅಂಕಿಅಂಶ | Over 33 lakh children in India are malnourished more than half of them fall in the severely malnourished
ಪ್ರಾತಿನಿಧಿಕ ಚಿತ್ರ ದೆಹಲಿ: ಭಾರತದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯ ವರ್ಗಕ್ಕೆ ಸೇರಿದ್ದಾರೆ. ಮಹಾರಾಷ್ಟ್ರ, ಬಿಹಾರ ಮತ್ತು ಗುಜರಾತ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (WCD) ಸಚಿವಾಲಯವು ಆರ್ಟಿಐ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ತಿಳಿಸಿದೆ. ಕೊವಿಡ್ ಸಾಂಕ್ರಾಮಿಕವು ಬಡವರಲ್ಲಿ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಿಕ್ಕಟ್ಟನ್ನು ಉಲ್ಬಣಗೊಳಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 17,76,902 (17.76 […]
-
T20 World Cup: ಟಿ20 ವಿಶ್ವಕಪ್ನಿಂದ ಔಟ್; ಟೀಂ ಇಂಡಿಯಾ ಕ್ರಿಕೆಟಿಗರಿಗೆ ನಿರಾಸೆ; ಭಾನುವಾರದ ಅಭ್ಯಾಸಕ್ಕೂ ಬ್ರೇಕ್! | Team India has called off their Optional practice sessions in Dubai after knocked out from T20 World Cup 2021
1/5 T20 ವಿಶ್ವಕಪ್ 2021 ರಲ್ಲಿ, ಭಾನುವಾರ ಟೀಮ್ ಇಂಡಿಯಾಗೆ ಅತ್ಯಂತ ನಿರಾಶಾದಾಯಕ ದಿನವಾಗಿತ್ತು. ಅಬುಧಾಬಿಯಲ್ಲಿ ಅಫ್ಘಾನಿಸ್ತಾನವನ್ನು ನ್ಯೂಜಿಲೆಂಡ್ ಸೋಲಿಸಿದ ತಕ್ಷಣ, ಟೀಂ ಇಂಡಿಯಾದ ಕಾರ್ಡ್ ಪಂದ್ಯಾವಳಿಯಿಂದ ಕ್ಲಿಯರ್ ಆಗಿತ್ತು. ನ್ಯೂಜಿಲೆಂಡ್ ತನ್ನ 5 ಲೀಗ್ ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸುವ ಮೂಲಕ ಸೆಮಿಫೈನಲ್ ತಲುಪುವ ಟೀಮ್ ಇಂಡಿಯಾದ ಆಸೆ ಕೊನೆಗೊಂಡಿತು. ಈ ಹಿನ್ನಡೆಯ ನಂತರ, ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನೂ ನಿರಾಶೆಗೊಂಡರು ಮತ್ತು ವರದಿಗಳ ಪ್ರಕಾರ, ತಂಡವು ಭಾನುವಾರ ಅಭ್ಯಾಸಕ್ಕೂ ಬಂದಿಲ್ಲ. 2/5 ಭಾರತ […]
-
ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದ ICUನಲ್ಲಿ ಬೆಂಕಿ ಅವಘಡ.. ರೋಗಿಗಳ ಪರದಾಟ
ಶಿವಮೊಗ್ಗ: ಶಾರ್ಟ್ ಸೆರ್ಕ್ಯೂಟ್ನಿಂದಾಗಿ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದ ಒಬಿಜಿಯಲ್ಲಿನ ಐಸಿಯುಗೆ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ. ಶಸ್ತ್ರ ಚಿಕಿತ್ಸೆ ಮೂಲಕ ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯರು ಹಾಗೂ ಮಕ್ಕಳಿಗೆ ಒಬಿಜಿ ಐಸಿಯು ವಾರ್ಡ್ ನಲ್ಲಿ ಶುಶ್ರೂಷೆ ಮಾಡಲಾಗುತ್ತದೆ. ಆ ವಾರ್ಡ್ ನಲ್ಲಿದ್ದ ಐಸಿಯಲ್ಲಿ ಶಾರ್ಟ್ ಸೆರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಬೆಂಕಿ ಕಾಣಿಸಿಕೊಂಡ ಕೂಡಲೇ ಮೆಗ್ಗಾನ್ ಮಕ್ಕಳ ಕಟ್ಟಡದ ಬಹುತೇಕ ವಾರ್ಡ್ ನಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಸದ್ಯ ಒಬಿಜಿ […]
-
ಶಿವಮೊಗ್ಗ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಅಗ್ನಿ ಆಕಸ್ಮಿಕ; ತಪ್ಪಿದ ದುರಂತ | Fire Accident in Shivamogga District Hospital ICU Ward
ಶಿವಮೊಗ್ಗ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಅಗ್ನಿ ಆಕಸ್ಮಿಕ ಶಿವಮೊಗ್ಗ: ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಹೆರಿಗೆ ವಾರ್ಡ್ನ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿದ್ದ ತಕ್ಷಣ ಇಬ್ಬರು ಬಾಣಂತಿಯರನ್ನು ಜಿಲ್ಲಾಸ್ಪತ್ರೆಯ ಬೇರೊಂದು ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಅವರನ್ನು ಜಿಲ್ಲಾ ಆಸ್ಪತ್ರೆಯ ಬೇರೊಂದು ವಾರ್ಡ್ಗೆ ಸ್ಥಳಾಂತರ ಮಾಡಲಾಗಿದೆ. ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿನಂದಿಸುವ ಕಾರ್ಯ ಸಾಗಿದೆ. ಘಟನೆಯಲ್ಲಿ ಅಸ್ವಸ್ಥರಾಗಿರುವ ಇಬ್ಬರು ಸೆಕ್ಯುರಿಟಿ ಸಿಬ್ಬಂದಿಯನ್ನು ಮೆಗ್ಗಾನ್ […]
-
ಉಗ್ರಗಾಮಿಗಳ ಗುಂಡಿಗೆ ಶ್ರೀನಗರದ ಪೊಲೀಸ್ ಸಿಬ್ಬಂದಿ ಹುತಾತ್ಮ | Terrorists Fire on a Policeman Shot In Srinagar
ಜಮ್ಮು ಕಾಶ್ಮೀರದಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಈಚಿನ ದಿನಗಳಲ್ಲಿ ದಾಳಿ ಹೆಚ್ಚಾಗುತ್ತಿದೆ. ದೆಹಲಿ: ಉಗ್ರಗಾಮಿಗಳ ಗುಂಡಿಗೆ ಜಮ್ಮು ಕಾಶ್ಮೀರದ ಪೊಲೀಸ್ ಸಿಬ್ಬಂದಿಯೊಬ್ಬರು ಭಾನುವಾರ ಹುತಾತ್ಮರಾಗಿದ್ದಾರೆ. ಶ್ರೀನಗರದ ಬಾಟ್ಮಲೂ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಭಯೋತ್ಪಾದಕರು ಬೆನ್ನಟ್ಟಿ ಕೊಂದಿದ್ದಾರೆ. ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ಕಾನ್ಸ್ಟೆಬಲ್ ತೌಸೀಫ್ ಅಹಮದ್ ಅವರ ಮೇಲೆ ಅವರ ಮನೆಯ ಹತ್ತಿರವೇ ರಾತ್ರಿ 8 ಗಂಟೆಗೆ ಉಗ್ರರು ಗುಂಡು ಹಾರಿಸಿದ್ದಾರೆ ಎಂದು ಪಿಟಿಐ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಿದೆ. […]
-
ರಸ್ತೆ, ಮೆಟ್ರೋ, ಕೆರೆಗಳ ಅಭಿವೃದ್ಧಿ; ಮಿಷನ್ 2022 ಪ್ರಗತಿ ಪರಿಶೀಲನ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಸಲಹೆ | CM Basavaraj Bommai in Bengaluru Mission 2022 Meeting BBMP
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು: ನಗರದ ಕೇಂದ್ರ ಭಾಗದ ರಸ್ತೆಗಳ ಅತ್ಯುತ್ತಮ ನಿರ್ವಹಣೆ, ಸುಗಮ ಸಂಚಾರ ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕು. ಇದಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆ ಕುರಿತು ಪ್ರತ್ಯೇಕ ಸಭೆ ನಡೆಸಿ ಪರಿಶೀಲಿಸುತ್ತೇನೆ. ಮೆಟ್ರೋ ರೈಲು ಯೋಜನೆ ಮೊದಲೇ ಪೂರ್ಣಗೊಳಿಸಬೇಕು. ನಿಗದಿತ ಗುರಿಗೆ ಒಂದು ವರ್ಷ ಮೊದಲೇ ಪೂರ್ಣಗೊಳಿಸಿ ಎಂದು ಬೆಂಗಳೂರು ಮಿಷನ್ 2022 ಪ್ರಗತಿ ಪರಿಶೀಲನೆ ಸಭೆ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ನವೆಂಬರ್ 7) ಹೇಳಿದರು. ಈ ಬಗ್ಗೆ, ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಕೆಲ […]
-
T20 World Cup 2021: ಕೆಎಲ್ ರಾಹುಲ್ ದಾಖಲೆ ಸರಿಗಟ್ಟಿದ ಶೊಯೇಬ್ ಮಲಿಕ್ | T20 World Cup 2021: Shoaib Malik equals KL Rahul’s Fastest Fifty Record
Shoaib Malik ಟಿ20 ವಿಶ್ವಕಪ್ನ 37ನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ದ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾ ಓಪನರ್ ಕೆಎಲ್ ರಾಹುಲ್ ದಾಖಲೆ ಬರೆದಿದ್ದರು. 3 ಸಿಕ್ಸ್ ಹಾಗೂ 6 ಫೋರ್ ಸಿಡಿಸಿ ರಾಹುಲ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದು ಈ ಬಾರಿಯ ಟಿ20 ವಿಶ್ವಕಪ್ನ ಅತೀ ವೇಗದ ಅರ್ಧಶತಕದ ದಾಖಲೆ ಬರೆದಿತ್ತು. ಆದರೆ ಇದೀಗ ಇದೇ ದಾಖಲೆಯನ್ನು ಪಾಕಿಸ್ತಾನ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶೊಯೇಬ್ ಮಲಿಕ್ ಸರಿಗಟ್ಟಿದ್ದಾರೆ. ಸ್ಕಾಟ್ಲೆಂಡ್ ವಿರುದ್ದದ ಪಂದ್ಯದಲ್ಲಿ 5ನೇ […]
-
ಗೃಹ ಸಚಿವರಿಗೆ ಪತ್ರ ಬರೆದ ಅಶ್ವಿನಿ ಪುನೀತ್ ರಾಜ್ಕುಮಾರ್
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ನಿಧನದ ವಿಚಾರವಾಗಿ ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿರುವ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು, ಸಚಿವರಿಗೆ ಪತ್ರದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಪುನೀತ್ ರಾಜ್ಕುಮಾರ್ ಆಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ಅವರು ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನಮ್ಮ ನೋವನ್ನು ಅಡಗಿಟ್ಟಿಸಿಕೊಂಡು ಅವರ ಸಕಲ ಗೌರವಗಳೊಂದಿಗೆ ಕಳುಹಿಸಿಕೊಡುವುದು ಅನಿವಾರ್ಯತೆಯಾಗಿತ್ತು. ಇಂತಹ ಸಂದರ್ಭದಲ್ಲಿ ಗೃಹಮಂತ್ರಿಗಳಾದ ತಾವು ನಮಗೆ ಬೆಂಬಲವಾಗಿ ನಿಂತಿದ್ದೀರಿ. ಲಕ್ಷಾಂತರ ಅಭಿಮಾನಿಗಳಿಗೆ ಅಂತಿಮ ದರ್ಶನದ […]
-
ಐಪಿಎಲ್ ಟು ಐಸಿಸಿ ಟೂರ್ನಮೆಂಟ್: ಖಾಲಿ ಕೈ ಕೊಹ್ಲಿ! ವಿರಾಟ್ ನಾಯಕತ್ವದ ಪ್ರಯಾಣ ಹ್ಯಾಪಿ ಎಂಡಿಂಗ್ ಕಾಣಲೇ ಇಲ್ಲ | T20 World Cup 2021 Virat Kohlis T20 captaincy ends without a trophy
ವಿರಾಟ್ ಕೊಹ್ಲಿ 16 ಸೆಪ್ಟೆಂಬರ್ 2021 ರಂದು, ವಿರಾಟ್ ಕೊಹ್ಲಿ ICC T20 ವಿಶ್ವಕಪ್ 2021 ರ ನಂತರ ತಂಡದ ನಾಯಕತ್ವವನ್ನು ತೊರೆಯುವುದಾಗಿ ಘೋಷಿಸಿದಂತೆ, ಭಾರತೀಯ ಕ್ರಿಕೆಟ್ ತಂಡದಲ್ಲಿ ಬದಲಾವಣೆಗೆ ಅಡಿಪಾಯ ಹಾಕಲಾಯಿತು. ಮೂರು ದಿನಗಳ ನಂತರ IPL 2021 ಋತುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕತ್ವ ತೊರೆಯುವುದಾಗಿ ಕೊಹ್ಲಿ ಘೋಷಿಸಿದರು. ಇಂತಹ ಪರಿಸ್ಥಿತಿಯಲ್ಲಿ ಟಿ20 ಮಾದರಿಯಲ್ಲಿ ಕೊನೆಯ ಬಾರಿಗೆ ತಮ್ಮ ಫ್ರಾಂಚೈಸಿ ಮತ್ತು ಭಾರತ ತಂಡದ ನಾಯಕತ್ವ ವಹಿಸಲಿರುವ ಕೊಹ್ಲಿ, ಪ್ರಶಸ್ತಿಯೊಂದಿಗೆ […]
-
ಚುನಾವಣೆ ನಡೆದ್ರು ಇಲ್ಲ ಮೇಯರ್ ಭಾಗ್ಯ.. ನಾವಿಕನಿಲ್ಲದ ದೋಣಿಯಂತಾದ ಪಾಲಿಕೆಗಳು
ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲು ಪಾಲಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಆದರೆ ಸರ್ಕಾರ ಮಾತ್ರ ಪಾಲಿಕೆಗಳತ್ತ ದಿವ್ಯನಿರ್ಲಕ್ಷ್ಯ ವಹಿಸುತ್ತಿದೆ. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಪಾಲಿಕೆಗಳ ಮೇಯರ್ ಆಯ್ಕೆಗೆ ಮೀನ-ಮೇಷ ಎಣಿಸುತ್ತಿದೆ. ಇದರಿಂದ ಪಾಲಿಕೆ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಅಧಿಕಾರ ವಿಕೇಂದ್ರಿಕರಣ ಹಾಗೂ ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಪಾಲಿಕೆಗಳ ಜವಾಬ್ದಾರಿ ದೊಡ್ಡದು. ಆದರೆ ಇಂಥ ಮಹತ್ವದ ಜವಾಬ್ದಾರಿ ಹೊತ್ತಿರೋ ಪಾಲಿಕೆಗಳಿಗೆ ಸೂಕ್ತ ಸಾರಥಿಯೇ ಇಲ್ಲದಂತಾಗಿದೆ. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಪಾಲಿಕೆಗಳಿಗೆ ಚುನಾವಣೆ ನಡೆದ್ರೂ ಮೇಯರ್ […]
-
ಎನ್ಸಿಬಿ ವಿಚಾರಣೆಯಿಂದ ತಪ್ಪಿಸಿಕೊಂಡ ಆರ್ಯನ್ ಖಾನ್; ಶಾರುಖ್ ಮಗ ಕೊಟ್ಟ ಕಾರಣ ಏನು? | Aryan Khan Skips NCB Questioning On Sunday Due to Covid Symptoms
ಆರ್ಯನ್ ಖಾನ್ ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದಿದ್ದ ಆರ್ಯನ್ ಖಾನ್ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ, ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತ್ತು. ಆದರೆ, ಈಗ ಆರ್ಯನ್ ಖಾನ್ ಇಂದು (ನವೆಂಬರ್ 7) ವಿಚಾರಣೆಗೆ ಹಾಜರಾಗಿಲ್ಲ. ತಾವು ವಿಚಾರಣೆಗೆ ಏಕೆ ಹಾಜರಾಗುತ್ತಿಲ್ಲ ಎಂಬುದಕ್ಕೆ ಆರ್ಯನ್ ಖಾನ್ ಎನ್ಸಿಬಿ ಅಧಿಕಾರಿಗಳಿಗೆ ಕಾರಣವನ್ನೂ ನೀಡಿದ್ದಾರೆ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಅನೇಕ ಆರೋಪಗಳು ಕೇಳಿಬಂದಿವೆ. ಈ […]
-
ಬೌಲರ್ಗಳು ಟೀಂ ಇಂಡಿಯಾ ಕ್ಯಾಪ್ಟನ್ ಕೆಲಸಕ್ಕೆ ಬರೋದಿಲ್ವಾ..? ಆಶಿಶ್ ನೆಹ್ರಾ ಕಿಡಿ
ಟಿ-20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಟಿ20 ನಾಯಕತ್ವ ತ್ಯಜಿಸಲಿದ್ದಾರೆ. ಹಾಗಾಗಿ ಕೊಹ್ಲಿ ಬದಲು ಯಾರಿಗೆ ನಾಯಕತ್ವ ಒಲಿಯಲಿದೆ ಎಂಬ ಚರ್ಚೆಗಳು ಈಗಾಗಲೇ ಆರಂಭಗೊಂಡಿದೆ. ಟೀಂ ಇಂಡಿಯಾ ನಾಯಕತ್ವ ಬದಲಾವಣೆ ಕುರಿತು ವಿಶ್ಲೇಷಕರು, ಟೀಂ ಇಂಡಿಯಾ ಮಾಜಿ ಆಟಗಾರರು ಸೇರಿದಂತೆ ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಸದಸ್ಯರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ವಿಶ್ಲೇಷಣೆ ಮಾಡಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ರೇಸ್ನಲ್ಲಿ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಅವರು ಮುಂದಿದ್ದಾರೆ […]
-
Puneeth Rajkumar: ಪುನೀತ ನಮನ ಕಾರ್ಯಕ್ರಮಕ್ಕೆ ಬರೆದ ವಿಶೇಷ ಗೀತೆಯ ಮೊದಲೆರಡು ಸಾಲನ್ನು ಹಂಚಿಕೊಂಡ ಸಾಹಿತಿ ನಾಗೇಂದ್ರ ಪ್ರಸಾದ್ | Nagendra Prasad reveals first two lines of his tribute song to Puneeth which plays on Puneeth Namana program
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನವೆಂಬರ್ 16ರಂದು ಆಯೋಜಿಸುತ್ತಿರುವ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ತಾರೆಯರು, ಗಣ್ಯರು ಭಾಗಿಯಾಗಲಿದ್ದಾರೆ. ಡಾ.ರಾಜಕುಮಾರ್ ಕುಟುಂಬಸ್ಥರು ಹಾಗೂ ಕನ್ನಡ ಚಿತ್ರರಂಗ ಇದರಲ್ಲಿ ಭಾಗಿಯಾಗಲಿದೆ. ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ. ಖ್ಯಾತ ಸಾಹಿತಿ ವಿ.ನಾಗೇಂದ್ರ ಪುನೀತ್ ಕುರಿತು ವಿಶೇಷ ಗೀತೆಯೊಂದನ್ನು ರಚಿಸಿದ್ದು, ಅದನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಟಿವಿ9ನೊಂದಿಗೆ ಮಾತನಾಡಿರುವ ನಾಗೇಂದ್ರ ಪ್ರಸಾದ್, ಹಾಡಿನ ಮೊದಲೆರಡು ಸಾಲುಗಳನ್ನು […]
-
ಕೃಷಿ ಸಮಸ್ಯೆಗಳ ಬಗ್ಗೆ ನಾನು ಏನಾದರೂ ಹೇಳಿದರೆ ಅದು ವಿವಾದವಾಗುತ್ತದೆ: ಸತ್ಯಪಾಲ್ ಮಲಿಕ್ | Meghalaya governor Satya Pal Malik refused to speak on the ongoing farmers protest
ಸತ್ಯಪಾಲ್ ಮಲ್ಲಿಕ್ ದೆಹಲಿ: ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ (Satya Pal Malik) ರೈತರ ಪ್ರತಿಭಟನೆಯ ಬಗ್ಗೆ ಮಾತನಾಡಲು ನಿರಾಕರಿಸಿದ್ದು ಈ ಬಗ್ಗೆ ಮಾತನಾಡಿದರೆ ಅದು ವಿವಾದಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಪ್ರಾಣಿ ಸತ್ತಾಗಲೂ ಅವರು ಸಂತಾಪ ವ್ಯಕ್ತಪಡಿಸುತ್ತಾರೆ. ಆದರೆ ಪ್ರತಿಭಟನಾಕಾರರ ಬೇಡಿಕೆಗಳನ್ನು ಅವರು ಸ್ವೀಕರಿಸಲು ದೆಹಲಿ ನೇತಾರರು ತಯಾರಿಲ್ಲ ಎಂದು ಮಲಿಕ್ ಹೇಳಿದ್ದಾರೆ. “ಈ ರೈತರ ಚಳುವಳಿಯಲ್ಲಿ 600 ಜನರು ಸತ್ತಿದ್ದಾರೆ. ಪ್ರಾಣಿ ಸತ್ತಾಗಲೂ, ದೆಹಲಿ ‘ನೇತಾರರು’ ಸಂತಾಪ ವ್ಯಕ್ತಪಡಿಸುತ್ತಾರೆ, ಆದರೆ ಲೋಕಸಭೆಯಲ್ಲಿ […]
-
ವಿಚಾರಣೆ ವೇಳೆ ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ
ಬೆಂಗಳೂರು: ಬಿಟ್ ಕಾಯಿನ್ ಕೇಸ್ನ ಆರೋಪಿ ಶ್ರೀಕಿ ಜೊತೆ ಕಿರಿಕ್ ಮಾಡಿಕೊಂಡು ಅರೆಸ್ಟ್ ಆಗಿದ್ದ ಭೀಮಾ ಜುವೆಲ್ಲರ್ಸ್ ಮಾಲೀಕರ ಮಗ ವಿಷ್ಣುಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಪೊಲೀಸ್ರಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. NDPS ಕಾಯ್ದೆ ಅಡಿ ಬಂಧನಕ್ಕೊಳಗಾಗಿ ವಿಚಾರಣೆಗೊಳಗಾಗಿರುವ ವಿಷ್ಣುಭಟ್ ವಿದೇಶಿ ಪ್ರಜೆ ಜೊತೆ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ಎನ್ನಲಾಗಿದೆ. ಪೂರಕವೆಂಬಂತೆ ವಿಷ್ಣುಭಟ್ ಮನೆ ಮೇಲೆ ದಾಳಿ ನಡೆಸಿದಾಗ ಗಾಂಜಾ ಹಾಗೂ ಪೌಡರ್ ಮಾದರಿಯ ಡ್ರಗ್ಸ್ ಪತ್ತೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ:ಕಿರಿಕ್ನಲ್ಲಿ ತಗ್ಲಾಕೊಂಡ ಶ್ರೀಕಿ.. ಭೀಮಾ […]
-
Rahul Dravid: ಬೇರೊಂದು ದೇಶದ ಪರ 12 ಪಂದ್ಯವಾಡಿದ್ದ ರಾಹುಲ್ ದ್ರಾವಿಡ್ | Rahul Dravid played 12 games for Scotland in 2003
Rahul Dravid ಟೀಮ್ ಇಂಡಿಯಾದ (Team India) ಹೊಸ ಕೋಚ್ ಆಗಿ ದಿ ಲೆಜೆಂಡ್ ರಾಹುಲ್ ದ್ರಾವಿಡ್ (Rahul Dravid) ನೇಮಕವಾಗಿದ್ದಾರೆ. ಮುಂಬರುವ ನ್ಯೂಜಿಲೆಂಡ್ ಸರಣಿಯೊಂದಿಗೆ ದ್ರಾವಿಡ್ ಅಧಿಕಾರವಹಿಸಿಕೊಳ್ಳಲಿದ್ದಾರೆ. ಭಾರತ ಪರ 164 ಟೆಸ್ಟ್, 344 ಏಕದಿನ ಹಾಗೂ 1 ಟಿ20 ಪಂದ್ಯವಾಡಿರುವ ದ್ರಾವಿಡ್, ಟೀಮ್ ಇಂಡಿಯಾ ಹೊರತಾಗಿ ಮತ್ತೊಂದು ದೇಶವನ್ನೂ ಕೂಡ ಪ್ರತಿನಿಧಿಸಿದ್ದರು ಎಂಬುದು ವಿಶೇಷ. ಹೌದು, ರಾಹುಲ್ ದ್ರಾವಿಡ್ ಅವರು 2003 ರಲ್ಲಿ ಸ್ಕಾಟ್ಲೆಂಡ್ ಪರ ಕಣಕ್ಕಿಳಿದಿದ್ದರು. ಕುತೂಹಲಕಾರಿ ಅಂಶವೆಂದರೆ ಅಂದು ತಂಡದಲ್ಲಿದ್ದ ಯುವ […]
-
ಸೆಮೀಸ್ ರೇಸ್ನಿಂದ ಔಟ್.. ಅಭ್ಯಾಸ ರದ್ದುಪಡಿಸಿ ರೂಮ್ನಲ್ಲೇ ಉಳಿದ ಕೊಹ್ಲಿ ಬಾಯ್ಸ್
ಟಿ-20 ವಿಶ್ವಕಪ್ನಲ್ಲಿ ಗ್ರೂಪ್-2ರಲ್ಲಿ ಪಾಕಿಸ್ತಾನದ ಬಳಿಕ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಇಂದು ನಡೆದ ಆಫ್ಘಾನಿಸ್ತಾನದ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿದ ಕಿವೀಸ್, ಆಫ್ಘನ್ ಮತ್ತು ಟೀಮ್ ಇಂಡಿಯಾವನ್ನ ವಿಶ್ವಕಪ್ನ ಸೆಮಿಫೈನಲ್ ರೇಸ್ನಿಂದ ಹೊರದಬ್ಬಿತ್ತು. ವಿಶ್ವಕಪ್ ಲೀಗ್ನ ಕೊನೆ ಪಂದ್ಯದಲ್ಲಿ ಟೀಮ್ ಇಂಡಿಯಾ, ನಮೀಬಿಯಾವನ್ನ ಎದುರಿಸಲಿದೆ. ಆದರೆ ಈ ಪಂದ್ಯದಲ್ಲಿ ಗೆದ್ದರೂ ಪ್ರಯೋಜನವಿಲ್ಲವಾಗಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಭಾರತ ತೃಪ್ತಿ ಪಡಬೇಕಾಗುತ್ತೆ. ನ್ಯೂಜಿಲೆಂಡ್ ನಾಲ್ಕು ಪಂದ್ಯಗಳಲ್ಲಿ ಗೆದ್ದು 8 ಅಂಕ ಸಂಪಾದಿಸಿದೆ. ಭಾರತ ನಾಳೆ ಗೆದ್ದರೂ ಮೂರು […]
-
Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 239 ಜನರಿಗೆ ಕೊರೊನಾ ದೃಢ; 5 ಮಂದಿ ಸಾವು | Karnataka New Corona Cases Death Toll Total Covid19 Active Coronavirus Cases on November 7
ಪ್ರಾತಿನಿಧಿಕ ಚಿತ್ರ ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ನವೆಂಬರ್ 7) ಹೊಸದಾಗಿ 239 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,89,952 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,43,809 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 5 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,112 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 8,002 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ […]
-
ಬರೋಬ್ಬರಿ ಮೂರು ಮದುವೆಯಾದ ಯೋಧ.. ಪೊಲೀಸ್ ಠಾಣೆ ಮೆಟ್ಟಿಲೇರಿದ 2ನೇ ಪತ್ನಿ
ಹುಬ್ಬಳ್ಳಿ: ಯೋಧರೆಂದ್ರೆ ಯಾರು? ದೇಶದ ಜನ ಸುರಕ್ಷಿತವಾಗಿರಬೇಕು ಅಂತ ಹಗಲು-ರಾತ್ರಿ ನಿದ್ದೆಗೆಟ್ಟು ದೇಶದ ಗಡಿಯಲ್ಲಿ ನಿಂತು ನಮ್ಮನ್ನೆಲ್ಲಾ ಕಾಯೋರು. ಆದ್ರೆ, ಇಲ್ಲೊಬ್ಬ ಯೋಧ, ದೇಶದ ಗಡಿ ಕಾಯೋದು ಬಿಟ್ಟು, ಮೂವರು ಮಹಿಳೆಯರ ಬಾಳಲ್ಲಿ ಚೆಲ್ಲಾಟವಾಡಿರೋ ಆರೋಪ ಕೇಳಿ ಬಂದಿದೆ. ನಾನು, ನನ್ನ ಹೆಂಡ್ತೀರು ಅಂತ ಸಿನಿಮಾದಲ್ಲಿ ರವಿಮಾಮ ಇಬ್ಬರು ಹೆಂಡ್ತಿಯರ ಜೊತೆ ಡುಯೆಟ್ ಹಾಡಿದ್ರೆ, ಇಲ್ಲೊಬ್ಬ ಯೋಧ ಒಬ್ರಲ್ಲ, ಇಬ್ರಲ್ಲ ಬರೋಬ್ಬರಿ ಮೂವರು ಹೆಂಡ್ತಿಯರನ್ನ ಮದುವೆ ಆಗಿ ಮೋಸ ಮಾಡಿದ್ದಾನಂತೆ. ಬಿಎಸ್ಎಫ್ ಯೋಧನಾಗಿದ್ದುಕೊಂಡು ಕೈಕೊಟ್ಟ ಆರೋಪ ಹೊತ್ತಿರುವ […]
-
ಗುಟ್ಟಾಗಿ ನಡೆಯಿತು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ರೋಕಾ ಕಾರ್ಯಕ್ರಮ; ಹಿಂದೂ ಹಬ್ಬದಂದು ಅಭಿಮಾನಿಗಳಿಗೆ ಸರ್ಪ್ರೈಸ್ | Katrina Kaif and Vicky Kaushal Secret Roka Ceremony in Mumbai
ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ನಡುವೆ ಓಡಾಡುತ್ತಿರುವ ಸುದ್ದಿ ಒಂದೆರಡಲ್ಲ. ಇವರಿಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ದಂಪತಿ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬುದನ್ನು ಅಭಿಮಾನಿಗಳು ಬಲವಾಗಿ ನಂಬಿದ್ದಾರೆ. ಮದುವೆ ಬಗ್ಗೆ ಇಷ್ಟೆಲ್ಲ ಸುದ್ದಿ ಹರಿದಾಡುತ್ತಿದ್ದರೂ ಇಬ್ಬರೂ ಮೌನ ವಹಿಸಿರುವುದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಅಚ್ಚರಿ ಎಂದರೆ, ಈಗ ದೀಪಾವಳಿ ಹಬ್ಬದಂದು ಇವರ ರೋಕಾ ಕಾರ್ಯಕ್ರಮ ಪೂರ್ಣಗೊಂಡಿದೆ […]
-
ಅಂದು ಬೇರೊಂದು ದೇಶದ ಪರ ಬ್ಯಾಟ್ ಬೀಸಿ ದಾಖಲೆ ಬರೆದಿದ್ದರು ದ್ರಾವಿಡ್.. ಆ ದೇಶ ಯಾವ್ದು ಗೊತ್ತಾ?
ರಾಹುಲ್ ದ್ರಾವಿಡ್.. ಭಾರತ ಕ್ರಿಕೆಟ್ ಕಂಡ ಅಮೋಘ ಆಟಗಾರ. ಸದ್ಯ ಟೀಂ ಇಂಡಿಯಾದ ಹೆಡ್ ಕೋಚ್. ಅಂದು ರಾಹುಲ್ ಮೈದಾನಕ್ಕೆ ಬ್ಯಾಟ್ ಹಿಡಿದು ಬಂದರೆ ಅವರನ್ನು ವಾಪಾಸ್ ಪೆವಿಲಿಯನ್ಗೆ ಕಳಿಸುವುದು ಅಷ್ಟು ಸುಲಭವಿರಲಿಲ್ಲ. ತಮ್ಮದೆಯಾದ ಶಾಂತ ರೀತಿಯಲ್ಲಿ ಚೆಂಡನ್ನು ದಂಡಿಸುತ್ತಿದ್ದ ಪರಿಗೆ ಎಂತಹ ಬೌಲರ್ಗಳು ಕೂಡ ಹೈರಾಣಾಗುತ್ತಿದ್ದರು. ಯಾವುದೇ ಮಾದರಿಯ ಕ್ರಿಕೆಟ್ ಆಗಲಿ ರಾಹುಲ್ ಅಲ್ಲಿ ಮಿಂಚಿ ಕ್ರೀಡಾಭಿಮಾನಿಗಳನ್ನು ರಂಜಿಸಿದ್ದಾರೆ. ಟೆಸ್ಟ್, ಏಕದಿನ, ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಸೈ ಎನಿಸಿಕೊಂಡ ಕನ್ನಡಿಗ ಅಂದು ಸ್ಕಾಟ್ಲೆಂಡ್ […]
-
Rashid Khan: ಸೋತರೂ ವಿಶ್ವ ದಾಖಲೆ ನಿರ್ಮಿಸಿದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ | Rashid Khan becomes fastest bowler to pick 400 T20 wickets
Rashid Khan ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ದ ಸೋಲುವ ಮೂಲಕ ಅಫ್ಘಾನಿಸ್ತಾನ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ರಶೀದ್ ಖಾನ್ ಕೇವಲ 27 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಈ ವಿಕೆಟ್ನೊಂದಿಗೆ ಇದೀಗ ಟಿ20 ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದ ವಿಶ್ವದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅತೀ ವೇಗವಾಗಿ ಟಿ20ಯಲ್ಲಿ 400 ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ […]
-
ಉತ್ತರಾಧಿಕಾರಿ ನೇಮಕಕ್ಕೆ ನಿರ್ಲಕ್ಷ್ಯ ಆರೋಪ: ಸಿರಿಗೆರೆ ಸ್ವಾಮೀಜಿ ವಿರುದ್ಧ ಮುಂದುವರಿದ ವಾಗ್ದಾಳಿ | Allegations Against Sirigere Swamiji Turf in Davanagere
ದಾವಣಗೆರೆಯಲ್ಲಿ ಸಿರಿಗೆರೆ ಭಕ್ತರ ಬಣಗಳ ನಡುವೆ ಮಾತಿನ ಚಕಮಕಿ (ಎಡಚಿತ್ರ). ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ (ಸಂಗ್ರಹ ಚಿತ್ರ) ದಾವಣಗೆರೆ: ಸಿರಿಗೆರೆ ಮಠದ ಭಕ್ತರು ಎರಡು ಬಣಗಳಾಗಿ ಒಡೆದಿದ್ದು ಪೀಠದಲ್ಲಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಒಂದು ಬಣವು ಬಹಿರಂಗ ಆರೋಪ ಮಾಡುತ್ತಿದೆ. ಸ್ವಾಮೀಜಿಗೆ 76 ವರ್ಷವಾಗಿದೆ. ಉತ್ತರಾಧಿಕಾರಿ ನೇಮಕಕ್ಕಾಗಿ ಹತ್ತಾರು ಪತ್ರ ಬರೆದರೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಅವರ ಸಂಬಂಧಿಕರನ್ನೇ ಉತ್ತರಾಧಿಕಾರಿಯನ್ನಾಗಿ ಮಾಡಲು ಸಂಚು ನಡೆಸುತ್ತಿದ್ದಾರೆ ಎಂದು ಒಂದು ಬಣವು ದೂರಿದೆ. ಸ್ವಾಮೀಜಿ ಬಗ್ಗೆ […]
-
ಉತ್ತರ ಪ್ರದೇಶದಲ್ಲಿ ಝೀಕಾ ವೈರಸ್ ಆತಂಕ.. 79ಕ್ಕೇರಿದ ಸೋಂಕಿತರ ಸಂಖ್ಯೆ
ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಝಿಕಾ ವೈರಸ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈವರೆಗೆ 79 ಪ್ರಕರಣಗಳು ದಾಖಲಾಗಿವೆ. ಈ ಹಿನ್ನಲೆ ಇಂದು ಸಿಎಂ ಯೋಗಿ ಆದಿತ್ಯನಾಥ್ ಆರೋಗ್ಯ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸೋಂಕಿನ ಹರಡುವಿಕೆಯನ್ನ ತಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಸದ್ಯ ನಿನ್ನೆ ಒಂದೇ ದಿನ ಕಾನ್ಪುರದಲ್ಲಿ 13 ಹೊಸ ಝೀಕಾ ವೈರಸ್ ಪ್ರಕರಣಗಳು ದಾಖಲಾಗಿವೆ. ಪ್ರತಿನಿತ್ಯ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಆರೋಗ್ಯ ಇಲಾಖೆಯು ಸಹ ಪ್ರತಿ ಮನೆಗೆ ತೆರಳಿ ಆರೋಗ್ಯ […]
-
ನಾನು ಹಿಂದೂ, ಹಾಗಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್ | I am going to a temple because I am a Hindu says Arvind Kejriwal
ಅರವಿಂದ ಕೇಜ್ರಿವಾಲ್ ಪಣಜಿ: ನಾನು ಹಿಂದೂ ಎಂಬ ಕಾರಣಕ್ಕೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಬಾರದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ. ಎರಡು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿದ ಆಮ್ ಆದ್ಮಿ ಪಕ್ಷದ (Aam Aadmi Party) ರಾಷ್ಟ್ರೀಯ ಸಂಚಾಲಕರಾದ ಕೇಜ್ರಿವಾಲ್ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ “ಮೃದು ಹಿಂದುತ್ವ” ದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ. “ನೀವು ದೇವಸ್ಥಾನಕ್ಕೆ ಹೋಗುತ್ತೀರಾ? ನಾನು ಕೂಡ ದೇವಸ್ಥಾನಕ್ಕೆ […]
-
T20 World Cup: ಕೊಹ್ಲಿ ನಾಯಕತ್ವಕ್ಕೆ ಕೆಟ್ಟ ದಾಖಲೆಯ ಕಿರೀಟ! 9 ವರ್ಷಗಳ ಬಳಿಕ ಭಾರತಕ್ಕೆ ಭಾರೀ ಮುಖಭಂಗ | India have failed to qualify for playoffs of an ICC event for the first time since 2012
1/5 ಒಂದಕ್ಕಿಂತ ಹೆಚ್ಚು ಬ್ಯಾಟ್ಸ್ಮನ್ಗಳು ಮತ್ತು ಬೌಲರ್ಗಳನ್ನು ಹೊಂದಿರುವ ಟೀಮ್ ಇಂಡಿಯಾ 2021 ರ ಟಿ20 ವಿಶ್ವಕಪ್ನಿಂದ ಹೊರಬಿದ್ದಿದೆ. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಲ್ಕನೇ ಗೆಲುವು ದಾಖಲಿಸಿದ ಕೂಡಲೇ 2021 ರ ಟಿ20 ವಿಶ್ವಕಪ್ ಗೆಲ್ಲುವ ಟೀಂ ಇಂಡಿಯಾದ ಕನಸು ಭಗ್ನಗೊಂಡಿದೆ. ನ್ಯೂಜಿಲೆಂಡ್ ಅಫ್ಘಾನಿಸ್ತಾನವನ್ನು 8 ವಿಕೆಟ್ಗಳಿಂದ ಸೋಲಿಸಿತು ಮತ್ತು ಇದರೊಂದಿಗೆ ಪಾಕಿಸ್ತಾನ-ನ್ಯೂಜಿಲೆಂಡ್ ಗುಂಪು 2 ರಿಂದ ಸೆಮಿಫೈನಲ್ಗೆ ಪ್ರವೇಶಿಸಿದವು. ಜೊತೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಗುಂಪು 1 ರಲ್ಲಿ ಸೆಮಿ ಸ್ಥಾನ ಗಳಿಸಿದವು. […]
-
ಜೆಡಿಎಸ್ನಲ್ಲಿ ಇರಬೇಕಾ, ಬೇಡವಾ ಅನ್ನೋದನ್ನ ಜನರು ನಿರ್ಧರಿಸುತ್ತಾರೆ -ಜಿ.ಟಿ.ದೇವೇಗೌಡ
ಮೈಸೂರು: ನಾನು ಜೆಡಿಎಸ್ನಲ್ಲಿ ಇರಬೇಕಾ ಬೇಡವಾ ಅನ್ನೋದನ್ನ ಜನರು ತೀರ್ಮಾನಿಸ್ತಾರೆ ಅಂತಾ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರದ್ದು ಯಾವುದೇ ಅಭಿಪ್ರಾಯವಿದ್ರೂ ನನ್ನ ನಿರ್ಧಾರ ಬದಲಾಗುವುದಿಲ್ಲ ಎಂದಿದ್ದಾರೆ. ನಾನು ಬೆಳವಾಡಿ ದೇವಸ್ಥಾನಕ್ಕೆ ಹಣ ನೀಡಿದ್ದೆ, ಆದ್ರೂ ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ನನಗೆ ಆಹ್ವಾನ ನೀಡಿರಲಿಲ್ಲ ಅಂತಾ ಜಿಟಿಡಿ ಬೇಸರ ವ್ಯಕ್ತಪಡಿಸಿದ್ರು. ಈ ಹಿಂದೆ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡಿದ್ದೆ, ಕ್ಷೇತ್ರದ ಜನರು ಕರೆದಾಗ ಹೋಗಬೇಕಾಗುತ್ತೆ. ಆದ್ರೆ ಪಕ್ಷದಲ್ಲಿ […]
-
ರಾಜ್ಯದ 650 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ | Theater Owners Mourn to Puneeth Rajkumar Death in Karnataka
ಪುನೀತ್ ರಾಜ್ಕುಮಾರ್ ಪುನೀತ್ ರಾಜ್ಕುಮಾರ್ ಸಿನಿಮಾಗಳು ಸ್ಯಾಂಡಲ್ವುಡ್ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡುತ್ತಿತ್ತು. ಪುನೀತ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಚಿತ್ರಮಂದಿರಗಳಿಗೆ ಹೊಸ ಕಳೆ ಬರುತ್ತಿತ್ತು. ಅಭಿಮಾನಿಗಳು ಅದ್ಭುತವಾಗಿ ಥಿಯೇಟರ್ಗಳನ್ನು ಸಿಂಗರಿಸುತ್ತುದ್ದರು. ಆದರೆ, ಈಗ ಪುನೀತ್ ನಿಧನ ಹೊಂದಿದ್ದಾರೆ. ಇದು ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಈ ಕಾರಣಕ್ಕೆ ರಾಜ್ಯದ ಎಲ್ಲಾ 650 ಚಿತ್ರಮಂದಿರಗಳಲ್ಲಿ ಇಂದು (ನವೆಂಬರ್ 7) ಸಂಜೆ 6 ಗಂಟೆಗೆ ಪುನೀತ್ ರಾಜ್ಕುಮಾರ್ಗೆ ವಿಶೇಷ ಹಾಡನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಪ್ರದರ್ಶಕರ ವಲಯ ಮತ್ತು ಥಿಯೇಟರ್ […]
-
ರಾಜ್ಯಾದ್ಯಂತ ಚಿತ್ರ ಮಂದಿರಗಳ ಎದುರು ಪವರ್ ಸ್ಟಾರ್ಗೆ ಭಾವಪೂರ್ಣ ಶ್ರದ್ಧಾಂಜಲಿ
ಬೆಂಗಳೂರು: ಅಕಾಲಿಕ ನಿಧನ ಹೊಂದಿದ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಇಂದು ರಾಜ್ಯಾದ್ಯಂತ ಏಕ ಕಾಲಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ ಚಿತ್ರಮಂದಿರಗಳ ಮುಂದೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಇದರ ನಿಮಿತ್ತ ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಅಪ್ಪುಗಾಗಿ ವಿಶೇಷ ಗೀತೆಯನ್ನ ಪ್ರಸಾರ ಮಾಡುವ ಮೂಲಕ ನಮನವನ್ನ ಸಲ್ಲಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆವಿ ಚಂದ್ರಶೇಖರ್ ಹಾಗೂ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಸೇರಿದಂತೆ ಸಾಕಷ್ಟು ಅಭಿಮಾನಿಗಳು ಪಾಲ್ಗೊಂಡಿದ್ದಾರೆ. ಹುಬ್ಬಳ್ಳಿ: […]
-
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ನಿಂದ ಪಾದಯಾತ್ರೆ: ಸಿದ್ದರಾಮಯ್ಯ ಮಾಹಿತಿ | Siddaramaiah DK Shivakumar on Mekedatu Project Padayatre Karnataka Congress
ಸಿದ್ದರಾಮಯ್ಯ ಬೆಂಗಳೂರು: ಮೇಕೆದಾಟು ಕುಡಿವ ನೀರಿನ ಯೋಜನೆಗೆ ಡಿಪಿಆರ್ ಮಾಡಿದ್ದೆವು. ನಮ್ಮ ಸರ್ಕಾರದ ಅವಧಿಯಲ್ಲಿ ಡಿಪಿಆರ್ ಸಿದ್ಧಪಡಿಸಿ ಪರಿಸರ ಇಲಾಖೆಗೆ ಕಳುಹಿಸಿಕೊಟ್ಟಿದ್ದೆವು. ತಮಿಳುನಾಡು ಸರ್ಕಾರ ಸುಮ್ಮನೆ ಕ್ಯಾತೆ ತೆಗೆಯುತ್ತಿದೆ. ಮೇಕೆದಾಟು ಯೋಜನೆಯಿಂದ 2 ರಾಜ್ಯಗಳಿಗೂ ನೆರವಾಗುತ್ತೆ. ಕರ್ನಾಟಕ, ತಮಿಳುನಾಡು ರಾಜ್ಯದ ಜನರಿಗೆ ಸಹಾಯವಾಗುತ್ತೆ. ತಮಿಳುನಾಡಿಗೆ ನೀರು ಬೇಕೆಂದರೆ ಇಲ್ಲಿಂದಲೂ ಹರಿಸಬಹುದು ಎಂದು ಬೆಂಗಳೂರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು (ನವೆಂಬರ್ 7) ಹೇಳಿಕೆ ನೀಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ನಮ್ಮ […]
-
ಪೊಲೀಸ್ ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ ಒಂದೇ ಕುಟುಂಬ ಐವರು.. ಕಾರಣವೇನು?
ಕೋಲಾರ: ಮಗು ಅಪಹರಣ ಪ್ರಕರಣದಲ್ಲಿ ಪೊಲೀಸರ ವಿಚಾರಣೆಗೆ ಹೆದರಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ನಡೆದಿದೆ. ಗಂಗೋತ್ರಿ (17), ಮುನಿಯಪ್ಪ (7೦), ನಾರಾಯಣಮ್ಮ (65), ಪುಷ್ಪ (35), ಬಾಬು (45) ಆತ್ಮಹತ್ಯೆಗೆ ಯತ್ನಿಸಿದವರು. ಮಗು ಅಪಹರಣ ಪ್ರಕರಣದಲ್ಲಿ ಕುಟುಂಬದ ವಿರುದ್ಧ ಆರೋಪ ಕೇಳಿ ಬಂದಿದ್ದು, ಪೊಲೀಸ್ ವಿಚಾರಣೆಗೆ ಹೆದರಿದ ಕುಟುಂಬಸ್ಥರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಇನ್ನು ವಿಷ ಸೇವಿಸಿದ ಐವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂಬ […]
-
T20 World Cup: ಟಿ20 ವಿಶ್ವಕಪ್ನಿಂದ ಟೀಮ್ ಇಂಡಿಯಾ ಔಟ್! ಈ 5 ತಪ್ಪುಗಳು ವಿರಾಟ್ ತಂಡವನ್ನು ಮುಳುಗಿಸಿದವು | T20 World Cup 2021 team india knocked out after new zealand beat afghanistan
ಟೀಂ ಇಂಡಿಯಾ T20 ವಿಶ್ವಕಪ್ 2021 ರ ವೇಳಾಪಟ್ಟಿಯನ್ನು ಪ್ರಕಟಿಸಿದಾಗ, ಈ ಪಂದ್ಯಾವಳಿಯ ದೊಡ್ಡ ಸ್ಪರ್ಧಿ ಟೀಮ್ ಇಂಡಿಯಾ ಆಗಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಅವರಂತಹ ದಿಗ್ಗಜರ ಪೂರ್ಣ ತಂಡವು ಪ್ರತಿ ಎದುರಾಳಿಗೆ ದೊಡ್ಡ ಬೆದರಿಕೆಯಾಗಿತ್ತು. ಆದರೆ T20 ವಿಶ್ವಕಪ್ನಲ್ಲಿ ಭಾರತ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತು ಮತ್ತು ಈ ತಂಡವು ಸೂಪರ್-12 ಸುತ್ತಿನಿಂದಲೇ ಹೊರಬಿತ್ತು. ಅಫ್ಘಾನಿಸ್ತಾನದ ವಿರುದ್ಧ ನ್ಯೂಜಿಲೆಂಡ್ ಜಯಗಳಿಸುವುದರೊಂದಿಗೆ, 2021 ರ T20 […]
-
ನ್ಯಾಯ ಕುರುಡಾಗಿರಬಹುದು, ಪಂಜಾಬ್ನ ಜನರು ಅಲ್ಲ: ನವಜೋತ್ ಸಿಂಗ್ ಸಿಧು | Navjot singh sidhu criticised the AG APS Deol in a series of tweets
ನವಜೋತ್ ಸಿಂಗ್ ಸಿಧು ಚಂಡೀಗಡ: ತಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಪಂಜಾಬ್ ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ (General APS Deol) ಅವರು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot singh sidhu)ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ, ಸಿಧು ಭಾನುವಾರ ಡಿಯೋಲ್ ಮತ್ತು ತಮ್ಮದೇ ಪಕ್ಷದ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಸಿಧು ಅಡ್ವೊಕೇಟ್ ಜನರಲ್ ಅವರನ್ನು ಟೀಕಿಸಿದ್ದು, ಇವರು […]
-
ನಾಳೆ ಪುನೀತ್ ಪುಣ್ಯಸ್ಮರಣೆ..ಯಾರಿಗೆಲ್ಲಾ ಅವಕಾಶ?
ಬೆಂಗಳೂರು: ನಾಳೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದ್ದು ಕುಟುಂಬಸ್ಥರು ತಯಾರಿ ನಡೆಸಿದ್ದಾರೆ. ಅಪ್ಪು ಅಗಲಿ ಇಂದಿಗೆ ಹತ್ತು ದಿನ ಕಳೆದಿದ್ದು, ನಾಳೆ ಬೆಳಗ್ಗೆ 11 ಗಂಟೆ ಸುಮಾರಿಗೆ ಪುಣ್ಯಸ್ಮರಣೆ ಕಾರ್ಯ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ. ಮೊದಲು ಪುನೀತ್ ನಿವಾಸದಲ್ಲಿ ಪೂಜೆ ಸಲ್ಲಿಸಿ, ಬಳಿಕ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇನ್ನು ಮನೆಯಲ್ಲಿ ನಡೆಯುವ ಪುಣ್ಯಸ್ಮರಣೆ ಕಾರ್ಯದಲ್ಲಿ ಕುಟುಂಬದವರು ಮತ್ತು ಕೆಲ ಪ್ರಮುಖ ಕಲಾವಿದರಿಗೆ […]
-
ಪ್ರಧಾನಿ ನರೇಂದ್ರ ಮೋದಿಗೆ ಪ್ರಭಾವಿ ನಾಯಕನೆಂಬ ಮನ್ನಣೆ, ಏಂಜೆಲಾ ಮರ್ಕೆಲ್, ಜೋ ಬೈಡೆನ್ಗಿಂತ ಹೆಚ್ಚು ಮಾನ್ಯತೆ | PM Narendra Modi tops Global Leader Approval ratings with 70 percent score
ಕೇದಾರನಾಥದಲ್ಲಿ ನರೇಂದ್ರ ಮೋದಿ ದೆಹಲಿ: ವಿಶ್ವದ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಅಮೆರಿಕದ ಸಂಶೋಧನಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ನಡೆಸಿರುವ ಸಮೀಕ್ಷೆಯಲ್ಲಿ ಮೋದಿ ಅವರಿಗೆ ಅಗ್ರ ಶ್ರೇಯಾಂಕ ಸಿಕ್ಕಿದೆ. ಮಾರ್ನಿಂಗ್ ಕನ್ಸಲ್ಟ್ ಶನಿವಾರ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅತಿಹೆಚ್ಚು ಜನರಿಂದ ಮಾನ್ಯತೆ ಪಡೆದ ನಾಯಕ ಎನಿಸಿಕೊಂಡಿದ್ದಾರೆ. ಭಾರತದ ಶೇ 70ರಷ್ಟು ಜನರು ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೊ ಅಧ್ಯಕ್ಷ ಎಲ್.ಪೆಜ್ […]
-
ಐದು ರಾಜ್ಯಗಳ ಚುನಾವಣೆ ಬಗ್ಗೆ ಚರ್ಚೆ; ಸೇವೆ, ಸಂಕಲ್ಪವೇ ಬಿಜೆಪಿ ಗುರಿ: ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ಭೂಪೇಂದ್ರ ಯಾದವ್ | BJP National Executive Meeting PM Narendra Modi Bhupendra Yadav R Ashok
ಭೂಪೇಂದ್ರ ಯಾದವ್ (ಸಂಗ್ರಹ ಚಿತ್ರ) ದೆಹಲಿ: ಪಂಜಾಬ್ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಸ್ಪರ್ಧೆ ಮಾಡಲಿದೆ. ವಿಧಾನಸಭಾ ಎಲೆಕ್ಷನ್ನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸ್ತೇವೆ. 5 ರಾಜ್ಯಗಳ ಚುನಾವಣೆ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗಿದೆ. ಸೇವೆ ಮತ್ತು ಸಂಕಲ್ಪವೇ ಬಿಜೆಪಿ ಗುರಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಇಂದು (ನವೆಂಬರ್ 7) ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ 348 ಜನರು ಭಾಗಿ ಆಗಿದ್ದಾರೆ. ಕರ್ನಾಟಕ ರಾಜ್ಯದಿಂದ […]
-
ಅಪ್ಪು ಸೇವೆ ನೋಡಿದ್ರೆ ನಮ್ಗೆ ನಾಚಿಕೆ ಆಗಬೇಕು -ಸಚಿವ ಆನಂದ್ ಸಿಂಗ್
ಹಾವೇರಿ: ಪುನೀತ್ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಆನಂದ್ಸಿಂಗ್ ಸಹ ಪ್ರತಿಕ್ರಿಯಿಸಿದ್ದು, ಅಪ್ಪುಗೆ ಪದ್ಮಶ್ರೀ ನೀಡೋದಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಟ ಪುನೀತ್ 2000 ಇಸವಿಯಿಂದಲೂ ನನಗೆ ಪರಿಚಯ, ಆಗ ಪೊಲೀಯೋ ಜಾಹೀರಾತಿನಲ್ಲಿ ಸಮಾಜ ಸೇವಕರಾಗಿ ಗುರ್ತಿಸಿಕೊಂಡಿದ್ರು ಎಂದ ಆನಂದ್ಸಿಂಗ್, ಆಗ ನಾನು ಯಾವ ಶಾಸಕನೂ ಆಗಿರಲಿಲ್ಲ, ಸಚಿವನೂ ಆಗಿರಲಿಲ್ಲ ಆದ್ರೂ ಪೊಲೀಯೋ ವಿಚಾರವಾಗಿ ಕೆಲಸ ಮಾಡಿಕೊಟ್ಟಿದ್ರು ಎಂದರು. ಇನ್ನು ಅಪ್ಪು ಅವರು ಸಿನಿಮಾ ಜೊತೆಗೆ […]
-
T20 World Cup 2021: ಟಿ20 ವಿಶ್ವಕಪ್ನಿಂದ ಟೀಮ್ ಇಂಡಿಯಾ ಔಟ್ | T20 World Cup 2021: Team India Out of the Semi final race
Team India ಟಿ20 ವಿಶ್ವಕಪ್ನ 40ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ದ ನ್ಯೂಜಿಲೆಂಡ್ (Afghanistan vs New Zealand) ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ನ್ಯೂಜಿಲೆಂಡ್ ತಂಡವು ಸೆಮಿಫೈನಲ್ಗೇರಿದರೆ, ಅತ್ತ ಟೀಮ್ ಇಂಡಿಯಾ (Team India Semi Final) ವಿಶ್ವಕಪ್ನಿಂದ ಹೊರಬಿದ್ದಿದೆ. ಏಕೆಂದರೆ ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಗೆದ್ದರೆ ಮಾತ್ರ ಸೆಮಿಫೈನಲ್ಗೇರುವ ಅವಕಾಶ ಟೀಮ್ ಇಂಡಿಯಾಗಿತ್ತು. ಇದೀಗ ನ್ಯೂಜಿಲೆಂಡ್ ಗೆದ್ದು 8 ಅಂಕದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇನ್ನು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ನಮೀಬಿಯಾ (India vs […]
-
ಭಾರತೀಯರ ಆಸೆಗೆ ತಣ್ಣೀರು.. ಸೆಮೀಸ್ಗೆ ಕಿವೀಸ್, ಮನೆಗೆ ಟೀಂ ಕೊಹ್ಲಿ
ಇಂದು ದುಂಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಕಿವೀಸ್ ಪಡೆ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಸೆಮೀಸ್ ತಲುಪಿದೆ. ಇತ್ತ ಅಫ್ಘಾನಿಸ್ತಾನದೊಂದಿಗೆ ಕೊಹ್ಲಿ ಬಾಯ್ಸ್ ಕೂಡ ತವರಿಗೆ ಮರಳೋದು ಕನ್ಫರ್ಮ್ ಆಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ಗಳಿಸಲಷ್ಟೇ ಶಕ್ತವಾಯ್ತು.. ಸುಲಭ ಗುರಿಯನ್ನು ಬೆನ್ನತ್ತಿದ್ದ […]
-
ಕ್ರಿಕೆಟ್ನಲ್ಲಿ ಪಾಕಿಸ್ತಾನ ಗೆದ್ದಿದ್ದಕ್ಕೆ ಸಂಭ್ರಮಿಸಿದ ಪತ್ನಿ ವಿರುದ್ಧ ದೂರು ನೀಡಿದ ಪತಿ; ಎಫ್ಐಆರ್ ದಾಖಲು | Man Files Police Case Against Wife who Celebrated Pakistan Victory in Uttar Pradesh
ಇಶಾನ್ ಮಿಯಾ ರಾಂಪುರ: ಟಿ-20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಿದ್ದಕ್ಕೆ ಸಂಭ್ರಮಿಸಿದ್ದಾಳೆ ಎಂದು ಪತ್ನಿಯ ವಿರುದ್ಧ ಆರೋಪ ಮಾಡಿರುವ ವ್ಯಕ್ತಿ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಪತ್ನಿಯಷ್ಟೇ ಅಲ್ಲ ಆಕೆಯ ಇಡೀ ಕುಟುಂಬದವರ ವಿರುದ್ಧವೇ ದೂರು ನೀಡಿರುವ ಪರಿಣಾಮ ಇದೀಗ ಅವರೆಲ್ಲರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಘಟನೆ ಉತ್ತರಪ್ರದೇಶದ ರಾಂಪುರದಲ್ಲಿ ನಡೆದಿದೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಎಸ್ಪಿ ಅಂಕಿತ್ ಮಿತ್ತಲ್, ಅಕ್ಟೋಬರ್ 24ರಂದ ಪಂದ್ಯಾವಳಿ ನಡೆದಿತ್ತು. ಇದರಲ್ಲಿ ಭಾರತ ಸೋತ ನಂತರ ಭಾರತೀಯ […]
-
ಝಿಕಾ ವೈರಸ್: ಕಾನ್ಪುರದಲ್ಲಿ ಮತ್ತೆ 10 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 89ಕ್ಕೆ ಏರಿಕೆ | Ten more people have been tested positive for Zika virus in Kanpur
ಝಿಕಾ ವೈರಸ್ ಹರಡಿಸುವ ಸೊಳ್ಳೆ ಕಾನ್ಪುರ: ಭಾನುವಾರ ಕಾನ್ಪುರದಲ್ಲಿ ಹತ್ತು ಮಂದಿಗೆ ಝಿಕಾ ವೈರಸ್ (Zika Virus) ಪಾಸಿಟಿವ್ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 89 ಕ್ಕೆ ತಲುಪಿದೆ. ಇತ್ತೀಚೆಗೆ ವೈರಸ್ ಸೋಂಕಿಗೆ ಒಳಗಾದವರಲ್ಲಿ ಮೂವರು ವಾಯುಪಡೆ ಸಿಬ್ಬಂದಿ, ಇಬ್ಬರು ಮಹಿಳೆಯರು ಮತ್ತು ಪುರುಷರು ಎಂದು ಅಧಿಕಾರಿ ಹೇಳಿದ್ದಾರೆ. ಶುಕ್ರವಾರದ ಹೊತ್ತಿಗೆ ಜಿಲ್ಲೆಯಲ್ಲಿ ಝಿಕಾ ವೈರಸ್ನ ಒಟ್ಟು ಸೋಂಕುಗಳು 66 ಆಗಿದ್ದು, ಇದರಲ್ಲಿ 9 ಐಎಎಫ್ ಸಿಬ್ಬಂದಿ, 45 ಪುರುಷರು ಮತ್ತು 21 ಮಹಿಳೆಯರು ಸೇರಿದ್ದಾರೆ […]
-
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ಗೆ ಬಿಗ್ ರಿಲೀಫ್ ಕೊಟ್ಟ ಪಾಕ್
ನವದೆಹಲಿ: 2008ರ ಮುಂಬೈ ಸ್ಫೋಟದ ಹೊಣೆ ಹೊತ್ತಿದ್ದ ಉಗ್ರ ಹಫೀಜ್ ಸಯೀದ್ ನನ್ನ ಟೆರರ್ ಫೈನಾನ್ಸಿಂಗ್ ಕೇಸ್ನಲ್ಲಿ ಪಾಕಿಸ್ತಾನ ಕೋರ್ಟ್ ಖುಲಾಸೆಗೊಳಿಸಿದೆ. ಹಫೀಸ್ ಸೇರಿ, ನಿಷೇಧಿತ ಜಮಾತ್-ಉದ್-ದವಹ್ (JuD) ಸಂಘಟನೆಯ ಒಟ್ಟು 6 ಮಂದಿಗೆ ಪಾಕ್ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ವಿಚಾರಣಾ ನ್ಯಾಯಾಲಯವು ನೀಡಿದ್ದ ಶಿಕ್ಷೆಯನ್ನ ರದ್ದು ಮಾಡಿ ಹಫೀಜ್ ಸಯೀದ್ ನಿರಪರಾಧಿ ಎಂದು ಉನ್ನತ ನ್ಯಾಯಾಲಯವು ಆದೇಶ ನೀಡಿದೆ. 2008ರಲ್ಲಿ ಸಯೀದ್ ನೇತೃತ್ವದ ಉಗ್ರ ಸಂಘಟನೆಯು ಮುಂಬೈ ಹೋಟೆಲ್ ಮೇಲೆ ದಾಳಿ ನಡೆಸಿ ಅಮೆರಿಕದ […]
-
ವೆಬ್ ಸೀರಿಸ್ ನಿರ್ಮಾಣ ಮಾಡಲಿದ್ದಾರೆ ವಿಜಯ್ ದೇವರಕೊಂಡ; ಹೊಸ ವಿಚಾರ ಬಿಚ್ಚಿಟ್ಟ ನಟ | Vijay Devarakonda to produce Web Series In Telugu
ವಿಜಯ್ ದೇವರಕೊಂಡ ವಿಜಯ್ ದೇವರಕೊಂಡ ನಟನೆಯ ಜತೆಗೆ ಉದ್ಯಮದತ್ತಲೂ ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ಅವರು ಮಲ್ಟಿಪ್ಲೆಕ್ಸ್ ಒಂದನ್ನು ಆರಂಭಿಸಿದ್ದರು. ಇದರ ಜತೆಗೆ ‘ಕಿಂಗ್ ಆಫ್ ದಿ ಹಿಲ್’ ಬ್ಯಾನರ್ ಆರಂಭಿಸಿ ಸಿನಿಮಾ ನಿರ್ಮಾಣ ಕಾರ್ಯದಲ್ಲೂ ಅವರು ಬ್ಯುಸಿ ಆಗಿದ್ದಾರೆ. ವಿಜಯ್ ಸಹೋದರ ಆನಂದ್ ದೇವರಕೊಂಡ ನಟನೆಯ ‘ಪುಷ್ಪಕ ವಿಮಾನಂ’ ಚಿತ್ರ ನ.12ರಂದು ಬಿಡುಗಡೆ ಆಗುತ್ತಿದೆ. ಆ ಸಿನಿಮಾವನ್ನು ವಿಜಯ್ ದೇವರಕೊಂಡ ಅರ್ಪಿಸುತ್ತಿದ್ದಾರೆ. ಈ ಮೂಲಕ ತಮ್ಮನ ಸಿನಿಮಾಗೆ ಬೆಂಬಲ ನೀಡುತ್ತಿದ್ದಾರೆ. ಈಗ ಅವರು ವೆಬ್ ಸೀರಿಸ್ ನಿರ್ಮಾಣ […]