-
ಅರ್ಧಕ್ಕೆ ಪ್ರಯಾಣ ನಿಲ್ಲಿಸಿದ ‘ನಿನ್ನಿಂದಲೇ’- ಕಾರಣವೇನು?
ಸೀರಿಯಲ್ ಲೋಕದಲ್ಲಿ ಗಟ್ಟಿ ನೆಲೆ ಕಾಣುವುದೂ ಅಷ್ಟು ಸುಲಭವಲ್ಲ. ಪ್ರೇಕ್ಷಕರನ್ನ ಹಿಡಿದಿಡಲು ಪ್ರತಿ ಕ್ಷಣ ಸಾಹಸ ಪಡ್ಬೇಕು. ಒಂಚೂರು ಆ ಕಡೆ ಈ ಕಡೆಯಾದ್ರೂ ಆ ವಾರದ ಟಿಆರ್ಪಿ ಲೆಕ್ಕಾಚಾರದಲ್ಲಿ ಧಾರಾವಾಹಿಗಳು ನೆಲಕಚ್ಚಿ ಬಿಡುತ್ತವೆ. ಈಗ ಅಂತಹದ್ದೇ ಸುಳಿಗೆ ಸಿಕ್ಕಿ ಹಾಕಿಕೊಂಡಿದೆ ನಿನ್ನಿಂದಲೇ ಸೀರಿಯಲ್. ಹೌದು, ಮೊನ್ನೆ ಮೊನ್ನೆಯಷ್ಟೆ ಲಾಂಚ್ ಆಗಿದ್ದ ಧಾರಾವಾಹಿ ಈಗ ವೈಂಡಪ್ ಆಗ್ತಾಯಿದೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನ್ನಿಂದಲೇ ಸೀರಿಯಲ್ ಲೀಡ್ ಪಾತ್ರದಲ್ಲಿ ಈ ಮೊದಲು ಆಕೃತಿ ಎಂಬ ಧಾರಾವಾಹಿ ಮೂಲಕ ಜನಪ್ರಿಯರಾಗಿದ್ದ […]
-
ಕೊಪ್ಪಳ: ಭಾರಿ ಮಳೆಯಿಂದ ತುಂಗಭದ್ರಾ ಡ್ಯಾಂ ಭರ್ತಿ; 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ | Tungabhadra Dam Water released Koppal News Karnataka Rains details here
ತುಂಗಭದ್ರಾ ಡ್ಯಾಂ ಕೊಪ್ಪಳ: ಭಾರಿ ಮಳೆಯಿಂದ ತುಂಗಭದ್ರಾ ಡ್ಯಾಂ ಭರ್ತಿಯಾಗಿದೆ. ಡ್ಯಾಂನಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 28 ಗೇಟ್ಗಳ ಮೂಲಕ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ಕೊಟ್ಟಿದ್ದಾರೆ. ಕರ್ನಾಟಕದ ಹಲವೆಡೆ ಮತ್ತೆ ಮಳೆ ಆರಂಭವಾಗಿದೆ. ಬೆಂಗಳೂರು ಸಮೀಪ ಜಿಟಿಜಿಟಿ ಮಳೆ ಶುರುವಾಗಿದೆ. ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ ಸುತ್ತಮುತ್ತ ಮಳೆ […]
-
ಪ್ರತಿಷ್ಠಿತ ಜಾಹೀರಾತು ಕಂಪನಿಗೆ ನೋಟಿಸ್ ಕೊಟ್ರು ಅಮಿತಾಭ್ ಬಚ್ಚನ್; ಯಾಕೆ ಗೊತ್ತಾ?
ಪ್ರತಿಷ್ಠಿತ ಪಾನ್ ಮಸಾಲಾ ಕಂಪನಿಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನೋಟಿಸ್ ನೀಡಿದ್ದಾರೆ. ಈ ಹಿಂದೆ ಪಾನ್ ಮಸಾಲಾ ಜಾಹೀರಾತೊಂದರಲ್ಲಿ ಅಮಿತಾಭ್ ನಟಿಸಿದ್ರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೆ ಅಮಿತಾಭ್, ಜಾಹೀರಾತು ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿದಿದ್ದಾಗಿ ಘೋಷಿಸಿದ್ರು. ಇದಾದ ಮೇಲೂ ಈ ಬ್ರಾಂಡ್ನಲ್ಲಿ ಅಮಿತಾಭ್ ನಟಿಸಿರುವ ಜಾಹೀರಾತುಗಳನ್ನ ಇನ್ನೂ ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಬಚ್ಚನ್ ಪರ ವಕೀಲರು ಪಾನ್ ಮಸಾಲಾ ಕಂಪನಿಗೆ ನೋಟಿಸ್ ನೀಡಿ, ಕೂಡಲೇ ಟಿವಿಯಲ್ಲಿ ಈ ಜಾಹೀರಾತು […]
-
Rajasthan Cabinet Reshuffle 15 ಸಚಿವರಿಂದ ಪ್ರಮಾಣ ವಚನ ಸ್ವೀಕಾರ; 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದ ಸಿಎಂ ಗೆಹ್ಲೋಟ್ | Rajasthan Cabinet expanded 11 cabinet and four ministers of state were sworn in on Sunday in Rajasthan
ರಾಜಸ್ಥಾನ ಸಚಿವ ಸಂಪುಟ ಪುನಾರಚನೆ ಜೈಪುರ: ಭಾನುವಾರ ಜೈಪುರದ (Jaipur) ರಾಜಭವನದಲ್ಲಿ (Raj Bhawan) ಒಟ್ಟು 15 ಸಚಿವರು ಪ್ರಮಾಣ ವಚನ (sworn in) ಸ್ವೀಕರಿಸಿದರು. ಈ ಪೈಕಿ 12 ಹೊಸ ಮತ್ತು ಮೂವರು ರಾಜ್ಯ ಸಚಿವರು ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆದಿದ್ದಾರೆ. ಸಮಾರಂಭದ ಮೊದಲು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕೆನ್ (Ajay Maken) ಅವರು ಜೈಪುರದ ಪಕ್ಷದ ಕಚೇರಿಯಲ್ಲಿ ಶಾಸಕರು ಮತ್ತು ಇತರ ಪಕ್ಷದ […]
-
ಪೇಜಾವರ ಶ್ರೀಗಳ ಕುರಿತ ಹೇಳಿಕೆ: ಹಂಸಲೇಖ ವಿರುದ್ಧದ ಕೇಸ್ ವಾಪಸ್..ಕಾರಣವೇನು?
ಬೆಂಗಳುರು: ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ದಾಖಲಾಗಿದ್ದ ಕೇಸ್ನ್ನ ದೂರುದಾರ ಕೃಷ್ಣರಾಜ್ ವಾಪಸ್ ಪಡೆದಿದ್ದಾರೆ. ಉಡುಪಿ ಮಠದ ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿ ಭಾಷಣ ಹಿನ್ನೆಲೆ ಕೃಷ್ಣರಾಜ್ ಎಂಬುವವರು ಬಸವನಗುಡಿ ಠಾಣೆಯಲ್ಲಿ ಹಂಸಲೇಖ ಅವರ ವಿರುದ್ಧ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಅನಾರೋಗ್ಯ ಎಂದು ಹೇಳಿ ಹಂಸಲೇಖ ಅವರು ವಿಚಾರಣೆಗೆ ಆಗಮಿಸಲು ಕಾಲಾವಕಾಶ ಕೋರಿದ್ದರು. ಆದರೆ ಇದೀಗ ಕೃಷ್ಣರಾಜ್ ಕೇಸ್ ವಾಪಸ್ ಪಡೆದಿದ್ದು ಬ್ರಾಹ್ಮಣ ಸಂಘದ ದೂರಿಗೆ ನಾನು ಬೆಂಬಲಿಸುವ […]
-
ಚಿಕ್ಕಬಳ್ಳಾಪುರ: ಭಾರೀ ಮಳೆಯಿಂದ ಅವಾಂತರ; ಮನೆ ಕಳೆದುಕೊಂಡವರಿಗೆ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ | Basavaraj Bommai announces relief fund to Chikkaballapur Rain Karnataka Rains
ಬಸವರಾಜ್ ಬೊಮ್ಮಾಯಿ (ಸಂಗ್ರಹ ಚಿತ್ರ) ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದೆ. ರಾಜಕಾಲುವೆ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದ್ದೇವೆ. ಕಂದವಾರ ಕೆರೆಯಿಂದ ಅಮಾನಿಕೆರೆವರೆಗೆ ರಾಜಕಾಲುವೆ ನಿರ್ಮಾಣ ಮಾಡುತ್ತೇವೆ. ನೀರು ನುಗ್ಗಿರುವ ಮನೆಗೆ 10 ಸಾವಿರ ಪರಿಹಾರಕ್ಕೆ ಸೂಚನೆ ಕೊಡಲಾಗಿದೆ. ಮಳೆಯಿಂದ ಮನೆ ಸಂಪೂರ್ಣ ಬಿದಿದ್ರೆ 5 ಲಕ್ಷ ಪರಿಹಾರ ನೀಡಲಾಗುವುದು. ಮಳೆಯಿಂದ ಮನೆ ಭಾಗಶಃ ಬಿದಿದ್ರೆ 3 ಲಕ್ಷ ರೂ. ಪರಿಹಾರ ನೀಡುತ್ತೇವೆ. ಜಿಲ್ಲೆಯಲ್ಲಿ ಒಟ್ಟು 24 ಮನೆಗಳು ಸಂಪೂರ್ಣ ಕುಸಿತವಾಗಿವೆ. ಹಾನಿ ಕುರಿತು ಚಿಕ್ಕಬಳ್ಳಾಪುರ […]
-
ಉತ್ತರಾಖಂಡದಲ್ಲಿ ಬದುಕು ಮತ್ತು ಮರಣಾನಂತರದ ಬದುಕು ಸುಧಾರಿಸುವ ಭರವಸೆ ಘೋಷಿಸಿದ ಕೇಜ್ರಿವಾಲ್ | Vote for us In Uttarakhand , we will improve your life and afterlife says Arvind Kejriwal
ಅರವಿಂದ ಕೇಜ್ರಿವಾಲ್ ದೆಹಲಿ: 2022 ರಲ್ಲಿ ತನ್ನ ಮುಂದಿನ ಸರ್ಕಾರವನ್ನು ಆಯ್ಕೆ ಮಾಡಲು ಸಜ್ಜಾಗುತ್ತಿರುವ ಉತ್ತರಾಖಂಡದಲ್ಲಿ (Uttarakhand) ಅರವಿಂದ ಕೇಜ್ರಿವಾಲ್ (Arvind Kejriwal) ಇಂದು ತಮ್ಮ ದೆಹಲಿಯ ಸಾಧನೆಯನ್ನು ವಿವರಿಸಿದ್ದಾರೆ ಮತ್ತು “ಜೀವನ ಮತ್ತು ಮರಣಾನಂತರದ ಜೀವನಕ್ಕಾಗಿ” ಕೆಲವು ದೊಡ್ಡ ಭರವಸೆಗಳನ್ನು ನೀಡಿದ್ದಾರೆ. “ಹಮೇ ವೋಟ್ ದೋ… ಹಮ್ ಆಪ್ಕಾ ಲೋಕ್ ಭಿ ಸುಧಾರ್ ದೇಂಗೆ ಔರ್ ಪರ್ಲೋಕ್ ಭಿ… (ನಮಗೆ ಮತ ನೀಡಿ, ನಿಮ್ಮ ಜೀವನ ಮತ್ತು ಮರಣಾನಂತರದ ಜೀವನವನ್ನು ನಾವು ಸುಧಾರಿಸುತ್ತೇವೆ)” ಎಂದು 53 […]
-
ವೈರಲ್ ಆಯ್ತು ಯಶ್, ರಾಧಿಕಾ ಪಂಡಿತ್, ಶ್ರೀನಿಧಿ ಶೆಟ್ಟಿ, ಆಶಾ ಭಟ್ ಪಾರ್ಟಿ ಫೋಟೋ
ರಾಖಿ ಭಾಯ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್, ”ಕೆಜಿಎಫ್” ನಾಯಕಿ ಶ್ರೀ ನಿಧಿ ಶೆಟ್ಟಿ ಮತ್ತು ”ರಾಬರ್ಟ್” ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಆಶಾ ಭಟ್ ಎಲ್ಲರೂ ಒಟ್ಟಾಗಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಯಾವುದೋ ಪಾರ್ಟಿಯಲ್ಲಿ ಎಲ್ಲರೂ ಒಟ್ಟಾಗಿ ಸೇರಿರುವ ಹಾಗೆ ಕಾಣಿಸಿಕೊಂಡರೂ ಎಲ್ಲಿ, ಯಾವ ಕಾರಣಕ್ಕೆ ಎಲ್ಲರೂ ಸೇರಿಕೊಂಡಿದ್ದಾರೆ ಎಂದು ತಿಳಿದು ಬಂದಿಲ್ಲ. ಸದ್ಯ ಎಲ್ಲರೂ ಒಟ್ಟಿಗೆ ಇರುವ ಫೊಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗಿದೆ. Frames […]
-
India vs New Zealand: ಟೀಮ್ ಇಂಡಿಯಾ ಆಟಗಾರರ ಮುಂದಿದೆ 5 ದಾಖಲೆಗಳು | IND vs NZ: Team India will keep an eye on these 5 records in Kolkata T20
team india ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ T20 ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ (IND vs NZ Kolkata T20) ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಈಗಾಗಲೇ ಜೈಪುರ ಮತ್ತು ರಾಂಚಿಯಲ್ಲಿ ನಡೆದ ಮೊದಲ ಎರಡು ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಇದೊಂದು ಔಪಚಾರಿಕ ಪಂದ್ಯ. ಇದಾಗ್ಯೂ ಕೊನೆಯ ಟಿ20 ಪಂದ್ಯದಲ್ಲಿ ಭಾರತದ ಆಟಗಾರರು ಹಲವು […]
-
ಕೋಡಿ ಬಿದ್ದ ಕೆರೆಯಲ್ಲಿ ಮೀನು ಹಿಡಿಯಲು ಗದ್ದಲವೋ ಗದ್ದಲ: ನಿಯಂತ್ರಣಕ್ಕಾಗಿ ಬಂದ್ರು ಪೊಲೀಸ್ರು
ಚಿಕ್ಕಬಳ್ಳಾಪುರ: ನಗರದ ಕಂದವಾರ ಕೆರೆಯ ಕೋಡಿ ಬಿದ್ದಿದ್ದು ನೀರಿನ ಜೊತೆ ಬರುತ್ತಿರುವ ಮೀನುಗಳನ್ನು ಹಿಡಿಯಲು ಜನ ಮುಗಿಬಿದ್ದಿದ್ದು ಜನರನ್ನು ನಿಯಂತ್ರಿಸಲು ಪೊಲೀಸರ ನಿಯೋಜನೆ ಮಾಡಲಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಂದವಾರ ಕೆರೆಯ ಸಂಪೂರ್ಣ ತುಂಬಿದ್ದು ಕೋಡಿ ಬಿದ್ದಿದೆ. ಪರಿಣಾಮ ಕಂದವಾರ ಕೆರೆಯ ಹಿನ್ನೀರಿನ ಹರಿವಿನಗುಂಟ ಸಾಕಷ್ಟು ಮೀನುಗಳು ಬರುತ್ತಿವೆ. ಇದನ್ನು ಕಂಡ ಸ್ಥಳಿಯರು ಚಿಕ್ಕ ಮೀನಿನ ಬಲೆಗಳನ್ನು ಹಿಡಿದ್ದು ರಾಶಿ ರಾಶಿ ಮೀನುಗಳನ್ನು ಬಾಚಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ:‘ಪ್ರತಾಪ್ ಸಿಂಹ ಮನೆಗೆ ಹೋಗಿ […]
-
Sean Whitehead: ಅನಿಲ್ ಕುಂಬ್ಳೆ ಬಳಿಕ 10 ವಿಕೆಟ್ ಉರುಳಿಸಿ ವಿಶ್ವ ದಾಖಲೆ ಬರೆದ ಯುವ ಸ್ಪಿನ್ನರ್ | South African spinner Sean Whitehead claims 10 wickets in an innings
Sean Whitehead ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಉರುಳಿಸಿದ್ದು ಇಬ್ಬರೇ ಇಬ್ಬರು. ಅವರಲ್ಲಿ ಮೊದಲಿಗರು ಜಿಮ್ಮಿ ಲೇಕರ್ (Jimmy Laker). 1956 ರಲ್ಲಿ ಇಂಗ್ಲೆಂಡ್ ಬೌಲರ್ ಲೇಕರ್ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ 53 ರನ್ ನೀಡಿ 10 ವಿಕೆಟ್ ಉರುಳಿಸಿ ವಿಶ್ವ ದಾಖಲೆ ಬರೆದಿದ್ದರು. ಆ ಬಳಿಕ ಈ ದಾಖಲೆಯನ್ನು ಸರಿಗಟ್ಟಿದ್ದು ಕನ್ನಡಿಗ ಅನಿಲ್ ಕುಂಬ್ಳೆ (Anil Kumble). ಕುಂಬ್ಳೆ 1999 ರಲ್ಲಿ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ 74 ರನ್ ನೀಡಿ 10 ವಿಕೆಟ್ […]
-
ತುಂಗಭದ್ರಾ ಒಡಲಲ್ಲಿ ಹೆಚ್ಚಿದ ಹರಿವಿನ ಪ್ರಮಾಣ; ಜಾನುವಾರುಗಳ ಜೊತೆ ನಡುಗಡ್ಡೆಯಲ್ಲಿ ಸಿಲುಕಿದ ಮೂವರು
ಬಳ್ಳಾರಿ: ತುಂಗಭದ್ರಾ ನದಿಯಲ್ಲಿ ಏಕಾಏಕಿ ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ಮೂವರು ಕುರಿಗಾಹಿಗಳು ನಡುಗಡ್ಡೆಯಲ್ಲಿ ಸಿಲುಕಿರುವ ಘಟನೆ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ. ತುಂಗಭದ್ರಾ ನದಿಯಲ್ಲಿ ಜಿಲ್ಲೆಯಲ್ಲಿ ಭರ್ಜರಿ ಮಳೆ ಹಿನ್ನೆಲೆ ಹರಿವಿನ ಪ್ರಮಾಣ ದಿಢೀರ್ನೆ ಹೆಚ್ಚಾಗಿದೆ.. ಪರಿಣಾಮ ಕುರಿ ಮೇಯಿಸಲು ತೆರಳಿದ್ದ ಗ್ರಾಮದ ವೀರೇಶಪ್ಪ, ಮಾರಪ್ಪ ಹಾಗೂ ಮೂಕಯ್ಯ ಎಂಬುವವರು ನಡುಗಡ್ಡೆಯಲ್ಲಿ ಸಿಕ್ಕು ಸಂಕಷ್ಟ ಎದುರಿಸುತ್ತಿದ್ದಾರೆ. ನಿನ್ನೆಯಿಂದ ತುಂಗಭದ್ರ ನದಿ ನಡುಗಡ್ಡೆಯಲ್ಲಿ ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ:ಬರುವಾಗ ಬರಲಿಲ್ಲ ಮಳೆರಾಯ.. ಹೋಗುವಾಗ ಮುನಿದ […]
-
ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ; ಮುಂದಿನ ಆದೇಶದವರೆಗೆ ಶಾಲೆಗಳಿಗೆ ರಜೆ ಘೋಷಣೆ | All schools in Delhi to remain shut for physical classes till further orders because of Air Pollution
ದೆಹಲಿ ವಾಯುಮಾಲಿನ್ಯ ಚಿತ್ರ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಆನ್ಲೈನ್ ತರಗತಿ ಮಾತ್ರ ನಡೆಸಲು ಅವಕಾಶ ನೀಡಲಾಗಿದ್ದು, ದೆಹಲಿ ಶಿಕ್ಷಣ ಇಲಾಖೆ ಈ ಕುರಿತು ಅಧಿಕೃತ ಘೋಷಣೆ ಮಾಡಿದೆ. ಮುಂದಿನ ಆದೇಶ ಬರುವವರೆಗೆ ಶಾಲೆಗಳನ್ನು ಮುಚ್ಚಲು ಪರಿಸರ ಇಲಾಖೆ ನಿರ್ದೇಶನ ನೀಡಿದೆ ಎಂದು ಹೆಚ್ಚುವರಿ ಶಿಕ್ಷಣ ನಿರ್ದೇಶಕಿ ರೀಟಾ ಶರ್ಮಾ ತಿಳಿಸಿದ್ದಾರೆ.ಅದಾಗ್ಯೂ, ಆನ್ಲೈನ್ ಬೋಧನಾ ಚಟುವಟಿಕೆಗಳು ಮತ್ತು ಬೋರ್ಡ್ ತರಗತಿಗಳಿಗೆ ಪರೀಕ್ಷೆಗಳನ್ನು ಮೊದಲೇ ನೀಡಲಾದ ಮಾರ್ಗಸೂಚಿಗಳ ಪ್ರಕಾರ ನಡೆಸಲಾಗುವುದು […]
-
ಇಂದು ಸಂಜೆ ತುರ್ತು ಸಭೆ ಕರೆದ ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಧಾರಾಕಾರ ಮಳೆಯಿಂದ ಬೆಳೆಗಳು ಹಾನಿಯಾದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಂಜೆ ತುರ್ತು ಸಭೆ ಕರೆದಿದ್ದಾರೆ. ಇಂದು ಸಂಜೆ 7 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ಕರೆದ ಅವರು ರಾಜ್ಯದಲ್ಲಿ ಮಳೆ ಹಾನಿ, ಬೆಳೆ ಹಾನಿಯ ಬಗ್ಗೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ, ಕಂದಾಯ, ಕೃಷಿ,ಸಣ್ಣ ನೀರಾವರಿ, ವಸತಿ ಸೇರಿದಂತೆ ಅನೇಕ ಇಲಾಖಾ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ಜೊತೆಗೆ ಗೃಹ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ , […]
-
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಮಗೆ 2 ಕಣ್ಣುಗಳಿದ್ದಂತೆ: ಜಿ ಪರಮೇಶ್ವರ್ ಹೇಳಿಕೆ | G Parameshwar on Siddaramaiah DK Shivakumar Karnataka Congress Politics BJP
ಡಾ. ಜಿ. ಪರಮೇಶ್ವರ್ (ಸಂಗ್ರಹ ಚಿತ್ರ) ತುಮಕೂರು: ಕೃಷಿ ಕಾಯ್ದೆ ವಿರೋಧಿಸಿ ಹೋರಾಟದಲ್ಲಿ 700 ರೈತರ ಸಾವು ಸಂಭವಿಸಿದೆ. ಪ್ರಾಣಾರ್ಪಣೆ ಮಾಡಿದ ರೈತರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡ್ತಾರೆ. ಕಾಂಗ್ರೆಸ್ ಅವಧಿಯಲ್ಲಿ ಏನು ಮಾಡಲಿಲ್ಲವೆಂದು ಹೇಳುತ್ತಾರೆ. ಪ್ರಧಾನಿ, ಸಂಪುಟ ಸದಸ್ಯರು ಏನೂ ಮಾಡಿಲ್ಲವೆಂದು ಹೇಳ್ತಾರೆ. ಕಾಂಗ್ರೆಸ್ ಚರಿತ್ರೆ, ಇತಿಹಾಸವನ್ನ ಬಿಜೆಪಿಯವರು ಓದಿಕೊಳ್ಳಲಿ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಎಂದು ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ […]
-
ಕೆಜಿಎಫ್-2 ಎದುರು ಲಾಲ್ ಸಿಂಗ್ ಚಡ್ಡಾ; ಅಮೀರ್ ಖಾನ್ರನ್ನು ಮಕಾಡೆ ಮಲಗಿಸುತ್ತಾರಾ ಯಶ್?
ಅಂತೂ ಇಂತೂ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಬಹು ನೀರೀಕ್ಷಿತ ಚಿತ್ರ ”ಲಾಲ್ ಸಿಂಗ್ ಚಡ್ಡಾ” ಸಿನಿಮಾದ ಬಿಡುಗಡೆಯ ಹೊಸ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. 2022ರ ಏಪ್ರಿಲ್ 14 ಕ್ಕೆ ”ಲಾಲ್ ಸಿಂಗ್ ಚಡ್ಡಾ” ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಅದೇ ದಿನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ”ಕೆಜಿಎಫ್- 2” ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಈಗಾಗಲೇ ಅಧಿಕೃತವಾಗಿ ತಿಳಿಸಿದೆ. ಯಶ್ ಅಭಿನಯದ ”ಕೆಜಿಎಫ್-1′ ಈಗಾಗಲೇ ವಿಶ್ವಾದ್ಯಂತ ಹಿಟ್ ಆಗಿ […]
-
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತ ಹೋರಾಟ ಮುಂದುವರಿಕೆ: ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಮಾಹಿತಿ | SKM protest continues regarding issues of MSP withdrawal of FIR etc says Farmer leader Balbeer Singh here is details
ಸಂಯುಕ್ತ ಕಿಸಾನ್ ಮೋರ್ಚಾದ ಹಿರಿಯ ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ನವದೆಹಲಿ: 40ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾದ ‘ಸಂಯುಕ್ತ ಕಿಸಾನ್ ಮೋರ್ಚಾ’ವು ಕೃಷಿ ಸಂಬಂಧಿತ ವಿಷಯಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಘೋಷಿಸಿದೆ. ಜೊತೆಗೆ ಎಸ್ಕೆಎಂನ ಪೂರ್ವನಿರ್ಧರಿತ ಕಾರ್ಯಕ್ರಮಗಳು ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಎಸ್ಕೆಎಂ ಖಚಿತಪಡಿಸಿದೆ. ಮುಂದಿನ ಕ್ರಮದ ಕುರಿತು ಚರ್ಚಿಸಲು ಸಿಂಘು ಗಡಿಯಲ್ಲಿ ಇಂದು (ಭಾನುವಾರ) ನಡೆದ ಸಭೆಯ ನಂತರ ಕಿಸಾನ್ ಮೋರ್ಚಾ ಪತ್ರಿಕಾಗೋಷ್ಠಿಯನ್ನು ನಡೆಸಿತು. ರೈತ ಮುಖಂಡ ಬಲ್ಬೀರ್ […]
-
ಸಮಯವೇ ಉತ್ತರಿಸುತ್ತದೆ: ಉತ್ತರಪ್ರದೇಶ ಚುನಾವಣೆ ಮುಂಚಿತವಾಗಿ ಮೈತ್ರಿ ಬಗ್ಗೆ ಒವೈಸಿ ಪ್ರತಿಕ್ರಿಯೆ | Time will tell if we form an alliance or not AIMIM chief Asaduddin Owaisi ahead of UP polls
ಅಸಾದುದ್ದೀನ್ ಓವೈಸಿ ದೆಹಲಿ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh assembly polls) ಮೈತ್ರಿ ಮಾಡಿಕೊಳ್ಳಲು ಒಂದು ಅಥವಾ ಎರಡು ಪಕ್ಷಗಳೊಂದಿಗೆ ತಮ್ಮ ಪಕ್ಷವು ಮಾತುಕತೆ ನಡೆಸುತ್ತಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಭಾನುವಾರ ಹೇಳಿದ್ದಾರೆ. ಯೋಗಿ ಆದಿತ್ಯನಾಥ ನೇತೃತ್ವದ ಭಾರತೀಯ ಜನತಾ ಪಕ್ಷವು 2017 ರಿಂದ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವಿನ ಬಗ್ಗೆ […]
-
ಕ್ರಿಕೆಟ್ಗೆ ABD ವಿದಾಯ, ನಾಯಕತ್ವ ತೊರೆದ ವಿರಾಟ್; ಇವರೇ ನೋಡಿ RCB ಮುಂದಿನ ಕ್ಯಾಪ್ಟನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಸ್ಥಾನದಿಂದ ಕೆಳಗೆ ಇಳಿಯೋದಾಗಿ ನಿರ್ಗಮಿತ ಕ್ಯಾಪ್ಟನ್ ವಿರಾಟ್ ಕೊಹ್ಲಿ ಈಗಾಗಲೇ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಮುಂದಿನ ಆರ್ಸಿಬಿ ಕ್ಯಾಪ್ಟನ್ ಎಬಿ ಡಿವಿಲಿಯರ್ಸ್ ಆಗಲಿದ್ದಾರೆ? ಎಂಬ ಸುದ್ದಿ ಹರಿದಾಡುತ್ತಿತ್ತು. ಈಗ ಎಬಿಡಿ ತನ್ನ ಎಲ್ಲಾ ಮಾದರಿಯ ಕ್ರಿಕೆಟ್ಗೂ ವಿದಾಯ ಹೇಳಿದ್ದು, ಮುಂದಿನ ಸೀಸನ್ಗೆ ಲಭ್ಯರಿಲ್ಲ ಎಂಬುದು ಖಾತ್ರಿಯಾಗಿದೆ. ಹಾಗಾಗಿ ಆರ್ಸಿಬಿ ಮುಂದಿನ ಕ್ಯಾಪ್ಟನ್ ಯಾರು ಚರ್ಚೆ ನಡೆಯುತ್ತಿರುವಾಗಲೇ ಈ ಸ್ಥಾನಕ್ಕೆ ಈಗ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಹೆಸರು ಕೇಳಿ ಬಂದಿದೆ. ಹೌದು, […]
-
ಇಂತಹ ಅಭಿಮಾನಿಗಳನ್ನು ಯಾವತ್ತೂ ನಾನು ಕಂಡಿರಲಿಲ್ಲ; ರಾಘವೇಂದ್ರ ರಾಜ್ಕುಮಾರ್ | Raghavendra Rajkumar Talks Puneeth Rajkumar In Bangalore
ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿ ಒಂದು ತಿಂಗಳು ಆಗುತ್ತಾ ಬಂದಿದೆ. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಸಮಾಧಿಗೆ ನಿತ್ಯ ಸಾವಿರಾರು ಜನರು ಈಗಲೂ ಭೇಟಿ ನೀಡುತ್ತಲೇ ಇದ್ದಾರೆ. ಇಷ್ಟೊಂದು ಅಭಿಮಾನಿಗಳನ್ನು ಎಲ್ಲಿಯೂ ಕಂಡಿರಲಿಲ್ಲ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ‘ಪುನೀತ್ ಎಲ್ಲ ಕ್ಷೇತ್ರಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಅಭಿಮಾನಿಗಳನ್ನು ಯಾವತ್ತೂ ನಾನು ಕಂಡಿರಲಿಲ್ಲ. ಪುನೀತ್ರಾಜ್ಕುಮಾರ್ಗೆ ಅಣ್ಣನಾಗಿರುವುದು ನನ್ನ ಭಾಗ್ಯ. ಅವನು ನನ್ನ ತಮ್ಮನಲ್ಲ ನನ್ನ ಅಪ್ಪನೇನೋ ಎಂದು […]
-
‘ಪ್ರತಾಪ್ ಸಿಂಹ ಮನೆಗೆ ಹೋಗಿ ಚಡ್ಡಿ ಬಿಚ್ಚಿ ಹೊಡೆಯುತ್ತೇವೆ’ ಮಹಾಂತ ಶಿವಾಚಾರ್ಯ ಸ್ವಾಮಿ ‘ಆಶೀರ್ವಚನ’
ಕಾವಿ ಅಂದರೇನು? ಕಾವಿ ತೊಟ್ಟವರು ನಿಯಮ ಏನಿರುತ್ತೆ? ಕಾವಿ ತೊಟ್ಟ ಮೇಲೆ ಅವರ ನುಡಿ-ನಡೆ ಹೇಗಿರಬೇಕು? ಕಾವಿಗೆ ಇರೋ ಮಹತ್ವ ಎಂಥದ್ದು? ಯಾವುದೇ ಪೂರ್ವ ತಯಾರಿ ಇಲ್ಲದೇ.. ಆಧ್ಯಾತ್ಮಿಕ ಚಿಂತನೆ ಜಾಗದಲ್ಲಿ ರಾಜಕೀಯ ಬಂದು ಕುಳಿತಾಗ ಬರೋ ನುಡಿಗಳು ಎಂಥವು ಇರಬಹುದು? ಈ ಪ್ರಶ್ನೆಗಳನ್ನು ಯಾರಿಗೆ ಕೇಳಬೇಕು? ಅದಿರಲಿ ಈ ಸುದ್ದಿ ಓದಿ.. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಸಂಸದ ಪ್ರತಾಪ್ ಸಿಂಹ ನಾಲಿಗೆ ಹರಿಬಿಟ್ಟ ವಿಚಾರಕ್ಕೆ ಸಂಬಧಿಸಿ ‘ಪ್ರತಾಪ್ ಸಿಂಹ ಅವರು ಕ್ಷಮೆ […]
-
ಕಾಂಗ್ರೆಸ್ ಬರ್ಬಾದ್ ಯಾತ್ರೆ; ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ತಿರುಗೇಟು | KS Eshwarappa reacted to siddaramaiah tweet in mandya janaswaraj samavesha
ಸಚಿವ ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ) ಮಂಡ್ಯ: ಜನಸ್ವರಾಜ್ ಅಲ್ಲ ಜನ ಬರ್ಬಾದ್ ಯಾತ್ರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಬರ್ಬಾದ್ ಆಗುತ್ತಾ? ಜನ ಬರ್ಬಾದ್ ಆಗುತ್ತಾ? ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರ ಕಿತ್ತಾಕಿದ್ದೇವೆ. ಕಾಂಗ್ರೆಸ್ ಬರ್ಬಾದ್ ಆಗಿದೆ, ಎಲ್ಲ ಕಡೆ ಕಾಂಗ್ರೆಸ್ ಸೋಲ್ತಿದೆ. ಕಾಂಗ್ರೆಸ್ ಬರ್ಬಾದ್ ಯಾತ್ರೆ ಅಂತ ಮಂಡ್ಯದ ಜನಸ್ವರಾಜ್ ಸಮಾವೇಶದಲ್ಲಿ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸುಳ್ಳು ಹೇಳಲು ನೊಬೆಲ್ ಪ್ರಶಸ್ತಿ ಇಟ್ರೆ ಸಿದ್ದರಾಮಯ್ಯ […]
-
‘ಬ್ಲೂ ಫಿಲಂನಲ್ಲಿ ನಟಿಸಿದ ರೋಜಾ’ ಎಂದು ನನಗೆ ಅವಮಾನಿಸಿದ್ದು ನೆನಪಿಲ್ವೇ?- ನಾಯ್ಡುಗೆ ನಟಿ ಪ್ರಶ್ನೆ
ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ತಮಗೆ ವೈಎಸ್ಆರ್ ಕಾಂಗ್ರೆಸ್ನವರು ತೀವ್ರ ಅವಮಾನ ಮಾಡಿದ್ದಾರೆ. ಪುನಃ ನಾನು ಅಧಿಕಾರ ಹಿಡಿದೇ ವಿಧಾನಸೌಧ ಪ್ರವೇಶ ಮಾಡುತ್ತೇನೆ ಅಂತ ಕಣ್ಣೀರು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕಿ ರೋಜಾ, ಚಂದ್ರಬಾಬು ನಾಯ್ಡು ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಬು ಇಂದು ನಿನಗೆ ಯಾವ ಪರಿಸ್ಥಿತಿ ಬಂದಿದೆಯೋ ಅದು ನಿನ್ನ ಕರ್ಮದ ಫಲ. ಅದನ್ನು ನೀನು ಅನುಭವಿಸಲೇಬೇಕು ಎಂದರು. ಇಂದು ಯಾರೋ […]
-
ತಿರುಮಲ ಪ್ರವಾಹದ ಹೆಸರಿನಲ್ಲಿ ಫೇಕ್ ವಿಡಿಯೋಗಳೂ ವೈರಲ್ ಆಗ್ತಿವೆ: ಟಿಟಿಡಿ ಇಒ ಹೇಳಿಕೆ | Some Fake Videos of Tirumala floods goes Viral On Social Media says TTD EO
ಟಿಟಿಡಿ ಇಒ ಆಂಧ್ರಪ್ರದೇಶದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು ಇದುವರೆಗೆ ಸುಮಾರು 29 ಜನರ ಜೀವ ಹೋಗಿದೆ. ಅದರಲ್ಲೂ ತಿರುಪತಿ ತಿರುಮಲ ದೇಗುಲದ ಸುತ್ತಲೂ ಜಲಾವೃತವಾಗಿತ್ತು. ಈ ಸಂಬಂಧ ಸೋಷಿಯಲ್ ಮೀಡಿಯಾಗಳಲ್ಲಿ ಹಲವು ವಿಡಿಯೋಗಳೂ ವೈರಲ್ ಆಗುತ್ತಿವೆ. ರಸ್ತೆಗಳಲ್ಲೆಲ್ಲ ನೀರು ತುಂಬಿರುವ, ಸಣ್ಣಸಣ್ಣ ಜಲಪಾತಗಳೇ ಸೃಷ್ಟಿಯಾಗಿರುವ ಹಲವು ವಿಡಿಯೋಗಳು ಹರಿದಾಡುತ್ತಿವೆ. ಆದರೆ ತಿರುಪತಿಯದ್ದು ಎಂದು ಕ್ಯಾಪ್ಷನ್ ಕೊಟ್ಟ ವಿಡಿಯೋಗಳೆಲ್ಲ ಅಲ್ಲಿಯದಲ್ಲ. ತಿರುಪತಿಯಲ್ಲುಂಟಾದ ಪ್ರವಾಹಕ್ಕೆ ಸಂಬಂಧಪಟ್ಟಂತೆ ಒಂದಷ್ಟು ಫೇಕ್ ವಿಡಿಯೋಗಳು ಹರಿದಾಡುತ್ತಿದ್ದು, ಅದನ್ನು ನಂಬಬೇಡಿ ಎಂದು ತಿರುಮಲ ತಿರುಪತಿ ದೇವಸ್ಥಾನಂ […]
-
ಪಾಕ್ ಪ್ರಧಾನಿಯನ್ನು ಹಿರಿಯ ಅಣ್ಣ ಎಂದ ನವಜೋತ್ ಸಿಂಗ್ ಸಿಧು ವಿರುದ್ಧ ಬಿಜೆಪಿ, ಅಕಾಲಿದಳ ವಾಗ್ದಾಳಿ | Navjot Singh Sidhu Calls Pak PM Imran Khan as his bada bhai BJP slams
ನವಜೋತ್ ಸಿಂಗ್ ಸಿಧು ಚಂಡೀಗಢ: ನವಜೋತ್ ಸಿಂಗ್ ಸಿಧು(Navjot Singh Sidhu ) ಮತ್ತೆ ಕಾಂಗ್ರೆಸ್ನ್ನು ಸಮಸ್ಯೆಗೆ ಸಿಲುಕಿಸಿದ್ದಾರೆ. ಪಂಜಾಬ್ನ ಅಮೃತಸರ (ಪೂರ್ವ) ಕ್ಷೇತ್ರದ ಶಾಸಕರಾದ ಸಿಧು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಅವರ “ಬಡಾ ಭಾಯ್” ಅಥವಾ ಹಿರಿಯ ಸಹೋದರ ಎಂದು ಕರೆದಿದ್ದು, ಇದಕ್ಕೆ ಬಿಜೆಪಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ನ ರಾಜ್ಯ ಮುಖ್ಯಸ್ಥರಾದ ಸಿಧು ಮುಂದಿನ ವರ್ಷದ ಚುನಾವಣೆಗೆ ಮುಂಚಿತವಾಗಿ ಪಾಕಿಸ್ತಾನದ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ (ಕರ್ತಾರ್ಪುರ ಕಾರಿಡಾರ್ ಮೂಲಕ) ಭೇಟಿ […]
-
ಪರಿಷತ್ ಚುನಾವಣೆ; ಬಿಜೆಪಿಯನ್ನು ಬೆಂಬಲಿಸುವಂತೆ ಹೆಚ್ಡಿಕೆಗೆ ಬಿಎಸ್ವೈ ಮನವಿ
ಚಿಕ್ಕೋಡಿ: ವಿಧಾನ ಪರಿಷತ್ ಚುನಾವಣೆ ಕಾರಣ ಇಂದು ಚಿಕ್ಕೋಡಿ ಪಟ್ಟಣದ RD ಕಾಲೇಜ್ ಮೈದಾನದಲ್ಲಿ ಹಮ್ಮಿಕೊಂಡಿರುವ ಬಿಜೆಪಿ ಜನ ಸ್ವರಾಜ್ ಯಾತ್ರೆಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದರು. ಚಾಲನೆ ಬಳಿಕ ಮಾತಾಡಿದ ಬಿಎಸ್ವೈ, ವಿಧಾನ ಪರಿಷತ್ 25 ಕ್ಷೇತ್ರಗಳ ಪೈಕಿ 20 ರಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದ್ದೇವೆ. ಅಭ್ಯರ್ಥಿಗಳ ಘೋಷಣೆ ಮಾಡುವ ಮುನ್ನವೇ ರಾಜ್ಯದಲ್ಲಿ ಪ್ರಚಾರ ಮಾಡಿದ್ದೇವೆ ಎಂದರು. ಇನ್ನು ಕೇಂದ್ರದ ಸಚಿವರು ಮುಖಂಡರು ಪ್ರಚಾರ ಮಾಡಲಿದ್ದಾರೆ. ನಾವು 20 ಅಭ್ಯರ್ಥಿಗಳ ಪಟ್ಟಿ ರಿಲೀಸ್ […]
-
ಅನುಷ್ಕಾ ರಂಜನ್ ಮದುವೆಯಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು | Anushka ranjan wedding Photos Alia Bhatt And other attend Program
1/5 ನಟಿ ಹಾಗೂ ಮಾಡೆಲ್ ಅನುಷ್ಕಾ ರಂಜನ್ ಹಾಗೂ ಆದಿತ್ಯ ಸೀಲ್ ಇಂದು (ನವೆಂಬರ್ 21) ಮದುವೆ ಆಗಿದ್ದಾರೆ. ವಿವಾಹದ ಹಿಂದಿನ ದಿನ (ನವೆಂಬರ್ 20) ಸಂಗೀತ ಕಾರ್ಯಕ್ರಮ ನಡೆದಿದೆ. (ಚಿತ್ರದಲ್ಲಿ ಆಲಿಯಾ ಭಟ್)) 2/5 ಈ ವೇಳೆ ಆಲಿಯಾ ಭಟ್ ಕೂಡ ಹಾಜರಿದ್ದರು. ಅವರು ಮದುವೆ ಕಾರ್ಯಕ್ರಮದಲ್ಲಿ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. (ಚಿತ್ರದಲ್ಲಿ ಆಲಿಯಾ ಹಾಗೂ ಆಕಾಂಶಾ ರಂಜನ್)) 3/5 ಸಂಗೀತ್ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ರವೀನಾ ಟಂಡನ್ ಕೂಡ ಭಾಗಿಯಾಗಿದ್ದರು. 4/5 […]
-
ಮೊಬೈಲ್ನಲ್ಲಿ ಮುಳಗದಿರಿ; ಹಳಿ ಮೇಲೆ ಗೇಮ್ ಆಡುತ್ತಾ ಕುಳಿತ ಬಾಲಕರ ಮೇಲೆ ಹರಿದ ರೈಲು
ಭಾರತದಲ್ಲಿ ನಿಷೇಧಿತ ಪಬ್-ಜಿ ಗೇಮ್ ಮಾಡುತ್ತಿರುವ ಅವಾಂತರಗಳು ಒಂದೆರಡಲ್ಲ. ಈ ಗೇಮ್ನ ಚಟಕ್ಕೆ ಬಿದ್ದರುವ ಹಲವಾರು ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಳಿಯ ಮೇಲೆ ಪಬ್ಜಿ ಗೇಮ್ನಲ್ಲಿ ತಲ್ಲೀನರಾಗಿದ್ದ ಇಬ್ಬರು ಬಾಲಕರ ಮೇಲೆ ರೈಲು ಹರಿದು ಇಬ್ಬರು ಸಾವನ್ನಪ್ಪಿದ ದುರ್ಟಘನೆ ಮಥುರಾ-ಕಸ್ಗಂಜ್ನ ರೈಲು ಹಳಿಯ ಮೇಲೆ ಸಂಭವಿಸಿದೆ.. ಬಾಲಕರು ಪಬ್ಜಿ ಗೇಮ್ ಆಡುತ್ತಾ ರೈಲು ಹಳಿಯ ಮೇಲೆ ಕುಳಿತಿದ್ದಾರೆ. ಈ ವೇಳೆ ಆಗಮಿಸಿದ ಗೂಡ್ಸ್ ಟ್ರೈನ್ ಇಬ್ಬರ ಮೇಲೆ ಹರಿದಿದ್ದು ಬಾಲಕರು ಸಾವನ್ನಪ್ಪಿದ್ದಾರೆ. ಇನ್ನು ಯುವಕರ ಮೋಬೈಲ್ಗಳನ್ನು […]
-
Motorola G200: ವಿದೇಶದಲ್ಲಿ ಮೋಟೋ G ಸಿರೀಸ್ ಭರ್ಜರಿ ಸೇಲ್: ಕೆಲವೇ ದಿನಗಳಲ್ಲಿ ಭಾರತಕ್ಕೂ ಲಗ್ಗೆ | Motorolas new devices Moto G200 G71 G51 G41 G31 to launch in India soon
Motorola G Series Moto G200 ಮೋಟೋರೊಲಾ (Motorola) ಕಂಪನಿ ಎರಡು ದಿನಗಳ ಹಿಂದೆಯಷ್ಟೇ ತನ್ನ ಜಿ ಸರಣಿಯ (Moto G Series) ಐದು ಹೊಸ ಸ್ಮಾರ್ಟ್ಫೋನ್ಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದ್ದವು. ಇದರಲ್ಲಿ ಮೋಟೋ G200, ಮೋಟೋ G71, ಮೋಟೋ G51, ಮೋಟೋ G41 ಮತ್ತು ಮೋಟೋ G31 (Motorola G200, G71, G51, G41, G31) ಸೇರಿವೆ. ಇದೀಗ ತನ್ನ ಜಿ ಸರಣಿಯ ಸ್ಮಾರ್ಟ್ಫೋನ್ಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೂ ಲಗ್ಗೆಯಿಡಲಿದೆ. ವಿದೇಶದಲ್ಲಿ ಈ ಸ್ಮಾರ್ಟ್ಫೋನ್ಗಳಿಗೆ […]
-
‘ನನ್ನ ತಮ್ಮ ಮೃತ್ಯುಂಜಯ, ಮೃತ್ಯು ಬಳಿಕ ಅಪ್ಪು ಜಯವನ್ನು ನೋಡುತ್ತಿದ್ದೇನೆ’- ರಾಘಣ್ಣ
ಬೆಂಗಳೂರು: ಅಪ್ಪುನನ್ನು ಮೃತ್ಯುಂಜಯ ಅಂತಾ ಕರೆಯಬೇಕು. ಏಕೆಂದರೆ ಪ್ರತಿದಿನ ಒಬ್ಬೊಬ್ಬರು ಒಂದು ರೀತಿ ಗೌರವ ಸಲ್ಲಿಸುತ್ತಿದ್ದಾರೆ. ಇಂದು ಪೊಲೀಸ್ ಅವರು ಎಲ್ಲಾ ಸೇರಿ ಸೈಕಲ್ ಜಾಥಾ ನಡೆಸಿ ಗೌರವ ಸೂಚಿಸಿದ್ದಾರೆ. ಇಂತಹ ಅಭಿಮಾನಿಗಳನ್ನ ಯಾವತ್ತೂ ನಾನು ಕಂಡಿರಲಿಲ್ಲ ಎಂದು ನಟ ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ. ಇಂದು ಬೆಳಗ್ಗೆ ಕೆಎಸ್ಆರ್ಪಿ ಹಾಗೂ ಬೆಂಗಳೂರು ಸಂಚಾರಿ ಪೊಲೀಸರು ಅಪ್ಪು ನೆನಪಿನಲ್ಲಿ ಆಯೋಜಿಸಿದ್ದ ಸೈಕಲ್ ಜಾಥಾಗೆ ಶಿವರಾಜ್ಕುಮಾರ್ ಚಾಲನೆ ನೀಡಿದ್ದರು. ಜಾಥಾ ಕಂಠೀರವ ಸ್ಟುಡಿಯೋ ಬಳಿಕ ಆಗಮಿಸಿದ ವೇಳೆ ಪುನೀತ್ ರಾಜ್ […]
-
‘ನಾಗಿಣಿ’ ಸೀರಿಯಲ್ ನಟಿಯರಿಗೆ ರಣವೀರ್ ಸಿಂಗ್ ಪೈಪೋಟಿ; ಸ್ನೇಕ್ ಡ್ಯಾನ್ಸ್ ಕಂಡು ನಿರ್ಮಾಪಕಿ ಫಿದಾ | Ranveer Singh snake dance in front of Mouni Roy and Ekta Kapoor
ಮೌನಿ ರಾಯ್, ರಣವೀರ್ ಸಿಂಗ್ ನಟ ರಣವೀರ್ ಸಿಂಗ್ (Ranveer Singh) ಅವರ ಪ್ರತಿಭೆ ಎಂಥದ್ದು ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಎಂಥ ಪಾತ್ರ ಕೊಟ್ಟರೂ ಅವರು ಅದಕ್ಕೆ ಜೀವ ತುಂಬುತ್ತಾರೆ. ಬಾಜಿರಾವ್, ಅಲ್ಲಾವುದ್ದೀನ್ ಖಿಲ್ಜಿ ಮುಂತಾದ ಪಾತ್ರಗಳ ಮೂಲಕ ಅವರು ಮಾಡಿದ ಮೋಡಿ ಅಷ್ಟಿಷ್ಟಲ್ಲ. ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಅವರು ನಟಿಸಿದ ಬಹುನಿರೀಕ್ಷಿತ ‘83’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಜಯೇಶ್ ಭಾಯ್ ಜೋರ್ದಾರ್’, ‘ಸರ್ಕಸ್’, ‘ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸೇರಿದಂತೆ […]
-
ಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೆ ಮುಂದಾದ ಹೆಂಡತಿ; ಮುಂದೇನಾಯ್ತು?
ಆತ ಸ್ವಂತ ತಂಗಿಯ ಗಂಡ. ಆದರೂ, ತಂಗಿಯ ಗಂಡನ ಮೋಹಕ್ಕೆ ಒಳಗಾಗಿದ್ದಳು ಈಕೆ. ತಂಗಿಯ ಗಂಡನ ಮೋಹಕ್ಕೆ ಒಳಗಾಗಿ ತನ್ನ ಪತಿಗೆ ಮುಹೂರ್ತ ಫಿಕ್ಸ್ ಮಾಡಿದ್ದಳು. ಈಗ ಈಕೆ ಪ್ಲಾನ್ ಪ್ಲಾಪ್ ಆಗಿ ತನ್ನ ಪ್ರಿಯಕರನೊಂದಿಗೆ ಜೈಲು ಸೇರಿದ ಕಥೆ ಇಲ್ಲಿದೆ. ಗಂಡನಿಗೆ ಸ್ವಂತ ಹೆಂಡ್ತಿ, ದೇವರ ಪ್ರಸಾದ ನೀಡಿದ್ಳು. ಪ್ರಸಾದದಲ್ಲಿ ಪ್ರಿಯತಮ ನೀಡಿದ ನಿದ್ದೆ ಮಾತ್ರೆ ಬೆರೆಸಿದ್ಳು. ಅವರ ಪ್ಲಾನ್ ಹಾಕಿದಂತೆ ಎಲ್ಲಾ ಆಗಿದ್ರೆ ಗಂಡ ದೇವರ ಪಾದ ಸೇರಬೇಕಿತ್ತು. ಆದ್ರೆ ಅದೇ ದೇವರ ಕೃಪೆನೋ, […]
-
ಸಂಗೀತ್ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಆಲಿಯಾ ಭಟ್; ಲೀಕ್ ಆಯ್ತು ವಿಡಿಯೋ | Alia Bhatt Dance In Anushka Aditya sangeet program
ಆಲಿಯಾ ಭಟ್ ನಟಿ ಆಲಿಯಾ ಭಟ್ ನಟನೆ ಮಾತ್ರವಲ್ಲದೆ ಡ್ಯಾನ್ಸ್ನಲ್ಲೂ ಎತ್ತಿದ ಕೈ. ಅವರ ಮೊದಲ ಸಿನಿಮಾ ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು. ಆ ನಂತರ ಸಾಕಷ್ಟು ಸಿನಿಮಾಗಳಲ್ಲಿ ಆಲಿಯಾ ಸ್ಟೆಪ್ ಹಾಕಿದ್ದಾರೆ. ಇದರ ಜತೆಗೆ ಸಾಕಷ್ಟು ಮದುವೆ ಸಮಾರಂಭದಲ್ಲೂ ಆಲಿಯಾ ಹೆಜ್ಜೆ ಹಾಕಿದ ಉದಾಹರಣೆ ಇದೆ. ಈಗ ಅವರು ಮದುವೆ ಸಮಾರಂಭದ ಸಂಗೀತ್ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಡ್ಯಾನ್ಸ್ ಮಾಡುತ್ತಲೇ ಸನ್ಗ್ಲಾಸ್ ತೆಗೆದು ಎಸೆದಿದ್ದಾರೆ. ಈ ವಿಡಿಯೋ […]
-
ಮೋದಿ ಜೀ-ಯೋಗಿ ಜೀ: ಅಪರೂಪದ ಫೋಟೋ ಶೇರ್ ಮಾಡಿಕೊಂಡು ಸಣ್ಣ ಕವನವನ್ನೇ ಬರೆದ ಉತ್ತರಪ್ರದೇಶ ಸಿಎಂ | Uttar Pradesh CM Yogi Adityanath Share pic with PM Modi in Twitter
ಯೋಗಿ ಆದಿತ್ಯನಾಥ್ ಶೇರ್ ಮಾಡಿರುವ ಫೋಟೋ ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಸದ್ಯ ಲಖನೌದಲ್ಲಿದ್ದಾರೆ. 56ನೇ ಡಿಜಿಪಿ-ಐಜಿಪಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ನವೆಂಬರ್ 19ರಂದು ತೆರಳಿರುವ ಪ್ರಧಾನಿ ಮೋದಿ ಇಂದು ದೆಹಲಿಗೆ ವಾಪಸ್ ಬರಲಿದ್ದಾರೆ. ಈ ಮಧ್ಯೆ ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಾವು ಪ್ರಧಾನಿ ಮೋದಿಯವರೊಂದಿಗೆ ಇರುವ ಎರಡು ಫೋಟೋಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಎರಡೂ ಕ್ಯಾಂಡಿಡ್ ಫೋಟೋಗಳಾಗಿದ್ದು, ಯೋಗಿ ಜೀ ಶೇರ್ ಮಾಡಿದ ಕೆಲವೇ ಕ್ಷಣದಲ್ಲಿ […]
-
ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ಬೈಕ್ ವೀಲ್ಹಿಂಗ್: ಪೋಲಿ ಬಾಯ್ಸ್ ಪುಂಡಾಟಕ್ಕೆ ಹೈರಾಣಾದ ಸವಾರರು
ರಾಮನಗರ: ಪುಂಡ ಯುವಕರ ವೀಲ್ಹಿಂಗ್ ಕ್ರೇಜ್ಗೆ ಪ್ರತಿನಿತ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ. ರಾಮನಗರದ ಬೆಂಗಳೂರು -ಮೈಸೂರು ರಸ್ತೆಯಲ್ಲಿ ಯುವಕರ ಗುಂಪು ಮೋಜು ಮಸ್ತಿಗಾಗಿ ಡೇಂಜರಸ್ ವೀಲ್ಹಿಂಗ್ ಮಾಡುತ್ತಿದ್ದಾರೆ. ಬಿಡದಿಯಿಂದ ರಾಮನಗರವರೆಗೂ ವೀಲ್ಹಿಂಗ್ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಪುಂಡರು 10ಕ್ಕೂ ಹೆಚ್ಚು ಬೈಕ್ಗಳಲ್ಲಿ ಮನ ಬಂದಂತೆ ರೈಡ್ ಮಾಡುತ್ತಿದ್ದಾರೆ. ಬೆಂಗಳೂರು -ಮೈಸೂರು ರಸ್ತೆಯಿಂದ ಹಿಡಿದು ಸುಮಾರು 15 ಕಿ.ಮೀ ವರಗೂ ಪೋಲಿ ಯುವಕರು ಪುಂಡಾಟಿಕೆ ಮೆರೆದಿದ್ದಾರೆ. ಇದರಿಂದ ಯುವಕರ ಮೋಜು ಮಸ್ತಿಗೆ ಹೆದ್ದಾರಿಯಲ್ಲಿ […]
-
ನೂತನವಾಗಿ ಆಯ್ಕೆ ಆಗುವ ಶಾಸಕರಿಗೆ ತರಬೇತಿ; ಸರ್ವಪಕ್ಷಗಳ ಜೊತೆಗೆ ಸಮಾಲೋಚಿಸಿ ನಿರ್ಣಯ: ವಿಶ್ವೇಶ್ವರ ಹೆಗಡೆ ಕಾಗೇರಿ | Vishweshwar Hegde Kageri on Training for new MLAs Assembly Session etc
ವಿಶ್ವೇಶ್ವರ ಹೆಗಡೆ ಕಾಗೇರಿ (ಸಂಗ್ರಹ ಚಿತ್ರ) ಬೆಂಗಳೂರು: ನೂತನವಾಗಿ ಆಯ್ಕೆಯಾಗುವ ಶಾಸಕರಿಗೆ ತರಬೇತಿ ನೀಡಬೇಕಿದೆ. ಉತ್ತಮ ವಿಧಾನಸಭೆ, ಪರಿಷತ್ ಪ್ರಶಸ್ತಿ ನೀಡಲು ಸಮಿತಿ ರಚನೆಗೆ ನಿರ್ಣಯ ಕೈಗೊಳ್ಳಲಾಗಿದೆ. ರಾಷ್ಟ್ರಪತಿ, ರಾಜ್ಯಪಾಲರ ಭಾಷಣ, ಪ್ರಶ್ನೋತ್ತರ ವೇಳೆ ಸದನದಲ್ಲಿ ಗದ್ದಲ ಆಗದಂತೆ ನೋಡಿಕೊಳ್ಳಲು ಸಮಾಲೋಚನೆ ಮಾಡಬೇಕಿದೆ. ಸರ್ವಪಕ್ಷಗಳ ಜೊತೆಗೆ ಸಮಾಲೋಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು (ನವೆಂಬರ್ 21) ಹೇಳಿಕೆ ನೀಡಿದ್ದಾರೆ. ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಸ್ಪೀಕರ್ಗಳ ಸಮ್ಮೇಳನ ನಡೆದಿದೆ. 27 ರಾಜ್ಯಗಳ ಸ್ಪೀಕರ್ಗಳು, […]
-
ಟ್ರಕ್ನಿಂದ ರಸ್ತೆಗೆ ಬಿದ್ದ ಹಣ.. ಬಾಚಿ ಬ್ಯಾಗ್ಗೆ ತುಂಬಿದ್ದವರಿಗೆ ಬಿಗ್ಶಾಕ್..!
ಹಣ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹಣ ಅಂದ್ರೆ ಹೆಣವು ಬಾಯಿ ಬಿಡೋ ಕಾಲವಿದು. ಅಂತ್ರದಲ್ಲಿ ರಾಶಿ ರಾಶಿ ಹಣ ಯಾವುದೇ ಶ್ರಮವಿಲ್ಲದೆ ಕ್ಷಣಾರ್ಧದಲ್ಲಿ ಸಿಗುತ್ತೆ ಅಂದ್ರೆ ಮಲಗಿದ್ದವರ ಕಿವಿಯು ನಿಮಿರುತ್ತದೆ. ಹೌದು ಇಂತಹದ್ದೊಂದು ಅಪರೂಪದ ಘಟನೆ ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಫೆಡರಲ್ ಡಿಪಾಸಿಟ್ ಕಾರ್ಪ್ ಇನ್ಸೂರೆನ್ಸ್ ಕಂಪನಿ ಬ್ಯಾಂಕಿಗೆ ಹಣ ಹೊತ್ತು ಹೆದ್ದಾರಿಯಲ್ಲಿ ಸಾಗುತ್ತಿತ್ತು. ಈ ವೇಳೆ ಟ್ರಕ್ನ ಬಾಗಿಲು ಏಕಾಏಕಿ ತೆಗೆದುಕೊಂಡ ಪರಿಣಾಮ ರಾಶಿ ರಾಶಿ ಹಣ ರಸ್ತೆಗೆ ಬಿದ್ದಿದೆ. ಟ್ರಕ್ನಿಂದ […]
-
ಕ್ರಿಸ್ಮಸ್, ಹೊಸ ವರ್ಷದ ಪ್ರಯುಕ್ತ ವಿಶೇಷ ರೈಲುಗಳನ್ನು ಪ್ರಾರಂಭಿಸಲಿರುವ ಭಾರತೀಯ ರೈಲ್ವೆ; ಮಾಹಿತಿ ಇಲ್ಲಿದೆ | Here is good news for passengers Indian Railways will run special trains on Christmas and new year details is here
ಪ್ರಾತಿನಿಧಿಕ ಚಿತ್ರ ಭಾರತೀಯ ರೈಲ್ವೆಯು ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷದ ಸಮಯದಲ್ಲಿ ಜನದಟ್ಟಣೆ ಹೆಚ್ಚಬಹುದಾದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ವಿಶೇಷ ರೈಲುಗಳನ್ನು ನಡೆಸುವುದಾಗಿ ಘೋಷಿಸಿದೆ. ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ನಲ್ಲಿ ಹೆಚ್ಚುವರಿ ರೈಲುಗಳ ವಿವರವಾದ ವೇಳಾಪಟ್ಟಿ ಮತ್ತು ರೈಲುಗಳ ಸಮಯದ ಮಾಹಿತಿಯನ್ನು ಒದಗಿಸಲಾಗಿದ್ದು, ಪ್ರಯಾಣಿಕರು ಪರಿಶೀಲಿಸಬಹುದಾಗಿದೆ. ಭಾರತೀಯ ರೈಲ್ವೇ ತನ್ನ ಅಧಿಕೃತ ಪ್ರಕಟಣೆಯಲ್ಲಿ “ವಿಶೇಷ ರೈಲುಗಳ ವಿವರವಾದ ಸಮಯಕ್ಕಾಗಿ ದಯವಿಟ್ಟು www.enquiry.indianrail.gov.in ಗೆ ಭೇಟಿ ನೀಡಿ ಅಥವಾ NTES ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ” ಎಂದು […]
-
ಫೀಲ್ಡಿಂಗ್ ವೇಳೆ ಹೆಲ್ಮೆಟ್ಗೆ ಬಡಿದ ಚೆಂಡು -ವಿಂಡೀಸ್ ಯುವ ಆಟಗಾರ ಆಸ್ಪತ್ರೆ ಪಾಲು
ವೆಸ್ಟ್ ಇಂಡೀಸ್ ತಂಡ ಸದ್ಯ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡುತ್ತಿದೆ. ಟೆಸ್ಟ್ ಪಂದ್ಯ ಆರಂಭ ದಿನದಂದೇ ಅತಿಥೇಯ ವೆಸ್ ಇಂಡೀಸ್ ತಂಡಕ್ಕೆ ಸಂಕಷ್ಟವನ್ನು ತಂದಿದ್ದು, ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪರ ಪಾದಾರ್ಪಣೆ ಮಾಡಿದ್ದ ಜೆರೆಮಿ ಸೊಲೊಜಾನೊಗೆ ದಾಖಲಾಗಿದ್ದಾರೆ. ಪಂದ್ಯದಲ್ಲಿ ಟಾಸ್ ಗೆದ್ದು ಶ್ರೀಲಂಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಈ ವೇಳೆ ಸಿಲ್ಲಿ ಪಾಯಿಂಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಜೆರೆಮಿಗೆ ಬ್ಯಾಟ್ಸ್ಮನ್ ಹೊಡೆದ ಚೆಂಡು ಬಡಿದಿದೆ. ಹೆಲ್ಮೆಟ್ ಧರಿಸಿದ್ದರೂ ಕೂಡ ಚೆಂಡು ವೇಗವಾಗಿ ಬಂದು ಹೆಲ್ಮೆಟ್ ಗ್ರಿಲ್ಗೆ […]
-
ನಕಲಿ ಛಾಪಾ ಕಾಗದ ಮಾರುತ್ತಿದ್ದ ಆರೋಪಿಗಳ ಬಂಧನ; ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದಲೇ ಡೀಲ್ | SIT officers arrest man who involved in Stamp paper selling case in Bengaluru
SIT officers arrest man who involved in Stamp papers selling case in Bengaluru ಬೆಂಗಳೂರು: ನಕಲಿ ಛಾಪಾ ಕಾಗದ ಮಾರುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊಸ ತಿರುವು ಸಿಕ್ಕಿದೆ. ವಿಧಾನಸೌಧದಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ನಕಲಿ ಛಾಪಾ ಕಾಗದ (stamp papers) ದಂಧೆ ನಡೆಸುತ್ತಿದ್ದ ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ಬಾಬು ಎಂಬ ವ್ಯಕ್ತಿಯನ್ನು ಸದ್ಯ ಎಸ್ಐಟಿ (SIT) ಆಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಧಾನಪರಿಷತ್ನಲ್ಲಿ […]
-
PRK ಪ್ರೊಡಕ್ಷನ್ನಲ್ಲಿ ರೋರಿಂಗ್ ಸ್ಟಾರ್; ಮದಗಜ ಶ್ರೀಮುರಳಿ ಹೇಳಿದ್ದೇನು?
ಮದಗಜ.. ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹುನಿರೀಕ್ಷಿತ ಸಿನಿಮಾ.. ಟೈಟಲ್ ಟ್ರ್ಯಾಕ್ ಹಾಗೂ ಜಬರ್ದಸ್ತ್ ಟ್ರೈಲರ್ನಿಂದ ಸಖತ್ ಸದ್ದು ಮಾಡ್ತಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ. ಮದಗಜ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ಒಂದು ಕುತೂಹಲದ ವಿಚಾರವನ್ನ ಹೊರ ಬಿಟ್ಟಿದ್ದಾರೆ ರೋರಿಂಗ್ ಸ್ಟಾರ್. ಹೊಸ ಪ್ರತಿಭೆಗಳಿಗೆ ಅದ್ಭುತ ವೇದಿಕೆಯನ್ನ ಕಲ್ಪಿಸಲು ಅಪ್ಪು ಸೃಷ್ಟಿ ಮಾಡಿರುವ ಪಿ.ಆರ್.ಕೆಯಲ್ಲಿ ರೋರಿಂಗ್ ಸ್ಟಾರ್ ಮಿಂಚು ಬರಲಿದೆ. ಈ ಬಗ್ಗೆ ಒಂದು ಸ್ಪೆಷಲ್ ಸ್ಟೋರಿ ನಿಮಗಾಗಿ. ಎಲ್ಲರೂ ಅಪ್ಪನಂತೆ ಆಗಬೇಕು ಅನ್ಕೋಂಡ್ರೆ ಪವರ್ ಸ್ಟಾರ್ ಪುನೀತ್ […]
-
ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೆ ಯತ್ನಿಸಿದ ಪತ್ನಿ, ಪತ್ನಿ-ಪ್ರಿಯಕರ ಅರೆಸ್ಟ್ | Wife and his boyfriend arrested for trying to kill husband in yadgir
ಪ್ರಾತಿನಿಧಿಕ ಚಿತ್ರ ಯಾದಗಿರಿ: ಪ್ರಿಯಕರನ ಜೊತೆ ಸೇರಿ ಹೆಂಡತಿ ಗಂಡನನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ನವೆಂಬರ್ 18ರ ಮಧ್ಯರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೂವಿನಹಳ್ಳಿಯಲ್ಲಿ ಚಂದ್ರಕಲಾ ಎಂಬ ಮಹಿಳೆ ಪ್ರಿಯತಮ ಬಸನಗೌಡ ಜೊತೆ ಸೇರಿ ತನ್ನ ಗಂಡ ವಿಶ್ವನಾಥರೆಡ್ಡಿ ನಿದ್ದೆ ಮಾತ್ರೆ ಕೊಟ್ಟು ಕೊಲೆಗೆ ಯತ್ನಿಸಿದ್ದಾಳೆ. ಮೈದುನನ ಜೊತೆ ಇರುವ ಅನೈತಿಕ ಸಂಬಂಧ ಮುಚ್ಚಿ ಹಾಕಲು ಗಂಡನಿಗೆ ದೇವರ ಪ್ರಸಾದವೆಂದು ನೀರಿನಲ್ಲಿ ನಿದ್ದೆ […]
-
ಕೋಡಿ ಬಿದ್ದ ಕೆರೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಓಮಿನಿ ಕಾರು
ದಾವಣಗೆರೆ: ಜಿಲ್ಲೆಯಲ್ಲಿ ಭರ್ಜರಿ ಮಳೆ ಹಿನ್ನಲೆ ಕೆರೆ ಕೋಡಿ ಬಿದ್ದು ನೀರಿನ ರಭಸಕ್ಕೆ ಒಮಿನಿ ಕಾರು ಕೊಚ್ಚಿ ಹೋದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಗ್ರಾಮದಲ್ಲಿ ನಡೆದಿದೆ. ವಡ್ನಾಳ್ ಕೆರೆಗೆ ಕೋಡಿ ಬಿದ್ದನ್ನ ನೋಡಲು ಓಮಿನಿ ವಾಹನದಲ್ಲಿ ತೆರಳಿದ್ದ ಮಂಜಪ್ಪ ಎಂಬುವವರು ಹರಿಯುವ ನೀರಿನಲ್ಲಿ ವಾಹನ ತಿರುಗಿಸುವಾಗ ವಾಹನ ನಿಯಂತ್ರಣ ತಪ್ಪಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ವಾಹನ ಉರುಳಿ ಬಿದ್ದ ಪರಿಣಾಮ ಕಿಟಕಿ ಗ್ಲಾಸ್ ಒಡೆದಿದ್ದು ಚಾಲಕ ಪಾರಾಗಿದ್ದಾನೆ. ಬಳಿಕ ಮರದ ದಿಮ್ಮಿಗೆ ವಾಹನ ಡಿಕ್ಕಿ […]
-
ಸಂಕಷ್ಟದಲ್ಲಿದ್ದ ಅಲ್ಲು ಅರ್ಜುನ್ ಸಹಾಯಕ್ಕೆ ನಿಂತ ‘ಕೆಜಿಎಫ್ 2’ ನಟಿ ರವೀನಾ ಟಂಡನ್ ಕುಟುಂಬ | Raveena Tandon Husband Anil Thadani to distribute Pushpa Movie In Hindi
ಅಲ್ಲು ಅರ್ಜುನ್-ರವೀನಾ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ ಸಿನಿಮಾ (Pushpa Movie) ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಡಬ್ ಆಗಿ ತೆರೆಕಾಣುತ್ತಿದೆ. ಸಿನಿಮಾ ರಿಲೀಸ್ ಆಗೋಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. ಅದಕ್ಕೂ ಮೊದಲು ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿತ್ತು. ಹಿಂದಿ ಅವತರಣಿಕೆ ರಿಲೀಸ್ ಮಾಡೋಕೆ ಕೆಲ ಅಡಚಣೆಗಳು ಉಂಟಾಗಿದ್ದವು. ಆದರೆ, ಈ ಸಮಸ್ಯೆಗಳು ಈಗ ಪರಿಹಾರವಾಗಿದೆ. ಗೋಲ್ಡ್ಮೈನ್ ಫಿಲ್ಮ್ಸ್ […]
-
SDPI ಸೇರೋರು ಜೈಲಿಗೆ ಹೋಗೋಕು, ಖಬರಿಸ್ತಾನ ಸೇರೋಕೂ ಸಿದ್ಧರಿರಬೇಕು-ಅಬೂಬಕ್ಕರ್ ಕುಳಾಯಿ
ಮಂಗಳೂರು: ನಗರದ SDPI ಮುಖಂಡ ಅಬೂಬಕ್ಕರ್ ಕುಳಾಯಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರತರವಾದ ವಾಗ್ದಾಳಿ ನಡೆಸಿದ್ದು ನಾವು ಮಸಲ್ ಪವರ್ ಯೂಸ್ ಮಾಡೋಕು ರೆಡಿ ಇದ್ದೇವೆ ಎಂದು ಪ್ರಚೋದನಾಕಾರಿ ಹೇಳಿಕೆ ಕೊಟ್ಟಿದ್ದಾರೆ. ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಎಸ್ಡಿಪಿಐಗೆ ಸೇರೋದಾದ್ರೆ ಆಸ್ಪತ್ರೆಯಲ್ಲಿ ಮಲಗೋಕು, ಜೈಲಿಗೆ ಹೋಗೋಕು, ಖಬರಿಸ್ತಾನ ಸೇರೋಕೂ ಸಿದ್ಧರಿರಬೇಕು ಎಂದು ನಮ್ಮ ಮುಂಖಂಡರು ಬಹಿರಂಗವಾಗಿ ಹೇಳಿದ್ದಾರೆ. ಇದನ್ನೂ ಓದಿ:‘ಕಾಂಗ್ರೆಸ್ಸಿಗರನ್ನು ಸ್ಮಶಾನಕ್ಕೆ ಕಳಿಸೋಕೂ ಗೊತ್ತಿದೆ’ ಕೈ ನಾಯಕರಿಗೆ ಎಚ್ಚರಿಕೆ ನೀಡಿದ SDPI ಮುಖಂಡ ನಮ್ಮ ಪಕ್ಷದ ಬೆಳವಣಿಗೆಯನ್ನು […]
-
ಖ್ಯಾತ ನಿರ್ದೇಶಕನ ಕಚೇರಿ ಮುಂದೆ ಕಾಣಿಸಿಕೊಂಡ ರಶ್ಮಿಕಾ; ಬಾಲಿವುಡ್ನಲ್ಲಿ 3ನೇ ಚಿತ್ರ ಯಾರ ಜೊತೆ? | Mission Majnu actress Rashmika Mandanna spotted outside Anand L Rai office
ರಶ್ಮಿಕಾ ಮಂದಣ್ಣ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿ ಉಳಿದಿಲ್ಲ. ಬಾಲಿವುಡ್ ಸಿನಿಮಾಗಳಲ್ಲೂ ಅವರಿಗೆ ಬೇಡಿಕೆ ಹೆಚ್ಚಿದೆ. ಈಗಾಗಲೇ ಅಮಿತಾಭ್ ಬಚ್ಚನ್, ಸಿದ್ದಾರ್ಥ್ ಮಲ್ಹೋತ್ರಾ ಮುಂತಾದ ಸ್ಟಾರ್ ಕಲಾವಿದರ ಜೊತೆ ನಟಿಸುವ ಅವಕಾಶ ರಶ್ಮಿಕಾಗೆ ಸಿಕ್ಕಿದೆ. ಅಮಿತಾಭ್ ಜೊತೆ ‘ಗುಡ್ ಬೈ’ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ‘ಮಿಷನ್ ಮಜ್ನು’ (Mission Majnu) ಸಿನಿಮಾದಲ್ಲಿ ಅವರು ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾಗಳ ಬಿಡುಗಡೆಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ. ಅಷ್ಟರಲ್ಲಾಗಲೇ ಬಾಲಿವುಡ್ನಲ್ಲಿ ರಶ್ಮಿಕಾ 3ನೇ […]
-
ಸಿಎಂ ಬೊಮ್ಮಾಯಿ ನಿಮ್ಮ ಹನಿಮೂನ್ ಕಾಲ ಮುಗಿದಿದೆ; ಜನಸ್ವರಾಜ್ ಯಾತ್ರೆ ಅಲ್ಲ, ಇದು ಜನಬರ್ಬಾದ್ ಯಾತ್ರೆ- ಸಿದ್ದರಾಮಯ್ಯ ಟ್ವೀಟ್ | Siddaramaiah expressed outraged on twitter that CM Basavaraj Bommai honeymoon is over
ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರು: ಅಕಾಲಿಕ ಮಳೆಯಿಂದ ಅರ್ಧ ರಾಜ್ಯ ತತ್ತರಿಸಿಹೋಗಿದೆ. ಕೈಗೆ ಬಂದ ಬೆಳೆ ಬಾಯಿಗೆ ಬರದೆ ಗದ್ದೆಯಲ್ಲಿ ಕೊಳೆಯುತ್ತಿದೆ. ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕವನ್ನು ಪ್ರದರ್ಶನ ಮಾಡುತ್ತಿದೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜನಸ್ವರಾಜ್ ಯಾತ್ರೆ ಅಲ್ಲ, ಇದು ಜನಬರ್ಬಾದ್ ಯಾತ್ರೆ ಅಂತ ಟ್ವೀಟ್ ಮೂಲಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆ, ನೆರೆಗೆ ಸಿಲುಕಿ 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 10 ಸಾವಿರ […]
-
ಕನ್ನಡ ಕಿರುತೆರೆಯಲ್ಲೇ 1st ಟೈಮ್ ವಿಭಿನ್ನ ಸಂದರ್ಶನ; ಹೇಗಿತ್ತು? ಹೇಗಾಯ್ತು? ‘ಸಖತ್’ ಕೋರ್ಟ್ ಡ್ರಾಮಾ
ಏನಾದ್ರು ಹೊಸದನ್ನ ಮಾಡಬೇಕು, ಹೊಸದನ್ನ ಸಿರಿಗನ್ನಡ ವೀಕ್ಷಕರಿಗೆ ನೀಡಬೇಕು ಅನ್ನೋ ಗುರಿಯಿಂದ ನಿಮ್ಮ ನ್ಯೂಸ್ ಫಸ್ಟ್ ಕನ್ನಡ ಬಳಗ ಸದಾ ಕಾರ್ಯಶೀಲವಾಗಿರುತ್ತದೆ. ಹೊಸದನ್ನ ಕನ್ನಡಿಗರಿಗೆ ಅರ್ಪಿಸುವ ಯೋಚನೆ ಯೋಜನೆಯಲ್ಲಿದ್ದಾಗಲೇ ಹೊಳೆದ್ದಿದ್ದು ‘‘ಸಖತ್’’ ಕೋರ್ಟ್ ಸೀನ್ ಕನ್ಸೆಪ್ಟ್. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 39ನೇ ಸಿನಿಮಾ ಸಖತ್. ಚಮಕ್ ಸಿನಿಮಾ ಮಾಡಿ ಕನ್ನಡಿಗರ ಮನ ಗೆದ್ದಿದ್ದ ಗೋಲ್ಡನ್ ಗಣಿ ಆಂಡ್ ಸಿಂಪಲ್ ಸುನಿ ಸಖತ್ ಸಿನಿಮಾ ಮಾಡಿದೆ. ಅಕ್ಕಿ ಅನ್ನ ಆಗಿದಿಯೋ ಇಲ್ವೋ ಅನ್ನೋದನ್ನ ಒಂದು ಅಗಳು ಅನ್ನದಿಂದಲೇ […]
-
ರಾಜಸ್ಥಾನ ಸಂಪುಟ ಪುನರ್ರಚನೆ: ನನಗೀಗ ತುಂಬ ಸಂತೋಷವಾಗಿದೆ ಎಂದ ಸಚಿನ್ ಪೈಲಟ್ | Congress leader Sachin Pilot said that he was glad about Cabinet rejig in Rajasthan
ಸಚಿನ್ ಪೈಲಟ್ ಜೈಪುರ: ರಾಜಸ್ಥಾನದಲ್ಲಿ ಇಂದು ಸಂಪುಟ ಮರುರಚನೆ (Rajasthan Cabinet Rejig ) ಯಾಗುತ್ತಿದ್ದು, 15 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ಅದರಲ್ಲೂ 12 ಹೊಸಬರೇ ಆಗಿದ್ದು, ಐವರು ಸಚಿನ್ ಪೈಲಟ್ ಬಣದವರಾಗಿದ್ದಾರೆ. ರಾಜಸ್ಥಾನ ಕ್ಯಾಬಿನೆಟ್ ಮರುರಚನೆ ವಿಳಂಬವಾದರೂ ಅಂತಿಮವಾಗಿ ಇಂದು ವಿಸ್ತರಣೆಯಾಗುತ್ತಿರುವ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸಂತೋಷ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಸಂಪುಟ ವಿಸ್ತರಣೆ ಬಗ್ಗೆ ನಾನು ವಿಷಯ ಪ್ರಸ್ತಾಪ ಮಾಡಿದ್ದೆ. ಅದನ್ನೀಗ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ಸರ್ಕಾರ ಮಾನ್ಯ […]
-
‘ಕಾಂಗ್ರೆಸ್ಸಿಗರನ್ನು ಸ್ಮಶಾನಕ್ಕೆ ಕಳಿಸೋಕೂ ಗೊತ್ತಿದೆ’ ಕೈ ನಾಯಕರಿಗೆ ಎಚ್ಚರಿಕೆ ನೀಡಿದ SDPI ಮುಖಂಡ
ಮಂಗಳೂರು: ನಿಮ್ಮ ದಬ್ಬಾಳಿಕೆ, ದೌರ್ಜನ್ಯಕ್ಕೆ ನಾವು ಬಗ್ಗುವವರಲ್ಲ ನಿಮ್ಮನ್ನ ಆಸ್ಪತ್ರೆಗೆ ಕಳುಹಿಸೋಕೂ ಗೊತ್ತಿದೆ, ಖಬರಿಸ್ತಾನಕ್ಕೆ ಕಳುಹಿಸೋಕು ಗೊತ್ತಿದೆ ಎಂದು ಎಸ್ಡಿಪಿಐ(Social Democratic Party of India) ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಕಾಂಗ್ರೆಸ್ಸಿಗರಿಗೆ ಬಹಿರಂಗ ಬೆದರಿಕೆ ಒಡ್ಡಿದ್ದಾರೆ. ಕಾಂಗ್ರೆಸ್ ಪಕ್ಷದವರು ನಿರಾಶ ಭಾವನೆಗೆ ಹೋಗಿರೋದನ್ನ ಗಮನಿಸ್ತಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ಮಂಗಳೂರು ಕ್ಷೇತ್ರದಲ್ಲಿ ನಮ್ಮ ಎಸ್ಡಿಪಿಐ ಪ್ರತಿನಿಧಿಗಳು ಬೆಳೆಯುತ್ತಿದ್ದಾರೆ. ಇದನ್ನ ಕಂಡು ಅವರಿಗೆ ಸಹಿಸಲಿಕ್ಕೆ ಸಾಧ್ಯವಾಗುತ್ತಿಲ್ಲ ಯಾರೋ ಕಾಂಜಿಪೀಂಜಿ ಗಾಂಜಾದವರನ್ನ ಬಿಟ್ಟು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸ್ತಿದ್ದಾರೆ […]